ಸೋಲಿನಿಂದ ಗೆಲುವು ಅವಮಾನದಿಂದಲೇ ಸಮ್ಮಾನ


Team Udayavani, Apr 26, 2021, 8:41 PM IST

Fails

ಸೋಲು-ಗೆಲುವು ಬದುಕಿನಲ್ಲಿ ಸಾಮಾನ್ಯ. ಅವುಗಳನ್ನು ಸಮನಾಗಿ ಸ್ವೀಕರಿಸುವ ಮನೋಭಾವ ನಮ್ಮದಾಗಬೇಕು. ಸೋಲು ಅನುಭವಿಸಿದಾಗ ಕುಗ್ಗಬಾರದು.

ಹಾಗೆಯೇ ಹಿಂಜರಿಯಬಾರದು. ಅದೇ ರೀತಿಯಾಗಿ ಸೋಲು- ಗೆಲುವಿನ ಮೊದಲ ಮೆಟ್ಟಿಲುಗಳೆಂದು ಮುನ್ನಡೆಯಬೇಕು. ಸೋತ ನಮಗೆ ಮುಂದಿನ ಪ್ರಯತ್ನದಿಂದ ಗೆಲುವು ಕಟ್ಟಿಟ್ಟ ಬುತ್ತಿ. ಆದರೆ ಸಾಧನೆ ಕಡೆಗೆ ಸಾಗಬೇಕಾದರೆ ಸತತವಾದ ಪರಿಶ್ರಮ ಪಡಲೇಬೇಕು. ಅದೇ ರೀತಿಯಾಗಿ ಯಾವುದೇ ಒಂದು ಕೆಲಸ ಕಾರ್ಯಗಳನ್ನು ಮಾಡುವಂತಹ ಸಮಯದಲ್ಲಿ ಯಾರಾದರೂ ಅವಮಾನವನ್ನು ಮಾಡಿಯೇ ಮಾಡುತ್ತಾರೆ.

ಅವಮಾನದಿಂದ ನಿಮ್ಮ ಆತ್ಮಸಾಕ್ಷಿಗೆ ನೋವಾಗುತ್ತದೆ. ಆತ್ಮಸಾಕ್ಷಿ ಗಟ್ಟಿಗೊಳಿಸಿ ನಿಮ್ಮಲ್ಲಿ ಗೆಲ್ಲಬೇಕು ಎಂಬ ಹಠ ಮೂಡಬೇಕು. ಒಂದಲ್ಲ ಒಂದು ದಿನ ಗೆದ್ದು ಅವಮಾನ ಮಾಡಿಸಿಕೊಂಡವರಲ್ಲಿ ಸಮ್ಮಾನವನ್ನು ಮಾಡಿಸಿಕೊಳ್ಳಬೇಕು. ಅದೇ ಜೀವನದ ಪರಮೋತ್ಛ ಗುರಿಯಾಗಬೇಕು.

ಈ ದೇಶ ನಿನ್ನ ಪ್ರತಿಭೆಯನ್ನು, ಯಶಸ್ಸಿನ ಕಠಿನ ಹಾದಿಯನ್ನು ಕೊಂಡಾಡುವಂತಾಗಬೇಕು. ಗುರಿಯ ಕಡೆಗೆ ಗಮನವಿದ್ದಾಗ, ಸದಾ ಮನದಲ್ಲಿ ಸಾಧನೆಯ ಕನಸು ಕಾಣುವಂತಾಗಬೇಕು. ಇಡೀ ಪ್ರಪಂಚವೇ ನಮ್‌ ಕಡೆ ತಿರುಗಿ ಸಲಾಂ ಹೊಡೆಯುವಂತಾಗಬೇಕು. ಸಾಧನೆಯ ಹಸಿವು, ಗೆಲುವಿನ ಹಾಹಾಕಾರ ಕಾಡುತ್ತಲೇ ಇರಬೇಕು. ಇಂತಹ ಸಾಧನೆಯನ್ನು ಮಾಡಿದವರಲ್ಲಿ ಒಬ್ಬರೆನಿಸಿದ, ಜಾತಿ ಎಂಬ ವಿಷ ಬೀಜವ ಕಿತ್ತೆಸೆದ, ಸರಸ್ವತಿ ಪುತ್ರ ಡಾ| ಬಿ.ಆರ್‌. ಅಂಬೇಡ್ಕರ್‌ ಅವರ ಜೀವನ ರೋಮಾಂಚಕವಾದುದು. ಅಷ್ಟೇ ಕಷ್ಟವಾದದ್ದು. ಅಂಬೇಡ್ಕರ್‌ ಜೀ ಅವರನ್ನು ಜಾತಿಯ ಹಣೆಪಟ್ಟಿಯಿಂದ ಅವಮಾನ, ಹಿಂಸೆಗೆ ಅನುಭವಿಸಿದರೂ ಮುಂದೆ ತಮ್ಮ ಪ್ರತಿಭೆಯಿಂದ ಜಗತ್ತನ್ನೇ ಬೆಳಗುವ ಸಂವಿಧಾನ ನೀಡಿದರು.

ಇನ್ನು ಅಂತೆಯೇ ವಿಶ್ವೇಶ್ವರಯ್ಯನವರು ತಮ್ಮ ಬಡತನದ ನಡುವೆ ಕಂದೀಲು ಬೆಳಕಿನಲ್ಲಿ ಓದಿ ದೇಶ ಕಂಡ ಶ್ರೇಷ್ಠ ಎಂಜಿನಿಯರ್‌ರಾದರು. ಹಾಗಾಗಿ ಸಾಧನೆ ಎಂಬುದು ಯಾವತ್ತೂ ಸ್ವಾರ್ಥಿ ಅಥವಾ ವಿಲಾಸಿಗಳ ಸ್ವತ್ತಲ್ಲ. ಅದು ಸಾಧಕನ ಸ್ವತ್ತು ಎಂಬುದು ಸರ್ವವಿಧಿತ.

ಕೇವಲ ಮಾರುಕಟ್ಟೆಯಲ್ಲಿ ತರಕಾರಿ ಮಾರುವ ಬಡವನ ಮಗ ಇಂದು ಪ್ರಪಂಚದ ದೊಡ್ಡ ಶ್ರೀಮಂತನಾದ ಕಥೆ ನಾವೆಲ್ಲರೂ ಕೇಳಿರುತ್ತೇವೆ. ಇಂತಹ ಕಥೆಗಳು ನಮಗೆ ಸ್ಫೂರ್ತಿಯಾಗಬೇಕು. ಸ್ಫೂರ್ತಿ ಎಂಬುದು ಬೆಳಕಿನ ಕಿಡಿ ಇದ್ದಂತೆ. ಇದು ನಮ್ಮನ್ನು ಆವರಿಸಿದರೆ ಸಾಕು ನಾವು ಜಗತ್ತಿಗೆ ಬೆಳಕು ಆಗಲು ಸಾಧ್ಯ. ಇಂತಹ ಸ್ಫೂರ್ತಿಗೆ ಹಲವಾರು ಜನರು ಈಗಲೂ ನಮ್ಮ ಮುಂದೆ ಇದ್ದಾರೆ. ಐಎಎಸ್‌, ಐಪಿಎಸ್‌ ಅಧಿಕಾರಿಗಳು, ಕ್ರೀಡಾಳುಗಳು, ಕಲಾವಿದರು, ಸಾಹಿತಿಗಳು ಸಾಧನೆಯ ಹಿಂದೆ ಹಲವು ರೀತಿಯ ಕಷ್ಟ-ನಷ್ಟಗಳನ್ನು ಅನುಭವಿಸಿದವರೇ ಈ ವಿಚಾರವಾಗಿ ನನಗೆ ಕರ್ನಾಟಕ ಐಪಿಎಸ್‌ ಅಧಿಕಾರಿ ರವಿ ಚನ್ನಣ್ಣನವರು ಸ್ಫೂರ್ತಿಯಾಗುತ್ತಾರೆ. ಅವರ ಬದುಕು-ಕರ್ತವ್ಯ ವೈಯಕ್ತಿಕವಾಗಿ ನನಗೆ ಪ್ರೇರಣೆಯಾದುದು.

ಬಡತನ ಎಂಬ ಬೇಗೆಯನ್ನು ಅವರು ಸರಿಯಾಗಿ ಮೆಟ್ಟಿ ನಿಂತು ಇಂದು ದೊಡ್ಡ ಅಧಿಕಾರಿಯಾಗಿದ್ದಾರೆ. ಇದೇ ನನಗೆ ಪ್ರೇರಣೆ. ಇದು ನಾನು ಬೆಳಕಾಗಲು ಕಿಡಿ ಎಂಬುದು ನನಗೆ ಅನಿಸಿದೆ.

 ಶಬರೀಶ್‌ ಶಿರ್ಲಾಲ್‌, ಎಂಪಿಎಂ ಕಾಲೇಜು, ಕಾರ್ಕಳ 

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-uv-fusion

Relationships: ಆಕೆಯ ಸುಂದರ ಬದುಕಿಗೆ ಇಷ್ಟೇ ಸಾಕಲ್ಲವೇ…

7-uv-fusion

Poetry: ಸಾಹಿತ್ಯ ಲೋಕದ ಭಾವಯಾನ ‘ಕವನ’

9-uv-fusion

Sirsi festival: ಶಿರಸಿ ಜಾತ್ರೆ ಎಂದರೆ, ಸುಮ್ಮನೆ ಅಲ್ಲ !

8-uv-fusion

UV Fusion: ಅವಳು

6-nss-camp

NSS Camp: ಜೀವನ ಮೌಲ್ಯ ಕಲಿಸಿದ ಎನ್‌ಎಸ್‌ಎಸ್‌ ಶಿಬಿರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.