ಬಸ್‌ ಹತ್ತುವ ಮೊದಲಿದ್ದ ʼಕನಸು’ ಬಳಿಕ ಏನಾಯಿತು?

ಡ್ರಾಪ್‌ ಬಾಕ್ಸ್‌ ಅಂಕಣದಲ್ಲಿ ತಮ್ಮ ಬಸ್‌ ಪ್ರಯಾಣವೊಂದರ ಅನುಭವಕ್ಕೆ ಅಕ್ಷರ ರೂಪನೀಡಲಾಗಿದೆ.

Team Udayavani, Jul 27, 2020, 10:30 AM IST

Rush bus

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಬಸ್‌ ಪ್ರಯಾಣದ ನೆನಪುಗಳನ್ನು ಮೆಲುಕು ಹಾಕುವವರಲ್ಲಿ ನಾನೂ ಒಬ್ಬಳು. ಬಸ್‌ನಲ್ಲಿ ಸಾಮಾನ್ಯವಾಗಿ ಎಲ್ಲರೂ ಸಂಚರಿಸಿರುತ್ತಾರೆ.

ಸಿಹಿಕಹಿ ಅನುಭವಗಳಿಗೆ ಸಾಕ್ಷಿಯಾಗಿರುತ್ತಾರೆ. ಅಂದಹಾಗೆ ನನಗೆ ಬಸ್‌ನಲ್ಲಿ ಪ್ರಯಾಣಿಸಿದ ಒಂದು ಸಂದರ್ಭ ನೆನಪಿಗೆ ಬರುತ್ತಿದೆ.
ನಾನು ಮತ್ತು ಅಕ್ಕ ಇಬ್ಬರು ಅಜ್ಜಿಮನೆಗೆ ಹೊರಟ್ಟಿದ್ದೆವು.

ಬಸ್‌ಗಾಗಿ ಸ್ಟಾಂಡಿನಲ್ಲಿ ಕಾತುರದಿಂದ ಕಾಯುತ್ತಿದ್ದೆವು. ಕಡೆಗೂ ಬಸ್‌ ಬಂತು. ಬಸ್‌ ಬಂದು ನಿಂತಿದ್ದೇ ತಡ. ಕಂಡಕ್ಟರ್‌ ಬಸ್ಸಿಂದ ಕೆಳಗಿಳಿದು ಬೊಬ್ಬಿಡಲು ಶುರು ಮಾಡಿದ. ಬಲೆ…ಬಲೆ… ಬಲೆ… ರೈಟ್‌ ಪೋಯಿ (ಕರಾವಳಿಯ ತುಳು ಭಾಷೆಯಲ್ಲಿ: ಬನ್ನಿ ಬನ್ನಿ ಬನ್ನಿ, ಸರಿ ಹೋಗೋಣ) ಎಂದು.

ಮೊದಲೇ ಆ ಬಸ್‌ನಲ್ಲಿ ತುಂಬಾ ರಶ್‌ ಇತ್ತು. ಅಂತೂ ತುಂಬಾ ಕಷ್ಟಪಟ್ಟು ಬಸ್‌ನೊಳಗೆ ಸೇರಿದೆವು. ಬೊಂಬೆಯ ಹಾಗೆ ನಿಲ್ಲಬೇಕಾದ ಪರಿಸ್ಥಿತಿ. ಕೈ ಕಾಲು ಅಲುಗಾಡಿಸಲೂ ಸಾಧ್ಯವಾಗದಷ್ಟು ರಶ್‌. ಇದರೆಡೆಯಲ್ಲಿ ಒಮ್ಮೆ ಮುಂದೆಯಿಂದ ಬಂದು “ಪಿರವ್‌ ಪೋಲೆ'(ಹಿಂದಕ್ಕೆ ಹೋಗಿ), ಹಿಂದೆಯಿಂದ ಬಂದು “ದುಂಬು ಪೋಲೆ’ (ಮುಂದಕ್ಕೆ ಹೋಗಿ)ಎಂದು ಕಿರುಚುವ ಕಂಡಕ್ಟರ್‌.

ಆದರೆ ಈ ಇಕ್ಕಟ್ಟಿನಲ್ಲಿ ಒಳಗಿರುವ ಪ್ರಯಾಣಿಕರು ಮಾತ್ರ ಸ್ತಬ್ಧ. ಗೋಣಿ ಚೀಲಕ್ಕೆ ಲದ್ದಿ ತುಂಬಿಸಿದ ರೀತಿಯಲ್ಲಿ ಜನರನ್ನು ಬಸ್‌ಗೆ ತುಂಬಿಸಲಾಗಿತ್ತು. ಒಮ್ಮೆ ಅಜ್ಜಿಮನೆಗೆ ತಲುಪಿದರೆ ಸಾಕು ಎನ್ನುವಷ್ಟರ ಮಟ್ಟಿಗೆ ಸುಸ್ತಾಗಿತ್ತು. ಸಹಪ್ರಯಾಣಿಕರ ಜತೆ ನಾವಿಬ್ಬರೂ ಅಪ್ಪಚ್ಚಿಯಾಗಿದ್ದೆವು.

ಬಸ್‌ ಏರುವ ಮೊದಲು ಇದ್ದ ಕಿಟಕಿ ಬಳಿ ಕುಳಿತುಕೊಳ್ಳುವ ಕನಸು ಬಸ್‌ ಬಂದಾಗಲೇ ನುಚ್ಚುನೂರಾಗಿತ್ತು. ಬಸ್‌ ಕಿಟಕಿ ಸೈಡ್‌ ಕುಳಿತು ಇಯರ್‌ ಫೋನ್‌ ಹಾಕಿ ಹಾಡು ಕೇಳಬೇಕು. ತಣ್ಣನೆ ಗಾಳಿಗೆ ಮೈಯೊಡ್ಡಿ ಅಕ್ಕನ ಜತೆ ಸ್ವಲ್ಪ ಹೊತ್ತು ಹರಟೆ ಹೊಡೆಯಬೇಕು; ಎಂಬೆಲ್ಲ ಕನಸುಗಳು ಬಳಿಕ ಹತ್ತಿರ ಸುಳಿಯಲಿಲ್ಲ. ತಣ್ಣನೆ ಗಾಳಿಯ ಸುಳಿವು ಇರಲಿಲ್ಲ. ತ್ರಾಸದಾಯಕ ಪ್ರಯಾಣ ಅದಾಗಿತ್ತು.

ಅಂತು ಅಜ್ಜಿ ಮನೆ ಹತ್ತಿರದ ಬಸ್‌ ಸ್ಟಾಪ್‌ ತಲುಪಿತು. ಏನೋ ಮಹತ್ತರವಾದ ಸಾಹಸ ಮಾಡಿ ಬಂದ ಅನುಭವವಾಯಿತು. ಆದರೆ ಇದರಲ್ಲೂ ಒಂದು ಮರೆಯಲಾಗದ ಘಟನೆ ಇದೆ. ಮನೆಯಿಂದ ಮೇಕಪ್‌ ಮಾಡಿ ಬಂದು ಬಸ್‌ನ ರಶ್‌ನಲ್ಲಿ ಎಲ್ಲ ಹಾಳಾಗಿ ಹೋಗಿದ್ದವು. ಯಾವತ್ತೂ ನಿಮ್ಮ ಪ್ರಯಾಣ ಹೇಗಿತ್ತು? ಎಂದು ಕೇಳುತ್ತಿದ್ದ ನನ್ನ ಮನೆಯವರು ಆ ದಿನದ ನಮ್ಮಿಬ್ಬರ ಅವತಾರ ನೋಡಿಯೇ ಅರಿತುಬಿಟ್ಟಿದ್ದರು.

ಸರಕಾರಿ ಬಸ್‌ಗಳಲ್ಲಿ ಬರೆದಿರುವ ಮಂಕು ತಿಮ್ಮನ ಕಗ್ಗದ “ಬಾರೆನೆಂಬುದನು ಬಿಡು ಹರುಷಕ್ಕಿದೆ ದಾರಿ’ ಎಂಬ ಸಾಲು ನನಗೆ ಬಸ್‌ ಇಳಿಯುವ ವೇಳೆ ಅನುಭವಕ್ಕೆ ಬಂದಿತ್ತು.

 ಅಂಜಲಿ ಕೆ. ಸೈಂಟ್‌ ಅಲೋಶಿಯಸ್‌ ಕಾಲೇಜು ಮಂಗಳೂರು

ಟಾಪ್ ನ್ಯೂಸ್

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

12–uv-fusion

Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.