‘ಆ’ ಮೂರು ಅವಶ್ಯಕ; ಆರೋಗ್ಯ, ಆಹಾರ, ಆಯಸ್ಸು


Team Udayavani, Jun 7, 2020, 7:31 PM IST

‘ಆ’ ಮೂರು ಅವಶ್ಯಕ; ಆರೋಗ್ಯ, ಆಹಾರ, ಆಯಸ್ಸು

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಕಳೆದ ವರ್ಷ ಸಿಂಗಾಪುರ್‌ನಲ್ಲಿ ಭಾರತಿಯ ಮೂಲದ ಶ್ರೀಮಂತ ವ್ಯಕ್ತಿಯೊಬ್ಬರ ಕಿರಿ ವಯಸ್ಸಿನ ಮಗ ಮಾನಸಿಕ ರೋಗದಿಂದ ತೀರಿಹೋದ.

ಅದಕ್ಕೆ ಕಾರಣ ಎಲ್ಲವೂ ಮನೆಯಲ್ಲೇ ಇತ್ತು. ಮನೆಯಲ್ಲೇ ಸಕಲ ಸೌಲಭ್ಯಗಳಿದ್ದವು.

ಅಪ್ಪ-ಅಮ್ಮ ಮತ್ತೆ ಆ ಮಗು ಮೂರು ಜನರಿಗೆ ದೊಡ್ಡ ಮನೆ, ಮನೆಯ ಸುತ್ತ ವಿಶಾಲವಾದ ಗಾರ್ಡನ್‌, ಸ್ವಿಮ್ಮಿಂಗ್‌ ಪೂಲ್‌, ಆಟದ ಸಾಮಗ್ರಿಗಳು, ಸೈಕಲ್‌ನಲ್ಲೇ ಮನೆ ಸುತ್ತ ಸುತ್ತಬಹುದಾದ ವಿಶಾಲವಾದ ಕಾಂಪೌಂಡ್‌. ಒಂದು ಕರೆ ಮಾಡಿದರೆ ಸಾಕು ಬೇಕಾದ ತಿಂಡಿ ಬೇಕಾದ ಸಮಯಕ್ಕೆ ಬರುತ್ತಿತ್ತು. ಮನೆಯಲ್ಲಿ ಟಿ.ವಿ., ವೀಡಿಯೋ ಗೇಮ್‌. ಪರಿಣಾಮವಾಗಿ ಮನೆಯೇ ಒಂದು ಪುಟ್ಟ ಪ್ರಪಂಚ. ಹೊರಗಿನ ಪ್ರಪಂಚದ ಅರಿವಿನ ಅವಶ್ಯಕತೆಯೇ ಇಲ್ಲ ಎಂಬುವಂತೆ ಮಗನನ್ನು ಬೆಳೆಸುತ್ತಿದ್ದರು.

ಪರಿಸರದ ಪರಿಚಯವೇ ಇಲ್ಲದೆ ಯಂತ್ರವಾಗಿ ಬದುಕಿ ವೀಡಿಯೋ ಗೇಮ್‌ ಜತೆ ಕಾಲ ಕಳೆಯುತ್ತಿದ್ದ ಹುಡುಗ ಒಂಟಿತನದ ಬಂಧನದಲ್ಲಿ ಸಿಲುಕಿ ಅವಸರದಲ್ಲಿ ಜೀವನ ಕಳೆದುಕೊಂಡ. ಆಫೀಸ್‌ನಿಂದ ಬಂದ ತಂದೆ ತಾಯಿ ಮಗ ಹೆಣವಾಗಿದ್ದಕ್ಕೆ ಕಾರಣವೇ ತಿಳಿದಿರಲಿಲ್ಲ. ಕಾಲ ಕಳೆದಂತೆಲ್ಲಾ ತಮ್ಮ ತಪ್ಪು ಅವರಿಗೆ ಅರಿವಾಯ್ತು. ಪ್ರೀತಿ ಜಾಸ್ತಿಯಾದ್ರೂ ಬಂಧನವೇ. ಮಕ್ಕಳಿಗೆ ಬೇಕಾದ ಅವಶ್ಯಕತೆಗಳನ್ನು ಪೊರೈಸುವುದಷ್ಟೆ ಕರ್ತವ್ಯ ಅಂದುಕೊಂಡ್ರೆ ಅದು ಮೂಢತನ. ಮಕ್ಕಳು ಮನೆಯಲ್ಲಿ ವ್ಯವಸ್ಥಿತ ಬದುಕು ಕಲಿಯಬಹುದು. ಆದರೆ ಅವರು ಬೆಳೆಯುವುದು ಪ್ರಪಂಚದಲ್ಲೇ.

ಅನುಕೂಲವಿದ್ದವರು ಮಿತಿಯಿಲ್ಲದೆ ರುಚಿ ರುಚಿಯಾದ ಆಹಾರ ಪೊರೈಸಿ ಆಕಾರದಲ್ಲಿ ಹೇಗಾದರೂ ಬೆಳೆಸಬಹುದು. ಆದರೆ ಮಾನಸಿಕವಾಗಿ ಬೆಳೆಯಬೇಕಾದರೆ ಮಿತಿಯಾಗಿ ಭಾವನೆಗಳ ಅವಶ್ಯವಿದೆ, ಸೋಲು-ಗೆಲುವು, ಸುಖ-ದುಃಖ, ಕುತೂಹಲ, ತೃಪ್ತಿ-ಅತೃಪ್ತಿ, ತಾಳ್ಮೆ ಇವೆಲ್ಲವೂ ಸಮತೊಲನವಾಗಿದ್ದರೆ ಮಾತ್ರ ಮಕ್ಕಳ ಬೆಳವಣಿಗೆ ಪ್ರಪಂಚದ ಜತೆ ಪರಿಪೂರ್ಣವಾಗುತ್ತದೆ

ಪರಿಸರದೊಂದಿಗೆ ಬೆಳೆದ ಮಗುವಿಗೆ ಜೀವನ ತಿಳಿದಿರುತ್ತದೆ. ಬೀಜ ಮೊಳಕೆಯೊಡೆದು ಬಂದ ಚಿಗುರಿನ ಸೌಂದರ್ಯ. ಮೊನ್ನೆ ಹೂವಾಗಿ ಓಣಗಿದ್ದ ಗಿಡದಲ್ಲಿ ಇಂದು ಹಣ್ಣು ಕವಲೊಡೆಯುವ ಖುಷಿ, ಗೆಳೆಯರ ಜತೆ ಆಡಿದ ಆಟದಲ್ಲಿ ಸೋತ ನೋವು, ಗೆದ್ದ ಖುಷಿ. ಗಾಯಕ್ಕೆ ಹಚ್ಚಿದ ಎಂಜಲು, ರಸ್ತೆಯಲ್ಲಿ ವ್ಯಾಪಾರಸ್ತರ ಚೌಕಾಸಿ, ಬಸ್‌ ರೈಲುಗಳಲ್ಲಿನ ಜನರ ಅವಸರ, ಆಸ್ಪತ್ರೆಯಲ್ಲಿ ಜೀವದ ಜತೆ ಹೋರಾಟ, ಕಳೆದುಕೊಂಡ ನೋವು, ಪಡೆದುಕೊಂಡ ಖುಷಿ, ಸಂತಾಪ, ಸಹಾಯ ಇವೆಲ್ಲವೂ ಹಿತಮಿತವಾಗಿ ಇದ್ದಷ್ಟು ಮಕ್ಕಳನ್ನು ಮಾನಸಿಕವಾಗಿ ಆರೋಗ್ಯವಂತನಾಗಿಸುತ್ತವೆ.

ದುಡ್ಡಿನ ಹಿಂದೆ ಓಡಾಡುವ ಅವಸರದಲ್ಲಿ ಮನೆ, ಸಂಬಂಧ, ಆರೋಗ್ಯಕ್ಕೆ ಸಮಯ ಕೊಡಲಾಗದೆ ಪರಿತಪಿಸುತ್ತಾರೆ. ಬೆವರು ಬರಬಾರದು ಎಂದು ಎ.ಸಿ. ರೂಮ್‌ನಲ್ಲಿ ದಿನ ಕಳೆದು, ಬೆವರಿನಿಂದ ಬೊಜ್ಜು ಕರಗಲಿ ಅಂತ ಬೆಳಗ್ಗೆ ಟಿ-ಶರ್ಟು, ಚಡ್ಡಿ, ನ್ಪೋರ್ಟ್ಸ್ ಶೂ ಹಾಕಿಕೊಂಡು ಓಡುತ್ತೇವೆ. ವಾರದ ಐದು ದಿನವೆಲ್ಲ ಹಸಿವಿನ ನೆಪಕ್ಕೆ ನಾಲಿಗೆಯ ಮಾತು ಕೇಳಿ ಜಂಕ್‌ ಫ‌ುಡ್‌, ರೆಡಿಮೇಡ್‌ ಫ‌ುಡ್‌ ತಿಂದು ವಾರದ ಕೊನೆಯ ಎರಡು ದಿನ ಹೊಟ್ಟೆಯಲ್ಲಿ ಜಿಡ್ಡುಗಟ್ಟಿ ಹರಡಿದ ಕೊಬ್ಬಿಗೆ ಮೋಕ್ಷ ಕೊಡಲು ವ್ಯಾಯಾಮ.

ವಯಸ್ಸಾದ ಮೇಲೆ ವಿಚಿತ್ರವಾದ ಶಸ್ತ್ರ ಚಿಕಿತ್ಸೆ, ಉಪ್ಪು ತರಕಾರಿಯ ಪಥ್ಯಗಳ ಮೊರೆ ಹೋಗುತ್ತೇವೆ. ಇವುಗಳು ಆಯಸ್ಸನ್ನು ಮುಂದೂಡಿಸಬಹುದೆ ಹೊರತು ಆರೊಗ್ಯವಂತನನ್ನಾಗಿ ಮಾಡುವುದಿಲ್ಲ. ಮೊದಲೇ ವ್ಯಾಯಾಮ ಮತ್ತು ಆಹಾರದಲ್ಲಿ ಹಿಡಿತವಿಟ್ಟುಕೊಂಡು ಬಂದರೆ, ಕೊನೆ ಘಳಿಗೆಯಲ್ಲಿ ಯಾರ ಸಹಾಯವೂ ಇಲ್ಲದೆ ತನಗೆ ತಾನೆ ಎದ್ದು ಕೂಡುವಷ್ಟು ಸಾಮರ್ಥ್ಯವೂ ಇರುತ್ತದೆ. ಹಿಡಿ ಹಿಡಿ ಮಾತ್ರೆ ಕರಗಿಸುವ ತಾಪತ್ರಯವೂ ತಪ್ಪುತ್ತೆ.

ಇತ್ತೀಚಿಗೆ ಆಹಾರ ಸೇವಿಸುವುದರಲ್ಲಿ ಇರುವ ಶಿಸ್ತು ಆಹಾರ ತಯಾರಿಸುವಲ್ಲಿ ಮರೆಯಾಗುತ್ತಿದೆ. ರುಚಿ ಇರುವುದೇ ಇಲ್ಲ. ರುಚಿ ಇಲ್ಲದಿದ್ದರೂ ಬಿಡಲು ಆಗುವುದಿಲ್ಲ. ಅನಿವಾರ್ಯ ಪರಿಸ್ಥಿತಿಯಲ್ಲಿ ಅವಸರದಲ್ಲಿ ನುಂಗಿ ಮತ್ತೆ ಟ್ರೈನು, ಬಸ್‌ ಹಿಡಿಯಲು ಓಡುತ್ತೇವೆ. ಕೆಲವೊಂದೆಡೆ ಹುಡುಗಿಗೆ ಸರಿಯಾಗಿ ಅಡುಗೆ ಬರಲ್ಲ ಅಂತ ಜಗಳವಾಗಿ ಮದುವೆಯಾದ ಕೆಲವೆ ತಿಂಗಳಿಗೆ ಡಿವೊರ್ಸಗೆ ಅಪ್ಲೈ ಆಗಿದ್ದನ್ನು ನೋಡಿರುತ್ತೇವೆ. ಯೂಟ್ಯೂಬ್‌ ಚಾನೆಲ್‌ ನೋಡಿ ಅಡುಗೆ ಬೇಯಿಸಿದರೆ ಅದು ನೋಡಕ್ಕೆ ಚಂದವಾಗಿ ಕಾಣಬಹುದು. ಆದರೆ ಬಾಯಲ್ಲಿ ಇಟ್ಟಾಗ ಅದರ ರುಚಿ ಬೇರೆಯೇ ಇರುತ್ತದೆ. ಪ್ರೀತಿ ಬೆರೆಸಿ ಮಾಡಬೇಕಾದ ಅಡುಗೆಗೆ ಬುದ್ಧಿ ಬಳಸಿ ಬೇಯಿಸುವಂತೆ ಕಾಲವೂ ಬದಲಾಗಿದೆ.

ಈಗ ಅವೆಲ್ಲವೂ ಅವಸರದಲ್ಲಿ ಅವಸರವಾಗಿಯೇ ಆಗಬೇಕು. ಅದಕ್ಕೆ ಈಗಿನವರಿಗೆ ಆಯಸ್ಸು ಕೂಡಾ ಅವಸರದಲ್ಲಿಯೇ ಕಳೆದು ಹೋಗ್ತಿದೆ. ಎಲ್ಲವೂ ಹಿಡಿತದಲ್ಲಿ ಹಿತಮಿತವಾಗಿ ಇದ್ದರೆ ಕೊನೆಯವರೆಗೂ ಚೆನ್ನಾಗಿಯೇ ಇರುತ್ತದೆ. ಇಲ್ಲವಾದರೆ ವಯಸ್ಸಾದ ಮೇಲೆ ಆಯಸ್ಸು ಶಾಪವೆನಿಸುತ್ತದೆ.

-ಆದರ್ಶ ಖೇದಗಿ, ಪತ್ರಿಕೋದ್ಯಮ ವಿಭಾಗ, ಮಾನಸ ಗಂಗೋತ್ರಿ ಮೈಸೂರು.

ಟಾಪ್ ನ್ಯೂಸ್

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-uv-fusion

Relationships: ಆಕೆಯ ಸುಂದರ ಬದುಕಿಗೆ ಇಷ್ಟೇ ಸಾಕಲ್ಲವೇ…

7-uv-fusion

Poetry: ಸಾಹಿತ್ಯ ಲೋಕದ ಭಾವಯಾನ ‘ಕವನ’

9-uv-fusion

Sirsi festival: ಶಿರಸಿ ಜಾತ್ರೆ ಎಂದರೆ, ಸುಮ್ಮನೆ ಅಲ್ಲ !

8-uv-fusion

UV Fusion: ಅವಳು

6-nss-camp

NSS Camp: ಜೀವನ ಮೌಲ್ಯ ಕಲಿಸಿದ ಎನ್‌ಎಸ್‌ಎಸ್‌ ಶಿಬಿರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.