ಮಳೆಗಾಲದ ಮಧುರ ನೆನಪು


Team Udayavani, Jun 6, 2021, 10:00 AM IST

ಮಳೆಗಾಲದ ಮಧುರ ನೆನಪು

ಸಾಂದರ್ಭಿಕ ಚಿತ್ರ

ಗುಡು ಗುಡು ಮುತ್ಯಾ ಬಂದಾನ…!  ಗಡ ಗಡ ಸದ್ದ ಮಾಡ್ಯಾನ..! ಮೋಡದ ಮರೆಯಲ್ಲಿ ನಿಂತಾನ  ರಪ ರಪ ಮಳೆಯನ್ನು ಸುರಿದಾನ..!

ಮಳೆ  ಬಂದಾಗ ನನಗೆ ಮೊದಲು ನೆನಪಿಗೆ ಬರುವ ಹಾಡು ಅಂದರೆ ಇದೆ. ಸಂಜೆ ಶಾಲೆ ಬಿಡುವ ಸಮಯಕ್ಕೆ ಸರಿಯಾಗಿ ಜೋರಾಗಿ ಮಳೆ ಬರುತ್ತಿತ್ತು. ಹಿಂದೆಲ್ಲ ಶಾಲಾ ಬ್ಯಾಗ್‌, ಕೊಡೆ ಏನು ಇರುತ್ತಿರಲ್ಲಿಲ್ಲ. ಬಿತ್ತಲು ತಂದ ಭತ್ತದ ಬೀಜದ ಚೀಲವನ್ನು ಬೀಜ ಬಿತ್ತಿದ ಬಳಿಕ ಖಾಲಿ ಆದದ್ದನ್ನು ನಾವು ಶಾಲೆಯ ಚೀಲವನ್ನಾಗಿ ಬಳಸುತ್ತಿದ್ದೆವು. ಎಂತಹ ಮಳೆ ಬಂದರೂ ಪುಸ್ತಕ ನೆನೆಯದಂತೆ ಜಾಗರೂಕತೆಯಿಂದ ತೆಗೆದುಕೊಂಡು ಹೋಗುವುದು ಸಹ ಒಂದು ಸಾಹಸವಿದ್ದಂತೆ.

ಮಳೆಗಾಲದಲ್ಲಿ ಆಟವಾಡುತ್ತಾ ಗದ್ದೆಯ ಕೆಸರಲ್ಲಿ ಕಾಲು ಹೂತುಹೋಗುತ್ತಿತ್ತು.  ನಮಗೆ ಕೆಸರಿನ ಆಟ ತುಂಬಾ ಇಷ್ಟವಾದ ಕಾರಣ ಗದ್ದೆಗೆ ಹೋದರೆ ಸಮಯ ಕಳೆದದ್ದೇ ತಿಳಿಯುತ್ತಿರಲಿಲ್ಲ. ಎಷ್ಟೋ ಬಾರಿ ಶಾಲಾ ಸಮವಸ್ತ್ರದಲ್ಲಿದ್ದಾಗ ಆಟವಾಡಿ ಪರಸ್ಪರ ಕೆಸರು ನೀರನ್ನು ಎರಚಿಕೊಳ್ಳುತ್ತಿದ್ದೆವು. ಮತ್ತೆ ಮನೆಯವರು ಬೈದಾಗ ತಲೆ ತಗ್ಗಿಸಿ ನಿಂತದ್ದು ಒಂದು ಮಧುರ ನೆನಪೆ. ದಾರಿ ಮಧ್ಯದಲ್ಲಿ ಸಿಗುವ ಪೇರಲ ಹಣ್ಣು, ಮಾವಿನ ಕಾಯಿಗಳನ್ನು ಚೀಲದಲ್ಲಿ ತುಂಬಿಸಿಕೊಂಡು ಅವುಗಳನ್ನು ತಿನ್ನುತ್ತಾ ಸಾಗುತ್ತಿದ್ದೆವು.

ತೆಂಗಿನ ಮರದ ಮಡಲು (ತೆಂಗಿನ ಗರಿ)ಯಲ್ಲಿ ಜರಗುಂಟಿ ಮಾಡಿ ಅದಲ್ಲಿ ಒಬ್ಬನು ಕೂರಿಸಿಕೊಂಡು ಧರ ಧರೆನೆ ಮಳೆನೀರಿನಲ್ಲಿ ಎಳೆದುಕೊಂಡು ಕೆಳಗೆ ಕೆಡವುತ್ತಿದ್ದೆವು. ಇದನ್ನು ಊರಿನ ಕೆಲವು ಜನರು ಮನೆಯಲ್ಲಿ ಹೆತ್ತವರಿಗೆ ನಾವು ಮಾಡುವ ಕೀಟಲೆಯನ್ನು ಹೇಳುತ್ತಿದ್ದರು. ಪರಿಣಾಮ ಆ ದಿನ ಮನೆಯಲ್ಲಿ ನಮ್ಮದೆಲ್ಲ ಮೌನವ್ರತ. ಕೆಲವೊಂದು ಸಲ ಗೆಳೆಯರೊಟ್ಟಿಗೆ ಕೀಟಲೆ, ತರಲೆ ಮಾಡುತ್ತಾ ನಡುವೆ ಹೊಡೆದಾಡುತ್ತಾ ಮನೆ ಯನ್ನು ಸೇರುತ್ತಿದ್ದೆವು. ನಮ್ಮ ವೇಷಭೂಷಣ ನೋಡಿ ಅಮ್ಮ ಗಾಬರಿಯಾಗುತ್ತಿದ್ದಳು. ಮಳೆ ಗುಡುಗಿಗಿಂತಲೂ ಜೋರಾಗಿಯೇ ಅಮ್ಮನ ಬೈಗುಳ ಇರುತ್ತಿದ್ದವು. ಮಿಂಚಿನಂತೆ ಒಂದೆರಡು ಏಟು ಬೀಳುತ್ತಿದ್ದವು. ಆಗ ನಾನು ಮಾತ್ರ ಏನು ಅರಿಯದ ಮುಗ್ಧನಂತೆ ನಿಲ್ಲುತ್ತಿದ್ದೆ.   ಆ ಮೇಲೆ ಅಮ್ಮ ತಾನು ಸಮಾಧಾನಳಾಗಿ ನನಗೂ ಸಮಾಧಾನ ಮಾಡಿ ಕೈ- ಕಾಲು ತೊಳೆಸಿ, ತಲೆ ಒರೆಸಿ ಬಿಸಿ ಬಿಸಿ ಚಹಾ, ತಿನ್ನಲು ಏನಾದರೂ  ಕೊಡುತ್ತಿದ್ದರು.  ಇಷ್ಟೆಲ್ಲ ಗದ್ದಲದ ನಡುವೆ ಮಳೆ ಕೂಡ ಶಾಂತವಾಗುತ್ತಿತ್ತು.

 

ಬಸವರಾಜ ಲಗಳಿ  ಎಸ್‌.ಬಿ.ಆರ್ಟ್ಸ್, ಕೆ.ಸಿ.ವಿಜ್ಞಾನ ವಿಜಯಪುರ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-rcb

RCB: ಈ  ಸಲ ಕಪ್‌ ನಮ್ಮದು…

18

Honesty: ಪ್ರಾಮಾಣಿಕರಿಗಿದು ಕಾಲವಲ್ಲ…

17

Sirsi: ಶಿರಸಿ ಮಾರಿಕಾಂಬೆ ವೈಭವದ ಜಾತ್ರೆ

16-wtr

Water: ನೀರು ಭುವನದ ಭಾಗ್ಯ

15-mother

Mother: ಕಣ್ಣಿಗೆ ಕಾಣುವ ದೇವರು ಅಂದರೆ ಅಮ್ಮ ತಾನೇ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.