ಕೋವಿಡ್ ಕಾಲದ ಊರಿನ ಕಥೆಯಿದು..! ಮನೆಯೇ ಮಂತ್ರಾಲಯ!
Team Udayavani, Jun 27, 2020, 11:30 AM IST
ಸಾಂದರ್ಭಿಕ ಚಿತ್ರ
ನಮಗೆಲ್ಲರಿಗೂ ಮನೆಯೆಂಬುದು ಅದೆಷ್ಟೋ ಸಂಗತಿಗಳ, ಸಂತೋಷಗಳ ನೆನಪಿನ ಬುತ್ತಿಯ ಆಗರ. ಮನೆ ಎಂದರೆ ಹೀಗೆಯೇ ಇರಬೇಕೆಂದೇನಿಲ್ಲ. ಆದರೂ ಇರುವ ಹಾಗೆಯೇ ಇದ್ದರೆ ಚೆನ್ನ ಎಂಬುದು ನನ್ನ ಅಭಿಪ್ರಾಯ. ಹಳ್ಳಿಗಳಲ್ಲಾದರೆ ಮನೆಯ ಹೊರಗಡೆ ಅಂಗಳ, ಜಗಲಿ, ನಡುಮನೆ, ಚೌಕಿ, ಅಡುಗೆ ಮನೆ, ಬಚ್ಚಲು ಮನೆ, ಹಿತ್ತಲು ಹಾಗೆ ಮೇಲು ಮಹಡಿಯೂ ಕಾಣಸಿಗುತ್ತವೆ. ಆದರೆ ಪೇಟೆಗಳಲ್ಲಿ ಜಾಗ ಅಭಾವದ ಕಾರಣ ಒಂದು ಹಾಲ್, ಕಿಚನ್ , ಬಾತ್ ರೂಮ್ಗೆ ಮನೆ ಮುಕ್ತಾಯವಾಗಿರುತ್ತದೆ. ಮನೆಯು ನಮಗೆ ಪ್ರತಿದಿನವೂ ಹೊಸತನದ ಅನುಭವ ನೀಡುತ್ತದೆ. ಬಹಳಷ್ಟು ಜನ, ಯಾವುದೋ ಕಾರಣಗಳಿಂದ ವಿದ್ಯಾಭ್ಯಾಸ, ಉದ್ಯೋಗ ಅಥವಾ ಬೇರೆ ಕೆಲಸಕ್ಕಾಗಿಯೂ ಮನೆ ಬಿಟ್ಟು ಹೊರಗಡೆ ಸಿಟಿಯಲ್ಲಿ ಬಾಡಿಗೆ ಮನೆ ಪಡೆದು ಅಥವಾ ಪಿಜಿಯಲ್ಲಿ ವಾಸಿಸಿರುತ್ತಾರೆ.
ಹುಟ್ಟಿ ಬೆಳೆದ ಮನೆಗೂ ಸಿಟಿ ಮನೆಗೂ ಏನೂ ವ್ಯತ್ಯಾಸವಿಲ್ಲ. ಎರಡೂ ಸಹ ಇಟ್ಟಿಗೆ, ಸಿಮೆಂಟ್, ಮರಳನಿಂದಲೇ ನಿರ್ಮಿಸಲಾಗಿದೆ. ಬಹುಶಃ ಹಳ್ಳಿಯದು ಹಳೆಯ ಕಾಲದ ಮನೆ ಎಂದಷ್ಟೇ ಭಾವಿಸಿದರೆ ತಪ್ಪಾಗುತ್ತದೆ. ನಾವು ಹುಟ್ಟಿ ಬೆಳೆದ ಮನೆಯಲ್ಲಿ ನಮ್ಮ ನೆನಪುಗಳೇ ಕೂಡಿವೆ. ಪ್ರತಿ ಜಾಗದಲ್ಲೂ ನಮ್ಮ ನೆರಳಿದೆ. ಹೆತ್ತ ತಾಯಿಯ ಪ್ರೀತಿಯಿದೆ, ಅಪ್ಪನ ಮಮಕಾರವಿದೆ, ಅಜ್ಜನ ಬುದ್ಧಿ ಮಾತಿದೆ, ಅಜ್ಜಿಯ ಆಶೀರ್ವಾದವಿದೆ, ಅಕ್ಕನ ಅಕ್ಕರೆಯಿದೆ, ಅಣ್ಣನ ಮುದ್ದಾಟವಿದೆ, ತಮ್ಮ-ತಂಗಿಯರ ಹೊಡೆದಾಟವಿದೆ.
ಹೀಗೆ ಮನೆಯೂ ತುಂಬಿ ಮನವೂ ತುಂಬಿದ್ದ ನೆನಪಿನ ಬುತ್ತಿಯಿದೆ. ಅಂಗಳದಲ್ಲಿ ಚಿಣ್ಣಿದಾಂಡು ಗೋಲಿಯ ಗುರುತಿದೆ. ಹಿತ್ತಲಿನಲ್ಲಿ ಪೇರಳೆ, ಹಲಸು, ಮಾವಿನ ಸಿಹಿಯಿದೆ, ಮುಂದುಗಡೆ ದಾಸವಾಳ ಮಲ್ಲಿಗೆ ಹೂವಿನ ಗಂಧವಿದೆ, ಮನೆಯ ಜಗಲಿಯಲ್ಲಿ ಪಗಡೆ ಚೆನ್ನೆಮಣೆಗಳ ಆಟವಿದೆ, ಕೊಟ್ಟಿಗೆಯಲ್ಲಿ ಗೌರಿ, ಗಂಗೆಯರ(ಹಸುಗಳ) ಕರುಗಳಿವೆ. ಅಡುಗೆ ಮನೆಯಲ್ಲಿ ಅಮ್ಮನ ಕೈ ರುಚಿ ಯಿದೆ, ಮೆತ್ತಿಯ ಜಾಡಿಯಲ್ಲಿ ಮಾವಿನ ಉಪ್ಪಿನಕಾಯಿ ಇದೆ, ತೋಟದಲ್ಲಿ ಅಜ್ಜ- ಅಪ್ಪಂದಿರ ಬೆವರಿದೆ. ಹೀಗೆ ಮನೆಯನ್ನು ಹತ್ತು ಹಲವು ರೀತಿಯಲ್ಲಿ ವರ್ಣಿಸಿದರೂ ಸಾಲದು. ಇದೊಂದು ಸುಖ-ದುಃಖ ನೋವು
ನಲಿವುಗಳ ಸಮ್ಮಿಶ್ರವಾದ ಒಂದು ಸಮೂಹವಿರುವ ಜಾಗವಾಗಿದೆ. ನಾನು ಸಹ ವಿದ್ಯಾ ಭ್ಯಾಸಕ್ಕಾಗಿ ಮನೆಯಿಂದ ಹೊರಗಡೆ ಇರುವೆ ಹಾಗಾಗಿ ಮನೆಗೆ
ಹೋದಾಗ ಆಗುವ ಸಂತೋಷಕ್ಕೆ ಸರಿ ಸಾಟಿ ಇಲ್ಲವೆನಿಸುತ್ತದೆ.
ವಿಜೇತ್ ಮಳಲಗದ್ದೆ ಶಿವಮೊಗ್ಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು