ಬೆಟ್ಟಗಳ ರಾಣಿ ಮಸ್ಸೂರಿ; ಗಗನ ಚುಂಬಿ ಬೆಟ್ಟಗಳು, ಪ್ರಕೃತಿ ವೈಭವ


Team Udayavani, Mar 26, 2021, 8:10 PM IST

Mussoorie 03

ಉನ್ನತ ಶಿಕ್ಷಣದ ವಿಭಾಗಗಳಲ್ಲಿ ಶಿಕ್ಷಣದೊಂದಿಗೆ ಶೈಕ್ಷಣಿಕ ಪ್ರವಾಸವೂ ಒಂದು ಭಾಗವಾಗಿರುತ್ತದೆ.

ಹೀಗಾಗಿ ಫೇಬ್ರವರಿ ತಿಂಗಳಲ್ಲಿ ನಮ್ಮ ವಿಭಾಗದ ವತಿಯಿಂದ 12 ದಿನಗಳ ಸುಧೀರ್ಘ‌ ಪ್ರವಾಸ ಕೈಗೊಂಡು ಉತ್ತರಾಖಂಡ, ದಿಲ್ಲಿ ಮತ್ತು ಆಗ್ರಾಕ್ಕೆ ಹೋಗಿಬಂದೆವು. ಇಲ್ಲಿ ನಾನು ಉತ್ತರಖಂಡ ರಾಜ್ಯದ ಮಸ್ಸೂರಿಯಲ್ಲಾದ ಪ್ರವಾಸದ ಅನುಭವವನ್ನು ಹಂಚಿಕೊಳ್ಳುತ್ತಿದ್ದೇನೆ.

ನಾನು ಮೊದಲ ಬಾರಿಗೆ ಉತ್ತರ ಭಾರತಕ್ಕೆ ಹೋಗಿದ್ದೆ. ಮಂಗಳೂರಿನಿಂದ 46 ಗಂಟೆಗಳ ರೈಲಿನಲ್ಲಿ ಪ್ರಯಾಣ ಮೂಲಕ ಡೆಹ್ರಾಡೂನ್‌ಗೆ ತಲುಪಿದೆವು. ಅಂದು ರಾತ್ರಿ ಹೊಟೇಲೊಂದರಲ್ಲಿ ಉಳಿದುಕೊಂಡು ಮರುದಿವಸ ಬೆಳಗ್ಗೆ ಪ್ರವಾಸಿತಾಣಗಳ ಭೇಟಿ ಆರಂಭವಾಯಿತು.

ಕ್ವೀನ್‌ ಆಫ್ ಹಿಲ್ಸ್‌
ಮೊದಲ ದಿನ ಮೊದಲು ಭೇಟಿ ಕೊಟ್ಟಿದ್ದೇ ಮಸ್ಸೂರಿಯಲ್ಲಿರುವ ಕೆಂಪ್ಟಿ ಫಾಲ್ಸ್‌ಗೆ ಮಸ್ಸೂರಿಯಲ್ಲಿ ಚಳಿ ಸ್ವಲ್ಪ ಜಾಸ್ತಿನೇ ಇತ್ತು. ರಸ್ತೆ ಪಯಣವಂತೂ ಮೈನವಿರೇಳಿಸುವಂತ್ತದ್ದು. ಇಕ್ಕಟ್ಟು ರಸ್ತೆಯಲ್ಲಿ ತಿರುವುಮುರವಾಗಿ ಹೋಗಬೇಕಿತ್ತು. ಒಂದು ಬದಿ ತುಂಬಾ ಆಳ. ಇನ್ನೊಂದು ಬದಿ ಎತ್ತರವಾದ ಬೆಟ್ಟಗಳು. ಘಾಟ್‌ ಅಂತಲೇ ಹೇಳಬಹುದು. ಮಾರ್ಗ ಮಧ್ಯೆ ಮಸ್ಸೂರಿಯ ಕ್ವೀನ್‌ ಆಫ್ ಹಿಲ್ಸ್‌ ಎಂದೇ ಕರೆಯುವ ಸ್ಥಳದಲ್ಲಿ ನಿಲ್ಲಸಲಾಯಿತು. ಗಗನ ಚುಂಬಿ ಬೆಟ್ಟಗಳು, ಪ್ರಕೃತಿ ವೈಭವವನ್ನು ಕಣ್ತುಂಬಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡು ಅಲ್ಲಿಂದ ಹೊರಟೆವು.

ಕೆಂಪ್ಟಿ ಫಾಲ್ಸ್‌
ಅಲ್ಲಿಂದ ಕೆಂಪ್ಟಿ ಫಾಲ್ಸ್‌ಗೆ ತಲುಪಿದೆವು. ಇಲ್ಲಿ ಎತ್ತರದಿಂದ ಹರಿಯುವ ನೀರನ್ನು ಬೀಳುವ ಸ್ಥಳದಲ್ಲೇ ಸ್ವಲ್ಪ ನಿಲ್ಲುವ ವ್ಯವಸ್ಥೆ ಮಾಡಲಾಗಿದೆ. ನೀರಂತೂ ರಕ್ತ ಹೆಪ್ಪುಗಟ್ಟುವಷ್ಟು ತಂಪಾಗಿತ್ತು. ಸ್ನಾನಕ್ಕೆ ಅವಕಾಶವಿದ್ದರೂ, ಇನ್ನಷ್ಟು ಪ್ರವಾಸಿ ತಾಣಗಳಿಗೆ ಹೋಗಬೇಕಿದ್ದ ಕಾರಣ ಆರೋಗ್ಯ ಕೆಡಬಹುದೆಂಬ ದೃಷ್ಟಿಯಿಂದ ಸ್ನಾನ ಮಾಡದೆ ಜಲಧಾರೆಯನ್ನಷ್ಟೇ ಕಣ್ತುಂಬಿಕೊಂಡೆವು. ಕಣ್ಣು ಹಾಯಿಸಿದಷ್ಟೂ ಕಾಣುವ ಬೆಟ್ಟಗಳನ್ನು ಕಂಡು ವಾವ್‌ ಅಂದೆವು. ರೋಪ್‌ ವೇ, ವಿವಿಧ ಬಗೆಯ ವಸ್ತುಗಳು ಮಾರಾಟಕಿದ್ದವು. ಒಟ್ಟಿನಲ್ಲಿ ಕೆಂಪ್ಟಿ ಫಾಲ್ಸ್‌ ಸುಮಧುರ ಅನುಭವವನ್ನು ಕೊಟ್ಟಿತ್ತು. ಮೋಡ ಮುಸುಕಿದ ವಾತಾವರಣ ಇದ್ದಿದ್ದರಿಂದ ಊಟದ ಹೊತ್ತು ಬಂದದ್ದೇ ಗೊತ್ತಾಗಲಿಲ್ಲ. ಅಲ್ಲಿಯೇ ಭೋಜನ ಮುಗಿಸಿ ಮುಂದುವರೆದೆವು.

ಪ್ರಕಾಶೇಶ್ವರ ದೇವಾಲಯ
ಮಧ್ಯಾಹ್ನದ ಭೋಜನದ ಅನಂತರ ಭೇಟಿ ಕೊಟ್ಟದ್ದು ಹತ್ತಿರದಲ್ಲೇ ಇದ್ದ ಪ್ರಕಾಶೇಶ್ವರ ದೇವಾಲಯಕ್ಕೆ. ಇಲ್ಲಿನ ದೇಗುಲದ ಸಂಕೀರ್ಣ ತುಂಬಾ ಚಿಕ್ಕದಾಗಿದ್ದು, ನಿರ್ಮಾಣ ಬಲು ವಿಶೇಷವಾಗಿರುತ್ತದೆ. ದೇವರ ದರ್ಶನ ಪಡೆದು, ಇಲ್ಲಿನ ವಿಶೇಷ ಪ್ರಸಾದವನ್ನು ಸ್ವೀಕ‌ರಿಸಿ, ದೇಗುಲದ ಪಕ್ಕಕ್ಕೆ ಕಣ್ಣಾಯಿಸಿದಾಗ ಮಾರಾಟ ಮಳಿಗೆ ಕಣ್ಣಿಗೆ ಬಿತ್ತು. ಅಲ್ಲಿ ಒರಿಜಿನಲ್‌ ರುದ್ರಾಕ್ಷಿ ಮಾಲೆ, ಸ್ಫಟಿಕಗಳೆಲ್ಲ ಇತ್ತು. ಅವುಗಳ ಮೊತ್ತವನ್ನು ನೋಡಿಯೇ ಅಲ್ಲಿಂದ ವಾಪಸ್‌ ಬಂದು ನಮ್ಮ ಬಸ್ಸಿನಲ್ಲಿ ಕುಳಿತು ಕೊಂಡೆವು.

ಮಸ್ಸೂರಿ ಸರೋವರ
ದೇಗುಲದಿಂದ ಮುಂದೆ ಹೊರಟಿದ್ದು ಮಸ್ಸೂರಿ ಸರೋವರಕ್ಕೆ. ಸಣ್ಣದೊಂದು ಕಣಿವೆಯಲ್ಲಿ ಬರುವ ನೀರನ್ನು ಕೆರೆಯ ಹಾಗೆ ಮಾಡಿ ಅದರಲ್ಲಿ ನೀರನ್ನು ಸಂಗ್ರಹಿಸುವ ವ್ಯವಸ್ಥೆ ಬಲು ವಿಶೇಷವಾಗಿದೆ. ಇದು ಮುಖ್ಯ ರಸ್ತೆ ಬದಿಯಲ್ಲೇ ಇರುವುದರಿಂದ ಮಸ್ಸೂರಿಗೆ ಆಗಮಿಸುವ ಪ್ರವಾಸಿಗರೆಲ್ಲ ಇಲ್ಲಿಗೆ ಭೇಟಿ ನೀಡುತ್ತಾರೆ. ಹಣ ಕೊಟ್ಟು ಟಿಕೆಟ್‌ ಪಡೆದರೆ ಸರೋವರದಲ್ಲಿ ಪೆಡಲಿಂಗ್‌ ಮಾಡಬಹುದು. ಇಲ್ಲಿ ಝಿಪ್‌ ಲೈನ್‌, ಹಾರರ್‌ ಹೌಸ್‌ ಕೂಡ ಇದೆ. ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯಲು ಮಸ್ಸೂರಿ ಎಲ್ಲ ರೀತಿಯ ಮನೋರಂಜನ ವ್ಯವಸ್ಥೆ ಹೊಂದಿದೆ. ಅದಾಗಲೇ ಸೂರ್ಯ ಮುಳುಗುವ ಹೊತ್ತಾಗಿತ್ತು ಇಲ್ಲಿಂದ ಮುಂದೆ ನಾವು ತಂಗುವ ಹೊಟೇಲ್‌ಗೆ ಹೋದೆವು. ಮಸ್ಸೂರಿಯಲ್ಲಾದ ಪ್ರವಾಸದ ಅನುಭವ, ಅಲ್ಲಿನ ಚಳಿಯ ವಾತಾವರಣವಂತೂ ಎಂದಿಗೂ ಮರೆಯಲಾರೆವು. ಒಟ್ಟಿನಲ್ಲಿ ಮಸ್ಸೂರಿಯ ಪ್ರವಾಸದ ಅನುಭವ ಮನದಲ್ಲಿ ಅಚ್ಚಳಿಯದಂತೆ ಉಳಿಯಲಿದೆ.


ರೋಹಿತ್‌ ದೋಳ್ಪಾಡಿ, ಮಂಗಳೂರು ವಿ.ವಿ.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-uv-fusion

Relationships: ಆಕೆಯ ಸುಂದರ ಬದುಕಿಗೆ ಇಷ್ಟೇ ಸಾಕಲ್ಲವೇ…

7-uv-fusion

Poetry: ಸಾಹಿತ್ಯ ಲೋಕದ ಭಾವಯಾನ ‘ಕವನ’

9-uv-fusion

Sirsi festival: ಶಿರಸಿ ಜಾತ್ರೆ ಎಂದರೆ, ಸುಮ್ಮನೆ ಅಲ್ಲ !

8-uv-fusion

UV Fusion: ಅವಳು

6-nss-camp

NSS Camp: ಜೀವನ ಮೌಲ್ಯ ಕಲಿಸಿದ ಎನ್‌ಎಸ್‌ಎಸ್‌ ಶಿಬಿರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.