ಹಕ್ಕಿ ಮತ್ತು ಮರಿ
Team Udayavani, Jul 19, 2021, 8:00 AM IST
ಒಂದೂರಲ್ಲಿ ಹಕ್ಕಿಯೊಂದು ತನ್ನ ಸುಂದರವಾದ ಗೂಡಿನೊಳಗೆ ವಾಸವಾಗಿತ್ತು. ಅದು ತನ್ನ ಗೂಡನ್ನು ಯಾರ ಕೈಗೂ ಸಿಗಲಾರದಷ್ಟು ಒಂದು ಮನೆಯ ಮಹಡಿ ಮೇಲೆ ಕಟ್ಟಿತ್ತು. ಹಕ್ಕಿಗೆ ಮೂರು ಮರಿಗಳಿದ್ದವು. ಆದರೆ ಆ ಹಕ್ಕಿಗೆ ತನ್ನ ಮೊದಲೆರಡು ಮರಿಗಳೆಂದರೆ ತುಂಬಾನೇ ಇಷ್ಟವೋ ಇಷ್ಟ. ಆದರೆ ಮೂರನೆಯ ಮರಿಯನ್ನು ಅಷ್ಟೊಂದು ಇಷ್ಟಪಡುತ್ತಿರಲಿಲ್ಲ.
ಹಕ್ಕಿಯು ಆಹಾರ ಹುಡುಕಿಕೊಂಡು ಬಂದು ತನ್ನ ಮೊದಲೆರಡು ಮರಿಗಳಿಗೆ ಆಹಾರವನ್ನು ಹೆಚ್ಚು ಕೊಡುತ್ತಿತ್ತು. ಆದರೆ ಆ ಮೂರನೆಯ ಮರಿಗೆ ಸ್ವಲ್ಪ ಕೊಡುತ್ತಿತ್ತು. ಹಾಗೆ ಅದರ ಬಗ್ಗೆ ಅಷ್ಟೊಂದು ಕಾಳಜಿ ತೋರಿಸುತ್ತಿರಲಿಲ್ಲ.
ಒಂದು ದಿವಸ ಆ ಹಕ್ಕಿಯು ಮೂರನೇ ಮರಿಗೆ , “ನಿನಗೆ ಬೇರೆ ಕಡೆ ವಾಸಿಸಲು ಸ್ಥಳವನ್ನು ಹುಡುಕಿರುವೆ, ನಾಳೆಯೇ ನಿನ್ನನ್ನು ಆ ಸ್ಥಳಕ್ಕೆ ಬಿಟ್ಟು ಬರುವೆ’ ಎಂದು ಹೇಳಿತು. ಇದನ್ನು ಕೇಳಿದ ಆ ಮೂರನೆಯ ಮರಿಗೆ ಸಿಡಿಲು ಬಡಿದಂತಾಯಿತು ಮತ್ತು ಆ ಮೂರನೆಯ ಮರಿಯು ಮನನೊಂದು ತನ್ನ ಮನಸ್ಸಿನಲ್ಲಿಯೇ, “ನಾನು ಹುಟ್ಟಿದ್ದು ದುರಾದೃಷ್ಟ, ನನ್ನಿಂದ ಈ ಗೂಡಿನ ಮರಿಗಳಿಗೆ ಮತ್ತು ಹಕ್ಕಿಗೆ ತುಂಬಾ ತೊಂದರೆಯಾಗುತ್ತಿದೆ’ ಎಂದು ಹೇಳಿಕೊಂಡಿತು. ಅನಂತರ ಆ ಮನನೊಂದ ಮರಿಯು ತಟ್ಟನೆ ಆ ಗೂಡಿನಿಂದ ಕೆಳಗೆ ಬಿದ್ದು ಸಾವನ್ನಪ್ಪಿತು.
ಈ ಕಥೆಯನ್ನು ಕೇಳಿದ ಅನಂತರ ಓದುಗರಲ್ಲಿ ಒಂದು ಪ್ರಶ್ನೆ ಮೂಡಿರಬಹುದು. ಅದೇನೆಂದರೆ ಹಕ್ಕಿಯು ಮೂರನೆಯ ಮರಿಗೆ ಯಾಕೆ ಪ್ರೀತಿ, ಮಮತೆಯನ್ನು ತೋರುತ್ತಿರಲಿಲ್ಲ? ಯಾಕೆಂದರೆ ಆ ಮೂರನೆಯ ಮರಿಯು ಆ ಹಕ್ಕಿಯ ಸ್ವಂತ ಮರಿಯಾಗಿರುವುದಿಲ್ಲ. ಮತ್ತು ಒಮ್ಮೆ ಆ ಹಕ್ಕಿಯು ಸಂಚರಿಸುತ್ತಿರುವಾಗ ಕೆಳಗೆ ಒಂದು ಹಕ್ಕಿ ಮರಿಯು ಗಾಯಗೊಂಡು ಬಿದ್ದಿತ್ತಂತೆ. ಅದನ್ನು ನೋಡಿದ ಈ ಹಕ್ಕಿಯು ಕನಿಕರದಿಂದ ಈ ಮರಿಯನ್ನು ಎತ್ತಿಕೊಂಡು ತನ್ನ ಗೂಡಿಗೆ ತಂದು ಬಿಟ್ಟಿತ್ತು. ಆ ಗಾಯಗೊಂಡ ಮರಿಯೇ ಮೂರನೆಯ ಮರಿ. ಮಕ್ಕಳಿಗೆ ತಾಯಿ ಹೇಗೆ ಆಶ್ರಯ ಕೊಟ್ಟು ಸಲಹುತ್ತಾಳ್ಳೋ, ಹಾಗೆ ಹಕ್ಕಿಗಳಿಗೆ ಗೂಡು ಆಶ್ರಯ ಕೊಟ್ಟು ಸಲಹುತ್ತದೆ.
ರಾಕೇಶ ವಿ. ಪತ್ತಾರ, ಐಕೂರ
ಆದರ್ಶ ವಿದ್ಯಾಲಯ ಶಹಾಪುರ, ಯಾದಗಿರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ