ಯುವ ಕವಿಗಳ ಕಾವ್ಯ ಮಲ್ಲಿಗೆ


Team Udayavani, Jul 27, 2020, 10:00 AM IST

Poems

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಕವಿತೆಗಳು ಎಂಬುದು ಆ ಕ್ಷಣದ ಇತಿಹಾಸ. ಕಡೆಯ ವಾಕ್ಯದಲ್ಲಿ ಪೂರ್ಣವಿರಾಮ ಹಾಕಿದ ಬಳಿಕ ಅದು ಹಳೆದಯದು ಎಂಬ ಹಣೆಪಟ್ಟಿಯೊಂದಿಗೆ ಗುರುತಿಸಿಕೊಳ್ಳುತ್ತದೆ.

ತಮ್ಮ ಮನದಲ್ಲಿ ಆ ಕ್ಷಣ ಹೊಳೆಯುವ ಭಾವನೆಗಳಿಗೆ ಅಕ್ಷರ ರೂಪ ನೀಡುವುದು ಕವಿಗಳ ಗುಣ. ಇದು ಒಂದು ರೀತಿಯಲ್ಲಿ ಯೋಚಿಸುವುದಾರೆ ಇದು ಅವರ ಮನಸ್ಸಿನ ಕನ್ನಡಿ.

ಯುವಿ ಫ್ಯೂಷನ್‌ ಯುವ ಜನರಿಗಾಗಿ ಮೀಸಲಾಗಿರುವ ಸಂಚಿಕೆಯಾಗಿದೆ. ಈ ಬಾರಿ ಆಯ್ದ ಕವನಗಳನ್ನು ಇಲ್ಲಿ ಪ್ರಕಟಿಸಲಾಗಿದೆ.

 

ಒಲವು
ಒಲವ ಮರೆತ ದನಿಯಲ್ಲಿ
ಹೇಳಲಾಗದ ಸತ್ಯವಿದೆ
ಬತ್ತಿಹೋದ ಕಂಗಳಲಿ
ಬಣ್ಣಿಸಲಾಗದ ಕನಸಿದೆ
ಮಮತೆ ಎಂಬ ಉಸಿರಿನಲ್ಲೂ
ತಾಯಿ ಎಂಬ ಹೆಸರಿದೆ
ಮಲಗಲೊಂದು ಮಡಿಲು ಎಂಬ
ಊಹಿಸಲಾಗದ ಸ್ವರ್ಗವಿದೆ
ಕಪ್ಪು ವರ್ಣದ ಕೋಗಿಲೆಯಲ್ಲಿ
ಸುಂದರವಾದ ಕಂಠವಿದೆ
ಒಣಗಿ ನಿಂತ ಮರದೆದೆಯಲ್ಲಿ
ನೀರಿಗಾಗಿ ತವಕವಿದೆ
ಅರಳಿರುವ ಹೂವು ಉದುರಿ
ಬಿಸಿಲಿನ ಬೇಗೆಗೆ ಬಾಡಿದೆ
ದೇವರ ಮುಡಿಗೆ ಸೇರುವೆ ಎಂಬ
ನಂಬಿಕೆಯೊಂದು ಕಳಚಿದೆ
ಮೌನ ಮುರಿದ ಮನಸ್ಸೇ
ಮಾತಿಗೆಂದು ಕಾದಿದೆ
ಹೃದಯದೊಳಗಿನ ಮಾತುಗಳೆಲ್ಲಾ
ಮೌನವನ್ನೇ ತಾಳಿವೆ.

 ರವಿ ಶಿವರಾಯಗೊಳ,ಯುವ ಕೃಷಿಕ, ಸಾಂಗ್ಲಿ, ಮಹಾರಾಷ್ಟ್ರ

 

ಮುಳುಗದ ನಕ್ಷತ್ರ
ಮೂಡಣದಿ ಬೆಳಗುವನು
ಪಡುವಣದಿ ಮುಳುಗುವನು
ದಿನವೂ ಬಿಡದೆ ಬರುವನು
ಜಗಕೆ ಬೆಳಕ ತರುವನು |

ಬೆಳ್ಳಿ ರಥದಲಿ ಬರುವನು
ಸಪ್ತಾಶ್ವಗಳ ಹಿಡಿದವನು
ದಿನಗಳ ದಿನಮಣಿ ಇವನು
ಕಾಲದ ಲೀಲಾಕರ್ತನಿವನು |

ಅಂಧಕಾರವ ಓಡಿಸುವನು
ಜಡತೆಯನು ನೀಗುವನು
ಚೈತನ್ಯವ ತುಂಬುವನು
ಜೀವಿಗಳ ಜೀವ ಇವನು |

ಮುಳುಗದ ನಕ್ಷತ್ರನಿವನು
ಸೌರಮಂಡಲದ ಒಡೆಯನಿವನು
ಕೆಂಡ ಕಾರುವ ಬೆಂಕಿಯಿವನು
ಲೋಕಕೆ ಶಕ್ತಿಯ ಮೂಲ ಇವನು|

ಶ್ರೀಧರಯ್ಯ ಉಬ್ಬಲಗಂಡಿ, ಬೆಂಗಳೂರು

ಕನಸು ಕಂಗಳ ಚೆಲುವೆ…
ಧೋ ಎಂದು ಮಳೆ ಸುರಿಯೆ
ಕನಸು ಕಂಗಳ ಚೆಲುವೆ…
ಅದೇನೋ ಲವಲವಿಕೆ ಅದೇನೋ ಖುಷಿ
ಎದ್ದು ನಡೆದೇ ಬಿಟ್ಟಳಾಕೆ ಮನೆಯಂಗಳಕೆ
ಬಿಡಿಸಿಟ್ಟ ಛತ್ರಿಯ ಹಿಡ್ಕೊಂಡು, ಬೀಳುತ್ತಿಹ ಮಳೇಲಿ
ಅತ್ತಿಂದಿತ್ತ ಇತ್ತಿಂದತ್ತ ನಾಲ್ಕು ಹೆಜ್ಜೆ ನಡೆದೇ ಬಿಟ್ಟಳಾಕೆ
ಧೋ ಎಂದು ಮಳೆ ಸುರಿಯೇ…
ನಡೆದು ಬಂದ ಹಾದಿಯ ಕಹಿಯನ್ನೆಲ್ಲ ಮರೆತು, ಮೈಮರೆತು
ಕನಸಿನ ಹಾದಿಯಲಿ ನಡೆಯುವ ಹೆಜ್ಜೆಗೆ ಗೆಜ್ಜೆ ಕಟ್ಟಿದಳಾಕೆ

ಧೋ ಎಂದು ಮಳೆ ಸುರಿಯೇ…
ಕೇಳಿಕೊಂಡಳಾಕೆ… “ಮಳೆಯೇ, ಮನುಕುಲದ ಯಾತನೆಗೆ ನೀನಾಗುವೆಯಾ ಸಂಜೀವಿನಿ’…
ಹೇಳಿಕೊಂಡಳಾಕೆ..”ಇನ್ನೇನು ಬೇಕಾಗಿಲ್ಲ, ಸಾಕಾಗಿದೆ
ಉಂಡು -ತಿಂದು- ಮಲಗಿ
ದಿನ ಬೆಳಗಾದರೆ ಸಾವು ನೋವಿನ ಸುದ್ದಿ ಕೇಳಿ

ಧೋ ಎಂದು ಮಳೆ ಸುರಿಯೇ…
ಹಂಚಿಕೊಂಡಳಾಕೆ ಮನದ ದುಗುಡವನ್ನೆಲ್ಲ…
ಹಾರೈಸಿದಳಾಕೆ….ಬದುಕು ಮೊದಲಿನಂತಾಗಲಿ
ಇದೆ ಮನದಿ ಧೈರ್ಯ , ಆತ್ಮಸ್ಥೈರ್ಯ…
ಆಶಾಭಾವ, ಜತೆಗೆ ಒಂದಿಷ್ಟು ಮಾಡಲೇಬೇಕಾದ ಕರ್ತವ್ಯಗಳು…
ಕನಸು ಕಂಗಳಾ ಚೆಲುವೆ, ಮಳೆ ನಿಲ್ಲೋ ಮೊದಲೇ ಕಣ್ಣಲ್ಲೇ ಕೇಳಿದಳಾಕೆ…
ಭರವಸೆಯ ಮಳೆ ನೀನಾಗುವೆಯಾ?


ಮಲ್ಲಿಕಾ ಕೆ., ಮಂಗಳೂರು

 

ಟಾಪ್ ನ್ಯೂಸ್

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1ewewwewqqewqeqe

India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್‌ ಹೇಳಿಕೆಗೆ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-uv-fusion

Relationships: ಆಕೆಯ ಸುಂದರ ಬದುಕಿಗೆ ಇಷ್ಟೇ ಸಾಕಲ್ಲವೇ…

7-uv-fusion

Poetry: ಸಾಹಿತ್ಯ ಲೋಕದ ಭಾವಯಾನ ‘ಕವನ’

9-uv-fusion

Sirsi festival: ಶಿರಸಿ ಜಾತ್ರೆ ಎಂದರೆ, ಸುಮ್ಮನೆ ಅಲ್ಲ !

8-uv-fusion

UV Fusion: ಅವಳು

6-nss-camp

NSS Camp: ಜೀವನ ಮೌಲ್ಯ ಕಲಿಸಿದ ಎನ್‌ಎಸ್‌ಎಸ್‌ ಶಿಬಿರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

32

Politics: ಟಿಕೆಟ್‌ ಹಂಚಿಕೆ ಮರುಪರಿಶೀಲಿಸಿ ಎಂದ ವೀಣಾ ಬೆಂಬಲಿಗರಿಗೆ ಸಿಎಂ ತಿರುಗೇಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.