ಭಾರತದ ಕೊನೆಯ ಗ್ರಾಮಕ್ಕೆ ಸ್ವಾಗತ


Team Udayavani, Aug 31, 2020, 9:00 AM IST

Mana-Uttarakhand

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಮಾಣಾಗೆ ಪ್ರವೇಶಿಸುತ್ತಿದ್ದಂತೆ ಕಾಣ ಸಿಗುವ ಈ ಬೋರ್ಡ್‌ ಎಲ್ಲರನ್ನೂ ಆಕರ್ಷಿಸುತ್ತದೆ.

ಜತೆಗೆ ಅಲ್ಲಿನ ಅಂಗಡಿಗಳಲ್ಲಿಯೂ ಈ ರೀತಿಯ ಬೋರ್ಡ್‌ ಅಳವಡಿಸಲಾಗಿದೆ.

ಉತ್ತರಾಖಂಡದ ಮಾಣಾ ಭಾರತದ ಕೊನೆಯ ಗ್ರಾಮ ಎಂದೇ ಪರಿಗಣಿಸಲ್ಪಡುತ್ತದೆ.

ಸಮುದ್ರ ಮಟ್ಟದಿಂದ ಸುಮಾರು 3,118 ಮೀಟರ್‌ ಎತ್ತರದಲ್ಲಿರುವ ಮಾಣಾ ಚಮೋಲಿ ಜಿಲ್ಲೆಯಲ್ಲಿದೆ.

ಈ ಗ್ರಾಮ ಸರಸ್ವತಿ ನದಿಯ ದಡದಲ್ಲಿ ತಲೆ ಎತ್ತಿ ನಿಂತಿದೆ. ಇಲ್ಲಿಂದ ಪ್ರಮುಖ ಯಾತ್ರಾ ಸ್ಥಳ ಬದರೀನಾಥಕ್ಕೆ 5 ಕಿ.ಮೀ. ಅಂತರ.

ಗೊಂದಲ
ಭಾರತದ ಕೊನೆಯ ಗ್ರಾಮದ ವಿಚಾರದಲ್ಲಿ ಕೆಲವು ಗೊಂದಲಗಳಿವೆ. ಹಿಮಾಚಲ ಪ್ರದೇಶದ ಚಿತ್ಕುಲ್‌ ಭಾರತದ ಕೊನೆಯ ಗ್ರಾಮ ಎನ್ನುವ ವಾದವೂ ಇದೆ. ಚಿತ್ಕುಲ್‌ ಇಂಡೋ-ಟಿಬೆಟ್‌ ಗಡಿಯಲ್ಲಿರುವ ಕೊನೆಯ ಜನವಸತಿ ಗ್ರಾಮ. ಆದರೆ ಮಾಣಾ ಭಾರತದ ಕೊನೆಯ ಗ್ರಾಮ ಎಂದೇ ಗುರುತಿಸಲ್ಪಡುತ್ತದೆ.

ದೇಶದ ಕೊನೆಯ ಚಹಾದಂಗಡಿ
ಮಾಣಾದ ವಿವಿಧೆಡೆ ಕಾಣ ಸಿಗುವ ಭಾರತದ ಕೊನೆಯ ಚಹಾ, ಕಾಫಿ ಅಂಗಡಿ ಎನ್ನುವ ಬೋರ್ಡ್‌ ಪ್ರವಾಸಿಗರನ್ನು ಆಕರ್ಷಿಸುತ್ತದೆ. ವಿಶೇಷ ಎಂದರೆ ಮಾಣಾ ಇಂಡೋ-ಚೀನಾ ಗಡಿಯ ಕೇವಲ 24 ಕಿ.ಮೀ. ದೂರದಲ್ಲಿದೆ.

ಪೌರಾಣಿಕ ಹಿನ್ನೆಲೆ
ಈ ಗ್ರಾಮಕ್ಕೆ ಪೌರಾಣಿಕ ಹಿನ್ನೆಲೆಯೂ ಇದ್ದು, ಸಾವಿರಾರು ವಿಶ್ವಾಸಿಗಳನ್ನು ತನ್ನೆಡೆಗೆ ಸೆಳೆಯುತ್ತದೆ. ಮಹಾಭಾರತಕ್ಕೂ ಮಾಣಾ ಗ್ರಾಮಕ್ಕೂ ಸಂಬಂಧವಿದೆ ಎನ್ನುವ ನಂಬಿಕೆಯಿದೆ. ಪಾಂಡವರು ಮಾಣಾ ಗ್ರಾಮದ ಮೂಲಕ ಸ್ವರ್ಗಕ್ಕೆ ತೆರಳಿದರು ಎನ್ನಲಾಗುತ್ತದೆ. ಇಲ್ಲಿ ಸರಸ್ವತಿ ನದಿಗೆ ಅಡ್ಡಲಾಗಿ ಬಂಡೆಯ ಸೇತುವೆಯೊಂದಿದ್ದು ಇದನ್ನು ಭೀಮ ಪುಲ್‌ ಎಂದು ಕರೆಯುತ್ತಾರೆ. ಹಿಂದೆ ಭೀಮ ನದಿ ದಾಟಲು ಈ ಸೇತುವೆ ನಿರ್ಮಿಸಿದ ಎನ್ನುವುದು ಪ್ರತೀತಿ.

ಭೇಟಿ ನೀಡಬಹುದಾದ ಸ್ಥಳಗಳು: ಮಾಣಾ ಸುತ್ತಮುತ್ತ ಅನೇಕ ಧಾರ್ಮಿಕ, ಪ್ರೇಕ್ಷಣೀಯ ಸ್ಥಳಗಳಿವೆ. ಅವುಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ.

ವ್ಯಾಸ ಗುಫಾ: ಮಾಹಾಭಾರತ ಕೃರ್ತ ವೇದವ್ಯಾಸ ಇಲ್ಲಿರುವ ಗುಹೆಯಲ್ಲಿದ್ದುಕೊಂಡು ವೇದಗಳನ್ನು ಬರೆದರು ಎನ್ನಲಾಗುತ್ತಿದೆ. ಈ ಗುಹೆ 5 ಸಾವಿರ ವರ್ಷಗಳಿಗಿಂತಲೂ ಪ್ರಾಚೀನವಾದುದು ಎನ್ನುವ ಲೆಕ್ಕಾಚಾರವಿದೆ. ಹೀಗಾಗಿ ಈ ಗುಹೆ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ವಸುಧಾರಾ ಜಲಪಾತ: ಮಾಣಾದ ಇನ್ನೊಂದು ಪ್ರಮುಖ ಆಕರ್ಷಣೆ ಈ ವಸುಧಾರಾ ಜಲಪಾತ. ಪಾಂಡವರು ಕೆಲವು ಸಮಯ ಇಲ್ಲಿ ತಂಗಿದ್ದರು ಎನ್ನುವ ನಂಬಿಕೆ ಮನೆ ಮಾಡಿದೆ.

ತಾಪ್ತ್ ಕುಂಡ್‌: ತಪ್ತ್ ಕುಂಡ್‌ ಅಗ್ನಿ ದೇವತೆಯ ವಾಸ ಸ್ಥಾನ ಎಂದೇ ಪರಿಗಣಿಸಲ್ಪಡುತ್ತದೆ. ಕೆಲವು ಪ್ರತ್ಯೇಕ ದಿನಗಳಲ್ಲಿ ಈ ಕುಂಡದ ನೀರಿಗೆ ವಿಶೇಷ ಔಷಧೀಯ ಗುಣವಿದ್ದು, ಚರ್ಮ ರೋಗ ಗುಣಪಡಿಸುವ ಶಕ್ತಿ ಇರುತ್ತದೆ ಎನ್ನಲಾಗುತ್ತದೆ.

ಚಾರಣಿಗರ ಸ್ವರ್ಗ
ಮಾಣಾ ಚಾರಣಿಗರಿಗೆ, ಸಾಹಸಪ್ರಿಯರಿಗೆ ಅನೇಕ ಅವಕಾಶಗಳನ್ನು ತೆರೆದಿಡುತ್ತದೆ. ದೇಶದಲ್ಲಿ ಚಾರಣಕ್ಕಿರುವ ಉತ್ತಮ ಸ್ಥಳಗಳಲ್ಲಿ ಇದೂ ಒಂದು ಎಂದು ಪರಿಗಣಿಸಲಾಗುತ್ತದೆ. ಇಲ್ಲಿನ ನೀಲಕಂಠ ಶಿಖರ ಸಮುದ್ರ ಮಟ್ಟದಿಂದ 6,597 ಅಡಿ ಎತ್ತರದಲ್ಲಿದ್ದು, ಚಾರಣಿಗರ ಪಾಲಿಗೆ ಸೋಜಿಗ.

ತಲುಪುವ ಬಗೆ
ಹರಿದ್ವಾರ ಸಮೀಪದ ರೈಲು ನಿಲ್ದಾಣ. ಹರಿದ್ವಾರದಿಂದ 275 ಕಿ.ಮೀ. ದೂರದಲ್ಲಿದೆ ಭಾರತದ ಕೊನೆಯ ಗ್ರಾಮ. ಇಲ್ಲಿಂದ ಬಸ್‌, ಟ್ಯಾಕ್ಸಿ ಮೂಲಕ ತೆರಳಬಹುದು.

 ರಮೇಶ್‌ ಬಿ., ಕಾಸರಗೋಡು 

 

 

ಟಾಪ್ ನ್ಯೂಸ್

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-rcb

RCB: ಈ  ಸಲ ಕಪ್‌ ನಮ್ಮದು…

18

Honesty: ಪ್ರಾಮಾಣಿಕರಿಗಿದು ಕಾಲವಲ್ಲ…

17

Sirsi: ಶಿರಸಿ ಮಾರಿಕಾಂಬೆ ವೈಭವದ ಜಾತ್ರೆ

16-wtr

Water: ನೀರು ಭುವನದ ಭಾಗ್ಯ

15-mother

Mother: ಕಣ್ಣಿಗೆ ಕಾಣುವ ದೇವರು ಅಂದರೆ ಅಮ್ಮ ತಾನೇ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

1-qwqeqewq

Kunigal:ನವಮಿಯಂದು ಪಾನಕ ಕುಡಿದ 60 ಮಂದಿ ಅಸ್ವಸ್ಥ, ಮೂವರು ಗಂಭೀರ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.