ಸೋಲನ್ನು ಮೆಟ್ಟಿ ನಿಂತ ಸಾಧಕನ ಸ್ಫೂರ್ತಿಯ ಕಥೆ


Team Udayavani, Jun 21, 2020, 8:51 AM IST

ಸೋಲನ್ನು ಮೆಟ್ಟಿ ನಿಂತ ಸಾಧಕನ ಸ್ಫೂರ್ತಿಯ ಕಥೆ

ಜೀವನದಲ್ಲಿ ಸೋಲು ಮುಖ್ಯ ಅಲ್ಲ. ಆದರೆ ಸೋಲನ್ನು ಮೆಟ್ಟಿ ನಿಂತು ಸಾಧಿಸುವುದು ಮುಖ್ಯ. ಹೋಂಡಾ ಕಂಪೆನಿ ಅಂದರೆ ಎಲ್ಲರಿಗೂ ಚಿರಪರಿಚಿತ. ಈ ವಿಶ್ವವಿಖ್ಯಾತ ಕಂಪೆನಿಯ ಸ್ಥಾಪಕ ಸೋಯಿಚಿರೋ ಹೋಂಡಾರವರ ಕಲ್ಲು ಮುಳ್ಳಿನ ಹಾದಿಯ ಕಥೆಯೂ ನಮ್ಮೆಲ್ಲರ ಜೀವನಕ್ಕೆ ಸ್ಫೂರ್ತಿದಾಯಕವಾದುದು.

ಬಡ ಕುಟುಂಬದಲ್ಲಿ ಹುಟ್ಟಿದ ಸೋಯಿ ಚಿರೋ ಹೋಂಡಾ ಚಿಕ್ಕಂದಿನಿಂದಲೇ ಏನಾದರೂ ಸಾಧನೆ ಮಾಡಬೇಕು ಎನ್ನುವ ಅದಮ್ಯ ಬಯಕೆ ಇಟ್ಟುಕೊಂಡಿದ್ದರು. ಹಾಗೆಯೇ ಕಾಲೇಜಿನ ವರ್ಕ್‌ ಶಾಪ್‌ನಲ್ಲಿದ್ದಾಗ ಹಠಾತ್ತಾನೆ ಪಿಸ್ಟನ್‌ ತಯಾರಿಸುವ ಐಡಿಯಾ ಹೊಳೆಯಿತು. ಹಗಲು-ರಾತ್ರಿ ಶ್ರಮಪಟ್ಟು ತಯಾರಿಸಿ ಟೊಯೊಟೊ ಕಂಪೆನಿಗೆ ಮಾರಲು ಹೋದಾಗ, ಗುಣ ಮಟ್ಟದ ಉತ್ಪನ್ನ ಇದಲ್ಲ ಎಂದು ಕಂಪೆನಿ ನಿರಾಕರಿಸಿತು. ಎಲ್ಲರೂ ಗೇಲಿ ಮಾಡಿ ನಕ್ಕರು. ಆದರೆ ಹೋಂಡಾ ಅವರು ಮಂದಹಾಸ ಬೀರಿ ತನ್ನ ಪ್ರಯತ್ನವನ್ನು ಮುಂದುವರಿಸಿದರು. ಮುಂದೊಂದು ದಿನ ತನ್ನ ಸತತ ಪ್ರಯತ್ನದಿಂದ ತನ್ನದೇ ಆದ ಫ್ಯಾಕ್ಟರಿಯನ್ನು ಆರಂಭಿಸಿದರು.
ಆದರೆ ಭೂಕಂಪಕ್ಕೀಡಾಗಿ ಧರೆಗುರುಳಿತು. ಮತ್ತೆ ಕಾರ್ಖಾನೆ ನಿರ್ಮಾಣಕ್ಕೆ ಮುಂದಾದಾಗ 2ನೇ ಮಹಾಯುದ್ಧವು ಪ್ರವೇಶಿಸಿಬಿಟ್ಟಿತ್ತು. ಆ ಹೊತ್ತಿಗೆ ಸಿಮೆಂಟಿನ ಪೂರೈಕೆ ನಿಂತೇ ಹೋಯ್ತು. ಆದರೆ ಇದಕ್ಕೆಲ್ಲ ತಲೆಕೆಡಿಸಿಕೊಳ್ಳದ ಹೋಂಡಾ ಅವರು ತಾನೆೇ ಸಿಮೆಂಟ್‌ ತಯಾರಿಸಿ ಕಾರ್ಖಾನೆಯ ಕೆಲಸ ಪೂರ್ಣಗೊಳಿಸಿದರು. ಹೀಗೆ ಮುಂದಿನ ದಿನಗಳಲ್ಲಿ ಹಲವು ಬಾರಿ ಸೋಲುಗಳನ್ನು ಕಂಡರೂ ಎಲ್ಲವನ್ನೂ ಮೆಟ್ಟಿನಿಂತು ಮುಂದೊಂದು ದಿನ ಹೋಂಡಾ ಕಂಪೆನಿಯನ್ನು ಜಗದ್ವಿಖ್ಯಾತ ಮಾಡಿದರು.

ನಾವು ಸೋಯಿಚಿರೋ ಹೋಂಡಾ ಅವರ ಜಾಗದಲ್ಲಿ ಇದ್ದಿದ್ದರೆ ಏನು ಮಾಡುತ್ತಿದ್ದೆವು? ಎಷ್ಟೇ ಸೋಲು ಕಂಡರೂ ಹೋಂಡಾ ಅವರು ಮಂದ ಹಾಸ ಬೀರಿ ಅದನ್ನೆಲ್ಲ ಜಯಿಸಿ ಮುನ್ನಡೆದು ಇಡೀ ವಿಶ್ವಕ್ಕೆ ಮಾದರಿ ಯಾದರು. ನಮಗೂ ಕೂಡ ಜೀವನದಲ್ಲಿ ಸೋಲುಗಳು ಬರುವುದು ಸಹಜ. ಆದರೆ ಅವನ್ನೆಲ್ಲ ಮೆಟ್ಟಿ ಮಂದಹಾಸ ಬೀರಿ ಜಯಿಸಬೇಕು ಅಷ್ಟೇ… ಎಲ್ಲದಕ್ಕೂ ಸಾಧಿಸುವ ಛಲವಿರಬೇಕು…

 ರಾಜೇಶ್‌ ಎಸ್‌. ಬಲ್ಯ, ಮಂಗಳೂರು

ಟಾಪ್ ನ್ಯೂಸ್

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

17-uv-fusion

UV Fusion: ನಿನ್ನೊಳಗೆ ನೀ ಇರುವಾಗ…

16-uv-fusion

UV Fusion: ದೃಷ್ಟಿಗೆ ತಕ್ಕ ಸೃಷ್ಟಿ

15-uv-fusion

Government School: ಸರಕಾರಿ ಶಾಲೆಯನ್ನು ಉಳಿಸಿ-ಬೆಳೆಸೋಣ

14-uv-fusion

Role: ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ನಮ್ಮ ಪಾತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.