ಮಿಸ್‌ ಯೂ ಸೀನಿಯರ್ಸ್


Team Udayavani, Jul 26, 2020, 3:03 PM IST

Miss you seniors

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಆಗಷ್ಟೆ ನಾವು ವಿಶ್ವ ವಿದ್ಯಾಲಯವನ್ನು ಪ್ರವೇಶಿಸಿದ್ದೆವು. ಕ್ಯಾಂಪಸ್‌ನಲ್ಲಿ ಹೊಸ ಹೊಸ ಜಾಗಗಳ ಹುಡುಕಾಟ. ಹೊಸಬರ ಪರಿಚಯ ಪ್ರಾರಂಭವಾಗಿತ್ತು.

ಇನ್ನು ನಮ್ಮ ಡಿಪಾರ್ಟ್‌ಮೆಂಟ್‌ ವಿವಿಯಲ್ಲೇ ವಿಶೇಷ. ಸಮಯ ಪಾಲನೆ ಮುಖ್ಯ. ಹಾಗಾಗಿ ಮೊದಲ ದಿನ ದಿಂದಲೇ ನಾವೆಲ್ಲಾ ಐದು ನಿಮಿಷ ಮುಂಚಿತವಾಗಿಯೆ ಬಂದು ಕುಳಿತಿದ್ದೆವು. ಎರಡನೆ ಅವಧಿ ಮುಗಿಯುತ್ತಿದ್ದಂತೆ ಕೆಲ ಸೀನಿಯರ್ಸ್‌, ಜೂನಿಯರ್ಸ್‌ ಯಾರೆಂದು ತಿಳಿದುಕೊಳ್ಳುವ ಕುತೂಹಲದಿಂದ ನಮ್ಮ ಕ್ಲಾಸ್‌ ರೂಂನತ್ತ ಲಗ್ಗೆ ಇಟ್ಟಿದ್ದರು.

ನಮಗೂ ಸೀನಿಯರ್ಸ್‌ ಯಾರೆಂದು ತಿಳಿದುಕೊಳ್ಳುವ ಕುತೂಹಲ. ವಿವಿಯ ಬಹುತೇಕ ಎಲ್ಲ ಡಿಪಾರ್ಟ್‌ ಮೆಂಟ್‌ನ ವೆಲ್‌ಕಮ್‌ ಪಾರ್ಟಿ ಮುಗಿದಿತ್ತು. ಆದರೆ ನಮಗೆ ಮಾತ್ರ ಇನ್ನು ವೆಲ್‌ಕಮ್‌ ಪಾರ್ಟಿ ನೀಡಿರಲಿಲ್ಲ. ಅದಕ್ಕಾಗಿ ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದೆವು. ಅಂತು ಆ ದಿನವೂ ಬಂದೇ ಬಿಟ್ಟಿತು.

ನಮ್ಮ ಮೊದಲ ಸೆಮಿಸ್ಟರ್‌ ಬರೀ ಸೀನಿ ಯರ್ಸ್‌ಗಳ ಪರಿಚಯ, ಅವರೊಂದಿಗೆ ಕ್ಯಾಂಪಸ್‌ ಸುತ್ತುವುದು, ಸಾಂಸ್ಕೃತಿಕ ಸ್ಪರ್ಧೆ, ಕೆಲವೊಮ್ಮೆ ಜಗ್ಗಣ್ಣನ ಕ್ಯಾಂಟೀನ್‌, ಬರ್ತ್‌ ಡೇ ಸೆಲೆಬ್ರೇಷನ್‌ ಹೀಗೆ ಸಮಯ ಕಳೆದು ಹೋಯಿತು. ಸೆಮ್‌ ಎಕ್ಸಾಮ್‌ ಬಂದಾಗ ತಡಕಾಡಿ ಸಿಕ್ಕ ಜೆರಾಕ್ಸ್‌ ಹಿಡಿದುಕೊಂಡು ಅಂತೂ ಪಾಸಾದೆವು.

ಎರಡನೇ ಸೆಮಿಸ್ಟರ್‌, ಸೀನಿಯರ್ಸ್‌ ಪ್ರಾಜೆಕ್ಟ್‌ನಲ್ಲಿ ಮುಳುಗಿದ್ದರು. ಹೆಚ್ಚಾಗಿ ಲ್ಯಾಬ್‌ನಲ್ಲೇ ನಮ್ಮ, ಅವರ ಭೇಟಿ. ಇನ್ನು ಸೀನಿಯರ್ಸ್‌ ಹೊರಡುವ ಸಮಯ ಸನಿಹವಾಗುತ್ತಾ ಬಂತು. ಅದೆ ಸಮಯಕ್ಕೆ ವಿವಿಯಿಂದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆ ಪ್ರಾರಂಭ ವಾಗಿತ್ತು. ಆಗ ಅವರೊಂದಿಗೆ ನಮ್ಮ ಬಾಂಧವ್ಯ ಇನ್ನೂ ಹೆಚ್ಚಾಗಿತ್ತು. ತರಗತಿ ಮುಗಿಯಲು ಒಂದು ತಿಂಗಳು ಬಾಕಿ ಇತ್ತು. ಆದರೆ ಸೀನಿಯರ್ಸ್‌ ಅದಾಗಲೇ ಪ್ರಾಜೆಕ್ಟ್ ನಲ್ಲಿ ನಿರತರಾಗಿದ್ದರು. ಮಧ್ಯದಲ್ಲಿ ಅದು ಇದು ರಜೆ ಬೇರೆ, ನಮಗೂ ಸಮಯವಿಲ್ಲ.

ಇನ್ನು ತಡ ಮಾಡಬಾರದೆಂದು ಎಲ್ಲರೂ ಮಾತನಾಡಿ ಬೀಳ್ಕೊಡುಗೆ ಸಮಾರಂಭದ ದಿನಾಂಕವನ್ನು ನಿಗದಿಪಡಿಸಿದೆವು. ನಮಗೆ ಉಳಿದಿರುವುದು ಕೇವಲ ಮೂರು ದಿನ. ಹಾಗಾಗಿ ಎಲ್ಲರೂ ಒಂದೊಂದು ಕೆಲಸ ಹಂಚಿಕೆ ಮಾಡಿಕೊಂಡು ಹಿಂದಿನ ದಿನ ಸೀನಿಯರ್ಸ್‌ಗಳನ್ನು ಆಹ್ವಾನಿಸಿದೆವು.
ಎಲ್ಲರ ಮನದಲ್ಲೂ ವಿದಾಯದ ನೋವು, ಹೊರಗೆ ಅನಿವಾರ್ಯದ ಮಂದಹಾಸ.

ನೆಚ್ಚಿನ ಗುರುಗಳ ಮಾತು ಕೇಳಿ ಏನನ್ನಾದರೂ ಸಾಧಿಸಬೇಕೆಂದು ಛಲಕ್ಕೆ ಹನಿ ನೀರೆರೆದಂತಾಗಿತ್ತು. ವಿದಾಯದ ನೋವಿನಲ್ಲಿರುವ ಅವರನ್ನು ರಂಜಿಸಲು ಕೆಲವು ಯೋಜನೆಗಳನ್ನು ಮೊದಲೇ ಸಿದ್ಧ ಪಡಿಸಿದ್ದರಿಂದ ಅವರನ್ನು ಸ್ವಲ್ಪ ಮಟ್ಟಿಗಾದರೂ ನಗಿಸಿದೆವು. ಇನ್ನು ಕೊನೆಯ ಒಂದು ತಿಂಗಳು ಬಾಕಿ ಇರುವಾಗ ಸೀನಿಯರ್ಸ್‌ ಗಳೊಂದಿಗಿನ ಒಡನಾಟ ಮತ್ತಷ್ಟು ಹೆಚ್ಚಿತ್ತು. ಇಂಟರ್‌ನಲ್ಸ್‌ ಮುಗಿದು ಸೆಮ್‌ ನಮ್ಮ ಕಣ್ಣೆದುರಲ್ಲೆ ಇತ್ತು. ಡಿಪಾರ್ಟ್‌ಮೆಂಟ್‌ನಲ್ಲಿ ಮಾತನಾಡಿದ್ದು ಸಾಲದೆ ಕೆಲವೊಮ್ಮೆ ಸೀನಿಯರ್ಸ್‌ ಜತೆ ಕಾನ್ಫರೆನ್ಸ್‌ ಕಾಲ್‌ ಮಾಡಿಕೊಂಡು ಸಾಕಷ್ಟು ಹರಟುತ್ತಿದ್ದೆವು. ಸೆಮ್‌ ಎಕ್ಸಾಮ್‌ ಕೂಡಾ ಮುಗಿಯಿತು. ಕೆಲವರಿಗೆ ಹೈದರಬಾದ್‌ನಲ್ಲಿ ಉದ್ಯೋಗ ಲಭಿಸಿತ್ತು. ಇನ್ನು ಕೆಲ ವರು ಇಂಟೆನ್‌ಶಿಪ್‌ಗಾಗಿ ಬೆಂಗಳೂರಿಗೆ ಹೊರಡಲು ಸಿದ್ಧರಾಗಿದ್ದರು.

ಅಂತೂ ಎರಡು ವರ್ಷಗಳ ಹಲವು ನೆನಪುಗಳಿಗೆ ಸಾಕ್ಷಿಯಾದ ಕ್ಯಾಂಪಸ್‌ನನ್ನು ಬಿಟ್ಟು ಹೋಗು ವಾಗ ನೋವು ಎದೆಗೆ ತಟ್ಟು ತಿತ್ತು. ಸುಂದರ ಕ್ಷಣಗಳಿಗೆ ಕಾರಣರಾದ ಸೀನಿಯರ್ಸ್‌ಗೆ ಮನದಾಳದ ವಿದಾಯ. ಮಿಸ್‌ ಯೂ ಸೀನಿಯರ್ಸ್‌. ಆಲ್‌ ದಿ ಬೆಸ್ಟ್‌.

-ಪವನ್‌ ಕುಮಾರ್‌ ಎಂ., ಕುವೆಂಪು ವಿಶ್ವವಿದ್ಯಾಲಯ

 

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

17-uv-fusion

UV Fusion: ನಿನ್ನೊಳಗೆ ನೀ ಇರುವಾಗ…

16-uv-fusion

UV Fusion: ದೃಷ್ಟಿಗೆ ತಕ್ಕ ಸೃಷ್ಟಿ

15-uv-fusion

Government School: ಸರಕಾರಿ ಶಾಲೆಯನ್ನು ಉಳಿಸಿ-ಬೆಳೆಸೋಣ

14-uv-fusion

Role: ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ನಮ್ಮ ಪಾತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.