ಮಳೆ ಬಂದರೆ ಮನವೂ ಹಸಿಯಾಗುತ್ತದೆ


Team Udayavani, Jun 9, 2021, 11:00 AM IST

ಮಳೆ ಬಂದರೆ ಮನವೂ ಹಸಿಯಾಗುತ್ತದೆ

ಹೊರಗೆ ಬಿಟ್ಟೂ ಬಿಡದ ತುಂತುರು ಹನಿ. ಇತ್ತ ಮನದೊಳಗೆ ಎಂದೂ ಮಾಸದ ನೆನಪುಗಳ ಗಣಿ. ಸುಮ್ಮನೆ ಒಂದು ಸಲ ಕೆದಕಿ ನೋಡಿ. ನೀವು ತುಳಿದು ಬಂದ ಹಾದಿ ನಿಮ್ಮನ್ನೇ ಅಚ್ಚರಿಗೊಳಿಸುತ್ತ ದೆ. ಕಾಗದದ ದೋಣಿ ಮಾಡಿ ನೀರಿನಲ್ಲಿ ತೇಲಿ ಬಿಟ್ಟ ಆ ಬಾಲ್ಯದ ದಿನಗಳಿಂದ ಹಿಡಿದು, ಹರೆಯದ ಸೊಗಸಿನಲ್ಲಿ ಗೆಳೆಯ, ಗೆಳತಿಯ ಕೈ ಹಿಡಿದು ನಡೆದ ಸುಂದರ ಸಂಜೆಗಳ ತರ ಹಳೆಯ ನೆನಪುಗಳು ಎದೆಯ ಗೂಡಿನ ಮೂಲೆಯೊಂದರಲ್ಲಿ ಬೆಚ್ಚಗೆ ಕುಳಿತಿರುತ್ತವೆ. ಲೆಕ್ಕವಿಲ್ಲದಷ್ಟು ನೆನಪುಗಳು ಮನದಲ್ಲಿ ಬೆಚ್ಚಗೆ ಕೂತಿರುತ್ತವಾದರೂ ನಾವು ತೆರೆದು ನೋಡುವುದು ಎಲ್ಲೋ ಕೆಲವನ್ನು ಮಾತ್ರ. ಮಳೆಗಾಲ ಸುಂದರ ನೆನಪುಗಳಿಗೊಂದು ವೇದಿಕೆ.

ತುಂತುರು ಮಳೆ ಹನಿಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ, ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಪ್ರತಿಯೊಬ್ಬರೂ ಒಂದಲ್ಲ ಒಂದು ಸಮಯದಲ್ಲಿ ಮಳೆಯನ್ನಿಷ್ಟ ಪಡುವವರೇ. ಪುಟಾಣಿಗಳು ಮಳೆಯಲ್ಲಿ ನೆನೆದು ಕುಣಿದು ಪಡುವ ಖುಷಿಯನ್ನೇ ದೊಡ್ಡವರು ಕೂಡ ಪಡೆಯುತ್ತಾರೆ. ಅದರಲ್ಲೂ ಮನಸ್ಸು ಸಂಭ್ರಮದಿಂದಿರುವಾಗ, ಆಪ್ತರಾದವರು ಜತೆಗಿದ್ದಾಗ ಮಳೆ ಕೊಡುವ ಆನಂದವೇ ಬೇರೆ!

ಕೆಲವರಂತೂ ಮಳೆಯ ಸೊಬಗನ್ನು ಆಸ್ವಾದಿಸಿ ಪದಗಳಲ್ಲಿ ಸೆರೆಹಿಡಿದು ಅದೆಷ್ಟೋ ಮನಸ್ಸುಗಳನ್ನು ಬೆಚ್ಚಗಾಗಿಸಿದ್ದಾರೆ. ಮಳೆಯಲ್ಲೊಂದು ಮನಮೀಟುವ ಹಾಡು ಇದ್ದರೆ ಅದೆಂತಹ ಮುದವಿದ್ದೀತು ಅಲ್ಲವೇ? ಅವನ್ನು ಆಸ್ವಾದಿಸಿ ಮನದಣಿಯಬೇಕು. ಭಾವುಕ ಮನದ ಕನವರಿಕೆಗಳಿಗೆ ಮಳೆಗಿಂತ ಉತ್ತಮ ಗೆಳೆಯ ಬೇರಿಲ್ಲ. ಬತ್ತಿ ಹೋದ ಮನದಲ್ಲೂ ಸಣ್ಣ ಚಿಗುರು ಮೂಡಿಸುವ ಶಕ್ತಿ ಮಳೆಗಿದೆ. ಬಿಡದೇ ಸುರಿವ ಮಳೆ ಕೆಲವರಿಗೆ ಕಿರಿಕಿರಿ ತಂದರೆ ಕೆಲವರಿಗೆ ಹಿಡಿಸಲಾರದಷ್ಟು ಸಡಗರ ತರುವುದು. ಮನಸ್ಸು ತೆರೆದು ನಿಂತಿರಾದರೆ ನೆನಪುಗಳ ಸುಗ್ಗಿಯೇ ನಿಮ್ಮದಾಗುವುದು.

ಕೆಲಸದ ಬಾಹುಳ್ಯ ಒತ್ತಡ, ಸಮಸ್ಯೆಗಳು, ಗೊಂದಲ, ನೋವು, ನಿರಾಸೆ, ಗೋಜಲುಗಳು ಯಾವ ಮನಸ್ಸಿಗೂ, ಯಾರ ಬದುಕಿಗೂ ಹೊರತಾದುದಲ್ಲ. ಇಂತಹ ಮನಸ್ಸುಗಳಿಗೊಂದಿಷ್ಟು ಚೈತನ್ಯ ತುಂಬಬೇಕೆಂದರೆ ನೀವು ಮಳೆಯಲ್ಲಿ ಹೆಜ್ಜೆ ಹಾಕಬೇಕು. ಮುಂಜಾನೆಯಾದರೂ ಸರಿ, ಮುಸ್ಸಂಜೆಯಾದರೂ ಸರಿ, ಮಳೆಯೊಂದಿಗೆ ಮಾತಾಡಿ ನೋಡಿ. ನಿಮ್ಮ ಮನದ ಮಾತುಗಳಿಗೆ ಮಳೆಗಿಂತ ಕೇಳುಗ ಬೇರಿಲ್ಲ. ಮಳೆಯನ್ನೇ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ನೋಡುತ್ತಾರೆ. ಕೆಲವರಿಗೆ ಬರೀ ಖುಷಿಯನ್ನೇ ನೀಡುವ ಮಳೆ ಮತ್ತೆ ಕೆಲವರಿಗೆ ಬೆಟ್ಟದಷ್ಟು ಬೇಸರ ತರಬಹುದು. ನನ್ನ ವಿಚಾರಕ್ಕೆ ಬಂದರೆ ಈ ಎರಡನ್ನೂ ಕಂಡಿದ್ದೇನೆ. ಅವಳೊಂದಿಗಿರುವಾಗ ಪ್ರತಿ ಹನಿಯನ್ನೂ ಆಸ್ವಾದಿಸಿದ ಮನ, ಅವಳಿಲ್ಲದಾಗ ಬೋರೆಂದು ಅತ್ತಿದ್ದು ಇದೆ. ಬಿಟ್ಟು ಬಿಡಲಾರದ ಅನುಬಂಧ ಸಣ್ಣ ತೆರೆಯಾಗಿ ಕಳಚಿಕೊಳ್ಳುವಾಗ ಜೀವ ಹಿಡಿಯಾಗಿತ್ತು.

ಬೇಕೇ ಬೇಕೆಂದು ಹಿಡಿದಿಟ್ಟುಕೊಳ್ಳಲಾರದ ಅಸಹಾಯಕತೆಗೆ ಕಂಬನಿಯುಕ್ಕಿತ್ತಾದರೂ ಹೊರ ತೋರಲಾರದ ಅಸಹಾಯಕತೆಗೆ ಮೌನದ ಮೊರೆ ಹೊಕ್ಕಿದ್ದು ಇಂದೂ ಆ ಮೌನದಿಂದ ಹೊರಬರಲಾಗುತ್ತಿಲ್ಲ, ಆದರೆ ಮಳೆ ಬಂದಾಗ ತೇವಗೊಳ್ಳುವ ನೆಲದಂತೆ ಈ ಮನವೂ ಹಸಿಯಾಗುತ್ತದೆ.

 

ಬಸವರಾಜ ಎನ್‌.

ಕೊಪ್ಪಳ

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-uv-fusion

Social Media and Youths: ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋದ ಯುವ ಸಮೂಹ

7-uv-fusion

Summer Heat: ಕಡುಬೇಸಗೆಯಲ್ಲಿರಲಿ ಪ್ರಾಣಿಪಕ್ಷಿಗಳ ಮೇಲೆ ಕರುಣೆ

10-uv-fusion

Lifestyle‌: ಕಳೆದು ಹೋಗುತ್ತಿರುವಂತಹ ಆರೋಗ್ಯಕರ ಜೀವನ ಶೈಲಿ

8-uv-fusion-2

Photographers: ನೆನಪಿನ ನಾವಿಕರಿಗೆ ಸಲಾಂ…

6-uv-fusion

Summer: ಬಿಸಿಲಿನ ತಾಪಕ್ಕೆ ಕಂಗಾಲಾಗಿರುವ ಜೀವ ಸಂಕುಲ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.