ಮತ್ತೆ ಹುಟ್ಟಲಿ ಸೂರ್ಯ ವಿದ್ಯಾರ್ಥಿಗಳ ಬಾಳಲಿ…


Team Udayavani, Jun 21, 2021, 11:19 AM IST

ಮತ್ತೆ ಹುಟ್ಟಲಿ ಸೂರ್ಯ ವಿದ್ಯಾರ್ಥಿಗಳ ಬಾಳಲಿ…

ಇನ್ನೇನು ಈ ವಾರ್ಷಿಕ ಪರೀಕ್ಷೆಯೊಂದು ಮುಗಿದರೆ ರಜೆಗೆ ಅಜ್ಜಿ ತೋಟಕ್ಕೋ, ಮಾವನ ಊರಿಗೋ, ಚಿಕ್ಕಮ್ಮನ ಮನೆಗೋ ಹೋಗಬೇಕು ಅನ್ನೋ ಖುಷಿಯಲ್ಲಿದ್ದ ಪ್ರಾಥಮಿಕ ಶಾಲೆ ಮಕ್ಕಳು, ಅಂತಿಮ ಪರೀಕ್ಷೆಯೊಂದು ಮುಗಿದರೆ ನಾವಿನ್ನು ಕಾಲೇಜಿನ ಯುವಕರು ಎಂಬ ಹುಮ್ಮಸ್ಸಿನಲ್ಲಿದ್ದ ಎಸೆಸೆಲ್ಸಿ ವಿದ್ಯಾರ್ಥಿಗಳು, ವರ್ಷವಿಡೀ ಓದಿ ತಲೆಯಲ್ಲಿ ತುಂಬಿಸಿಕೊಂಡಿದ್ದನ್ನು ಒಂದೊಂದಾಗಿ ಉತ್ತರ ಪತ್ರಿಕೆಯಲ್ಲಿ ಬಿಡಿಸಿಟ್ಟರೇ ಸಾಕು ಅನ್ನೋ ಆತಂಕದಲ್ಲಿದ್ದ ಪಿಯುಸಿ ವಿದ್ಯಾರ್ಥಿಗಳು, ಸಾಂಸ್ಕೃತಿಕ ಚಟುವಟಿಕೆಗಳು, ಅಸೈನ್‌ಮೆಂಟ್‌ಗಳಲ್ಲಿ ವ್ಯಸ್ತರಾಗಿದ್ದ ಪದವಿ ವಿದ್ಯಾರ್ಥಿಗಳು, ಉನ್ನತ ವ್ಯಾಸಂಗದ ಉನ್ನತ ಕನಸುಗಳನ್ನು ಹೊತ್ತ ಕಣ್ಣುಗಳು ಹೀಗೇ. ಎಲ್ಲರೂ ತಮ್ಮದೇ ಖುಷಿ, ಆತಂಕ, ಹುಮ್ಮಸ್ಸು, ಕನಸುಗಳೊಡನೆ ನೂರೆಂಟು ಯೋಜನೆಗಳನ್ನು ಹಾಕಿಕೊಂಡು ಓಡುತ್ತಿರುವಾಗ ಕೊರೊನಾ ಹಾವಳಿ ಶುರುವಾಯಿತು.

ವೈರಸ್‌ನೊಂದಿಗೆ ಹೋರಾಡಲು ಲಾಕ್‌ಡೌನ್‌ ಒಂದೇ ಅಸ್ತ್ರ ಎಂದಾಗ ಎಲ್ಲ  ಕ್ಷೇತ್ರಗಳು ಮಕಾಡೆ ಮಲಗಿ ಬಿಟ್ಟವು. ಶಿಕ್ಷಣ ಕ್ಷೇತ್ರದಲ್ಲಂತೂ ಸಲ್ಲದ ಗೊಂದಲ, ಆತಂಕಗಳನ್ನು ಸೃಷ್ಟಿಸಿತು. ಮುಗಿಯದ ಪಾಠಗಳು, ನಡೆಯದ ಪರೀಕ್ಷೆಗಳು ಎಲ್ಲವೂ ವಿದ್ಯಾರ್ಥಿಗಳ ನೆಮ್ಮದಿ ಕೆಡಿಸಿದವು. ಆದರೂ ಇವತ್ತೋ ನಾಳೆಯೋ ಮತ್ತೆ ಎಲ್ಲವೂ ಮೊದಲಿನಂತಾದೀತು. ಮತ್ತೆ ಸೂರ್ಯ ಹುಟ್ಟಿಯಾನು ಎಂಬ ಆಶಾದಾಯಕ ಭರವಸೆ ಇತ್ತು. ಆದರೆ ಆ ಆಸೆ ಈಡೇರಲು ಎಂಟು – ಒಂಬತ್ತು ತಿಂಗಳೇಬೇಕಾಯಿತು. ಅಂತೂ  ಶಾಲೆಗಳೆಲ್ಲ ತೆರೆದು ರಸ್ತೆ ಮೇಲೆ ಆ್ಯಂಬುಲೆನ್ಸ್‌ಗಳ ಬದಲು ಶಾಲಾ ವಾಹನಗಳ ಓಡಾಟ ಆರಂಭವಾಗಿತ್ತು. ಬಿಕೋ ಎನ್ನುತ್ತಿದ್ದ ಕ್ಯಾಂಪಸ್‌ಗಳೆಲ್ಲ ಮತ್ತೆ ಬಣ್ಣ-ಬಣ್ಣದಿಂದ ತುಂಬಿ ತುಳುಕತೊಡಗಿತ್ತು. ಎಲ್ಲವೂ ಸರಾಗವಾಗಿ ಸಾಗುತ್ತಿದೆ ಎನ್ನುವಾಗ, ಕೊರೊನಾ ಎರಡನೇ ಅಲೆ ಬಂತು. ಮತ್ತೆ ಶುರುವಾಯಿತು ಆನ್‌ಲೈನ್‌ ಕ್ಲಾಸ್‌ಗಳು. ವಿದ್ಯಾರ್ಥಿಗಳ ಅವನತಿಗೆ ಕಾರಣ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಮೊಬೈಲ್, ಇಂಟರ್‌ನೆಟ್‌, ಕಂಪ್ಯೂಟರ್‌ ಇಂದು ಕಲಿಕೆಯ ಸಾಧನಗಳಾಗಿವೆ. ವಿದ್ಯಾರ್ಥಿಗಳ ಗೊಂದಲಗಳನ್ನು ದೂರಮಾಡಲು, ಅವರ ಆತ್ಮವಿಶ್ವಾಸ ಕುಂದದಂತೆ ನೋಡಿಕೊಳ್ಳಲು ಶಿಕ್ಷಣ ಸಂಸ್ಥೆಗಳು, ಶಿಕ್ಷಕರು ಆನ್‌ಲೈನ್‌ ಎಂಬ ಅಸ್ತ್ರ  ಬಳಸಿ ಪಾಠಗಳನ್ನು ನಡೆಸಿದ್ದರಾದರೂ  ಅವು ಎಲ್ಲ ವಿದ್ಯಾರ್ಥಿಗಳನ್ನು ತಲುಪುವಲ್ಲಿ ಯಶಸ್ವಿಯಾಗುತ್ತಿಲ್ಲ ಎಂಬುದು ವಿಷಾದಕರ ಸಂಗತಿ. ವಾಹನಗಳೇ ಹೋಗಲಾರದ ಅದೆಷ್ಟೊ ಗುಡ್ಡಗಾಡು ಪ್ರದೇಶದ ಹಳ್ಳಿಗಳಿಗೆ ನೆಟ್‌ವರ್ಕ್‌ ಹೋಗುವುದು ಕಷ್ಟ ಸಾಧ್ಯವೇ…! ಪರೀಕ್ಷೆ ಶುಲ್ಕ ಕಟ್ಟಲೂ ಪರದಾಡುವ ವಿದ್ಯಾರ್ಥಿಗಳಿಗೆ ಮೊಬೈಲ್, ಲ್ಯಾಪ್‌ಟಾಪ್‌ ಸೌಲಭ್ಯ ಸಿಗುವುದಾದರೂ ಹೇಗೆ? ಹೋಗಲಿ ಎಲ್ಲ ಸೌಲಭ್ಯ ಹೊಂದಿದ ವಿದ್ಯಾರ್ಥಿಗಳಿಗಾದರೂ ಪಾಠ ತಲುಪುತ್ತಿದೆಯಾ? ಮಕ್ಕಳ ಪರಿಸ್ಥಿತಿ ಮತ್ತು ಮನಸ್ಥಿತಿಗೆ ಇಳಿದು ಪಾಠ ಮಾಡುವ ಅವಕಾಶವನ್ನು ಕಲ್ಪಿಸಿಕೊಡುವ ಶಕ್ತಿ ಗೂಗಲ್‌ ಮೀಟ್‌ಗಾಗಲಿ, ಝೂಮ್‌ ಆ್ಯಪ್‌ಗಾಗಲಿ ಇದೆಯೇ?

ಆನ್‌ಲೈನ್‌ ಕ್ಲಾಸ್‌ಗಳ ಗೊಂದಲ ಒಂದೆಡೆಯಾದರೆ, ಪರೀಕ್ಷೆಗಳ ಕುರಿತು ಸಿಗಲಾರದ ಸೂಕ್ತ ಮಾಹಿತಿ ಇನ್ನೊಂದೆಡೆ. ಇನ್ನೂ ಪ್ರಾಥಮಿಕ ಶಾಲೆ ಮಕ್ಕಳ ಕಥೆಯೇ ಬೇರೆ. ಕೆಲವು ಪ್ರತಿಷ್ಠಿತ ಖಾಸಗಿ ಶಾಲೆಗಳಂತೂ ಈ ವರ್ಷ ಆನ್‌ಲೈನ್‌  ಕ್ಲಾಸ್‌ಗಳಿಗೆಂದೇ ಲಕ್ಷ-ಲಕ್ಷ ಫೀಸ್‌ ಕಟ್ಟಿಸಿಕೊಂಡಿವೆ. ಇನ್ನೂ ಹಳ್ಳಿಗಾಡಿನಲ್ಲಿರುವ ಮಕ್ಕಳಿಗಂತೂ ಯಾವ ಆನ್‌ಲೈನ್‌  ಕ್ಲಾಸ್‌ ಇಲ್ಲ, ಶಾಲೆಯ ನೆನಪೂ ಇಲ್ಲ. ಕೊರೊನಾ ಎರಡನೇ ಅಲೆ ಮೊದಲಿಗಿಂತಲೂ ಭೀಕರವಾಗಿದ್ದು, ತನ್ನ ಸಂಬಂಧಿಕರ, ಸಮವಯಸ್ಕರ, ಗುರುಗಳ, ಸಹಪಾಠಿಯ ಸಾವಿನ ಸುದ್ದಿ ಮಾನಸಿಕವಾಗಿ ಕುಗ್ಗಿಸುತ್ತಿದೆಯಲ್ಲದೇ ಅವರ ಧೈರ್ಯವನ್ನು ನುಂಗಿಬಿಡುತ್ತಿದೆ. ಇಂತಹ ಮಾನಸಿಕ ಸ್ಥಿತಿ ಅವರನ್ನು ಓದಿಗೆ ಎಂದೂ ಪ್ರೇರೇಪಿಸಲಾರದು. ನಮ್ಮ ಉಳಿವಿಗಾಗಿ ಸರಕಾರ ತೆಗೆದುಕೊಳ್ಳುತ್ತಿರುವ ತುರ್ತುಕ್ರಮಗಳಿಗೆ ಸಹಕಾರ ನೀಡೊಣ. ತಮ್ಮ ಜೀವವನ್ನು ಲೆಕ್ಕಿಸದೇ ಶ್ರಮಿಸುತ್ತಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸೋಣ. ಇಂದಿನ ವಿದ್ಯಾರ್ಥಿಯಾದ ನಾವು ನಮ್ಮ ದೇಶದ ಭವಿಷ್ಯ ಎಂಬುದನ್ನು ಅರಿತು ಜವಾಬ್ದಾರಿಯುತವಾಗಿ ಮುನ್ನಡೆಯೊಣ. ಎಂತಹುದೇ ಸ್ಥಿತಿಯಲ್ಲಿಯೂ ಎಲ್ಲವೂ ಮತ್ತೆ ಸರಿಹೋಗುವುದು, ಸೂರ್ಯ ಮತ್ತೆ ಹುಟ್ಟುತ್ತಾನೆ, ಅವನ ಕಾಂತಿಯ ಕಿರಣ ಮತ್ತೆ ಜಗವನ್ನೆಲ್ಲ ಬೆಳಗುವುದೆಂಬ ಆಶಾ ಕಿರಣವೊಂದು ಬತ್ತದಿರಲಿ… ಮುಂಜಾವಿನ ಶಾಲೆಯ ಪ್ರಾರ್ಥನೆ ಧ್ವನಿಸುವ ವೇಳೆ ಬಹುಬೇಗ ಬರಲಿ. ಏಕಾಂಗಿಯಾದ ಶಾಲಾ ಮೈದಾನ ರಂಗಿನ ಚಿಟ್ಟೆಗಳಿಂದ ಕೂಡಲಿ… ಕಾಲೇಜಿನ ಕಾರಿಡಾರ್‌ಗಳಲ್ಲಿ ಕಲರವ ಹಬ್ಬಲಿ. ಇಷ್ಟು ದಿನ ಸುಮ್ಮನಿದ್ದ ಟೀಚರ್‌ ಕೋಲಿಗೆ ಮತ್ತೆ ಕೆಲಸ ಸಿಗಲಿ.

 

ಸುಷ್ಮಾ ಮ. ಸವಸುದ್ದಿ

ವಿವಿ, ವಿಜಯಪುರ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.