ಗುಜರಾತ್‌ ಪ್ರವಾಸೋದ್ಯಮದಲ್ಲಿ ನೋಡಲೇಬೇಕಾದ ಖ್ಯಾತ 5 ತಾಣಗಳು


Team Udayavani, Aug 19, 2020, 7:34 PM IST

Somanath

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಭಾರತದ ವಿವಿಧ ರಾಜ್ಯಗಳು ತನ್ನದೇಯಾದ ಸಂಸ್ಕೃತಿಕ ವೈಭವ, ವೈವಿಧ್ಯತೆಗಳಿಂದ ಕೂಡಿರುತ್ತದೆ.

ಪ್ರವಾಸೋದ್ಯಮಕ್ಕೂ ತನ್ನದೇಯಾದ ಕೊಡುಗೆಗಳನ್ನು ನೀಡುತ್ತ ಬಂದಿದೆ.

ಭಾರತದ ಪಶ್ಚಿಮಭಾಗದಲ್ಲಿರುವ ಗುಜರಾತ್‌ ರಾಜ್ಯವು ತನ್ನದೇ ಆದ ವಿಶೇಷ ಭೌಗೋಳಿಕತೆಯಿಂದ ಕೂಡಿದೆ.

ಬಹಳಷ್ಟು ಪ್ರಸಿದ್ದ ಮತ್ತು ವೈಶಿಷ್ಟಗಳಿಂದ ಕೂಡಿದ ಪ್ರದೇಶಗಳನ್ನು ಗುಜರಾತ್‌ ಹೊಂದಿದ್ದು, ಪ್ರವಾಸೋದ್ಯಮದ ಕೇಂದ್ರವಾಗಿ ಗುರುತಿಸಿಕೊಂಡಿದೆ.

ಸೋಮನಾಥ ದೇಗುಲ
ಇತಿಹಾಸ ಪ್ರಸಿದ್ಧ ಸೋಮನಾಥ ದೇಗಲ ಇಲ್ಲಿನ ಪ್ರಮುಖ ಆರ್ಕಷಕ ಕೇಂದ್ರಗಳಲ್ಲಿ ಒಂದು.  ಭಾರತದಲ್ಲಿ 7 ಬಾರಿ ಪುನರ್ನಿಮಾಣವಾದ ದೇಗುಲ ಇದು ಎಂಬ ಖ್ಯಾತಿಯನ್ನು ಹೊಂದಿದೆ. 11ನೇ ಶತಮಾನದಲ್ಲಿ ಸೋಲಂಕಿ ರಾಜಪೂತರಿಂದ ನಿರ್ಮಾಣಗೊಂಡಿದೆ. 1951ರಲ್ಲಿ ಕೊನೆಯ ಬಾರಿ ಪುನರ್‌ ನಿರ್ಮಾಣವಾಗಿದೆ. ಈ ದೇಗುಲದಲ್ಲಿ ಅಪಾರ ಶ್ರೀಮಂತಿಕೆ ಮತ್ತು ಕೀರ್ತಿಯ ಕಾರಣಕ್ಕೆ ಹಲವು ಬಾರಿ ಸತತವಾಗಿ ದಾಳಿಗೆ ಒಳಗಾಗಿತ್ತು. ಅದ್ಭುತವಾದ ಕೆತ್ತನೆ, ಬೆಳ್ಳಿಯ ಬಾಗಿಲು, ಶಿಬಲಿಂಗ, ನಂದಿಯ ಪ್ರತಿಮೆ ಬಹಳ ಪ್ರಸಿದ್ಧಿ ಹೊಂದಿದೆ.

ಗಿರ್‌ ಅಭಯಾರಣ್ಯ
ಗುಜರಾತಿನ ಗಿರ್‌ ಅಭಯಾರಣ್ಯದಲ್ಲಿ ಅತಿ ಹೆಚ್ಚು ಏಷ್ಯಾದ ಸಿಂಹಗಳ ಸಂತತಿ ಇದೆ. ಇಲ್ಲಿನ ಸಫಾರಿ ತುಂಬಾ ಖ್ಯಾತವಾಗಿದ್ದು, ಮೈ ರೋಮಾಂಚನಗೊಳ್ಳುವ ಅನುಭವಗಳನ್ನು ನೀಡುತ್ತದೆ. ಜುನಾಗಢ ಜಿಲ್ಲೆಯಲ್ಲಿರುವ ಗಿರ್‌ ಗಿರಿಶ್ರೇಣಿಯ ತಳಭಾಗದಲ್ಲಿರುವ ಅತ್ಯಂತ ಸುಂದರ ವರ್ಣಮಯ ಅರಣ್ಯ ಪ್ರದೇಶ ಇದಾಗಿದೆ. 1,412 ಕಿ.ಮೀ. ವಿಸ್ತ್ರೀರ್ಣ ಹೊಂದಿದೆ. ಸಫಾರಿ ಪ್ರಿಯರಿಗೆ ಬಲು ಇಷ್ಟದ ಅರಣ್ಯಗಳಲ್ಲಿ ಇದು ಒಂದಾಗಿದೆ.

ಗಾಂಧಿ ಆಶ್ರಮ
ರಾಷ್ಟ್ರಪಿತ ಮಹಾತ್ಮ ಗಾಂಧೀ ಅವರು 1917ರಲ್ಲಿ ಸ್ಥಾಪಿಸಿದ ಸಾಬರಮತಿ ಆಶ್ರಮ ಕೂಡ ಅತೀ ಹೆಚ್ಚು ಪ್ರವಾಸಿಗಳು ಆಗಮಿಸುವ ಪ್ರವಾಸಿ ಸ್ಥಳವಾಗಿದೆ. ಅಹಮದಾಬಾದ್‌ ನ ಸಾಬರಮರಿ ನದಿ ದಂಡೆಯಲ್ಲಿ ಈ ಆಶ್ರಮವಿದೆ. ಸಾಬರಮತಿಯಲ್ಲಿ ಮಗನ್‌ ನಿವಾಸ್‌, ಉಪಾಸನಾ ಮಂದಿರ, ಹೃದಯ್‌ ಕುಂಜ್‌, ವಿನೋಬಾ -ಮೀರಾ ಕುಟೀರ್‌, ನಂದಿನಿ, ಉದ್ಯೋಗ್‌ ಮಂದಿರ್‌, ಸೋಮನಾಥ್‌ ಛಾತ್ರಾಲಯ, ಶಿಕ್ಷಕರ ನಿವಾಸ್‌, ಗಾಂಧೀ ಸ್ಮಾರಕ್‌ ಸಂಗ್ರಹಾಲಯ, ವರ್ಣಚಿತ್ರಗಳ ಗ್ಯಾಲರಿ ಇಲ್ಲಿ ಗಾಂಧೀಜಿಯವರಿಗೆ ಸೇರಿದ ಪತ್ರಗಳು ಮತ್ತು ಛಾಯಾಚಿತ್ರಗಳನ್ನು ಇಲ್ಲಿ ಸಂಗ್ರಹಿಸಿ ಇಡಲಾಗಿದೆ.

ಕಂಕರಿಯ ಕೆರೆ
ಈ ಕೆರೆಯನ್ನು ಸುಲ್ತಾನ್‌- ಖುತುಬ್‌-ಉದ್‌-ದಿನ್‌ ನ ಕಾಲದಲ್ಲಿ ನಿರ್ಮಿಸಲಾಗಿದೆ. ಕೆಳಭಾಗದಲ್ಲಿ ನಗಿನ ವಾಡಿ ಎಂಬ ದ್ವೀಪದಲ್ಲಿ ಬೇಸಗೆ ಅರಮನೆಯನ್ನು ನಿರ್ಮಿಸಲಾಗಿದೆ. ಈ ಅರಮನೆಯ ಸುತ್ತ ಒಂದು ಸುಂದರವಾದ ಉದ್ಯಾನವನವಿದೆ. ಈ ಕೆರೆಯು ಪ್ರವಾಸಿಗರ ನೆಚ್ಚಿನ ಸ್ಥಳವಾಗಿದೆ. ದೋಣಿ ವಿಹಾರ ಕೇಂದ್ರ, ಮೃಗಾಲಯ ಮತ್ತು ಪ್ರಾಕೃತಿಕ ಇತಿಹಾಸದ ವಸ್ತು ಸಂಗ್ರಹಾಲಯವಿದೆ. ಇಡೀ ಕೆರೆಯ ಆವರಣದಲ್ಲಿ ಬಣ್ಣ ಬಣ್ಣದ ದೀಪದ ವ್ಯವಸ್ಥೆಯನ್ನು, ನೀರಿನ ಕಾರಂಜಿಗಳನ್ನು ಅಳವಡಿಸಲಾಗಿದೆ. ಮನಮೋಹಕ ಕೆರೆಗಳಲ್ಲಿ ಇದು ಒಂದಾಗಿದೆ.

ಏಕತಾ ಪ್ರತಿಮೆ
ವಿಶ್ವದ ಅತಿ ಎತ್ತರದ ಪ್ರತಿಮೆ ಎಂದೇ ಗುರುತಿಸಲ್ಪಟ್ಟ ಏಕತಾ ಪ್ರತಿಮೆ ಇರುವುದು ಗುಜರಾತಿನ ಕೆವಾಡಿಯಾ ಪಟ್ಟಣದಿಂದ 3.5 ಕಿ.ಮೀ. ದೂರದಲ್ಲಿದೆ. ಭಾರತದ ಮೊದಲ ಉಪ ಪ್ರಧಾನ ಮಂತ್ರಿ ಮತ್ತು ಗೃಹ ಸಚಿವರಾದ ಮತ್ತು ಉಕ್ಕಿನ ಮನುಷ್ಯ ಎಂದೇ ಖ್ಯಾತಿಯಾಗಿರುವ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ 182 ಮೀಟರ್‌ ಎತ್ತರದ ಪ್ರತಿಮೆ ಇಲ್ಲಿದೆ. ಸದಾರರ್‌ ವಲ್ಲಭಭಾಯಿ ಪಟೇಲ್‌ ಅವರ 143ನೇ ಜನ್ಮ ದಿನಾಚರಣೆಯ ನೆನಪಿಗಾಗಿ ಅಕ್ಟೋಬರ್‌ 31, 2018ರಂದು ಈ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದರು. 3,000 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಹೀಗೆ ಗುಜರಾತ್‌ನಲ್ಲಿ 41ಕ್ಕೂ ಹೆಚ್ಚು ಪ್ರವಾಸಿತಾಣಗಳಿವೆ. ದೇಶ ವಿದೇಶಗಳಿಂದ ಸಾಕಾಷ್ಟು ಪ್ರಮಾಣದಲ್ಲಿ ಇಲ್ಲಿಗೆ ಜನ ಸಾಗರದಲ್ಲಿ ಹರಿ ಬರುತ್ತಾರೆ. ಇಲ್ಲಿನ ಸರಕಾರ ಕೂಡ ಪ್ರವಾಸೋದ್ಯಮವನ್ನು ಬಹಳಷ್ಟು ಅಭಿವೃದ್ಧಿ ಪಡಿಸಿದೆ. ಬಾಲಿವುಡ್‌ ಹೆಸರಾಂತ ನಟ ಅಭಿತಾಬ್‌ ಬಚ್ಚನ್‌ ಗುಜರಾತ್‌ ಪ್ರವಾಸೋದ್ಯಮದ ರಾಯಭಾರಿಯಾಗಿದ್ದಾರೆ.

 

 ಧನ್ಯಶ್ರೀ ಬೋಳಿಯಾರು 

 

 

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

16-adu-jeevitham

Movie Review: ಆಡು ಜೀವಿದಂ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.