ಬೈಕ್‌ ಮೂಲಕ ಒಂಟಿಯಾಗಿ ಜಗತ್ತು ಸುತ್ತಿ ದಾಖಲೆ ಬರೆದ ಕ್ಯಾಂಡಿಡಾ


Team Udayavani, Aug 21, 2020, 3:40 PM IST

louis 1

ನಮಗೆ ಇಷ್ಟವಾಗಿರುವ ಸ್ಥಳಕ್ಕೆ ಬೈಕ್‌ನಲ್ಲಿ ಪ್ರಯಾಣಿಸುವುದು ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ.

ಇನ್ನೂ ಅದರಲ್ಲಿ ಸೊಲೋ ರೈಡ್‌ ಹೊರಟರಂತೂ ಆ ಖುಷಿಗೆ ಪಾರವಿಲ್ಲ.

ಏತನ್ಮಧ್ಯೆ ಬೆಂಗಳೂರಿನ ಮಹಿಳೆ ಬೈಕ್‌ನಲ್ಲಿ ಸೋಲೋ ರೈಡ್‌ ಮೂಲಕ ಪ್ರಪಂಚ ಪರ್ಯಟನೆಯ ಕನಸು ಸಾಕಾರಗೊಳಿಸಿದ್ದಾರೆ.

ಬೆಂಗಳೂರು ಮೂಲದ 28 ವರ್ಷದ ಕ್ಯಾಂಡಿಡಾ ಲೂಯಿಸ್‌ ಎಂಬುವಾಕೆ ಬೆಂಗಳೂರಿನಿಂದ ಆಸ್ಟ್ರೇಲಿಯದ ಸಿಡ್ನಿಗೆ ತನ್ನ ಬೈಕ್‌ನ ಮೂಲಕ ಸೊಲೋ ರೈಡ್‌ ಮಾಡಿ ಜಗತ್ತಿನ ಗಮನ ಸೆಳೆದಿದ್ದಾಳೆ.

ಇವರು ಸುಮಾರು 120 ದಿನಗಳಲ್ಲಿ 10 ದೇಶಗಳನ್ನು ಸುತ್ತಿದ್ದು, ಪ್ರವಾಸ, ಪ್ರಯಾಣದ ಮಹತ್ವವನ್ನು ಜಗತ್ತಿಗೆ ಸಾರುವ ಉದ್ದೇಶ ಇವರದ್ದಾಗಿದೆ.

ಕ್ಯಾಂಡಿಡಾ ಅವರು ತಮ್ಮ ಸುಮಾರು 28,000 ಕಿ.ಮೀ. ಸೊಲೋ ಪ್ರಯಾಣದುದ್ದಕ್ಕೂ ವಿವಿಧ ದೇಶಗಳ ಜನಸಂಸ್ಕೃತಿ, ಆಚಾರ-ವಿಚಾರ, ಜೀವನವಿಧಾನವನ್ನು ಅನ್ವೇಷಿಸಿದ್ದಾರೆ.

ಮಹಿಳಾ ಸಬಲೀಕರಣ ಮತ್ತು ಅವರಲ್ಲಿ ನೈತಿಕ ಸ್ಥೈರ್ಯ ತುಂಬುವುದು ಈ ಪ್ರಯಾಣದ ಗುರಿಯಾಗಿಸಿಕೊಂಡಿದ್ದಾರೆ ಅವರು.

ಗ್ರಾಮೀಣ ಪ್ರದೇಶದ ಮಹಿಳೆಯರನ್ನು ಶೈಕ್ಷಣಿಕ ಮತ್ತು ಆರ್ಥಿಕ ಸಬಲರನ್ನಾಗಿ ಮಾಡುವ ಉದ್ದೇಶದಿಂದ ಅವರನ್ನು ತಲುಪಿ ಅವರನ್ನು ಜಾಗೃತಗೊಳಿಸುವುದಕ್ಕಾಗಿ ಪ್ರಯಾಣ ಕೈಗೊಳ್ಳಲಾಗಿದೆ. ಜತೆಗೆ ಪ್ರಯಾಣದಿಂದ ಹೊಸ ಸಂಸ್ಕೃತಿ, ಭಾಷೆ, ಜೀವನ ಶೈಲಿಯ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿದೆ ಎನ್ನುತ್ತಾರೆ ಕ್ಯಾಂಡಿಡಾ.

ಬೆಂಗಳೂರಿನಿಂದ ಪ್ರಯಾಣ ಆರಂಭ
ಕ್ಯಾಂಡಿಡಾ ತಮ್ಮ ಬೈಕ್‌ನಲ್ಲಿ ಬೆಂಗಳೂರಿನಿಂದ ಪ್ರಯಾಣವನ್ನು ಆರಂಭಿಸಿ, ಮೊದಲ ಹಂತದಲ್ಲಿ ಭಾರತದ ಪೂರ್ವ ಕರಾವಳಿಯಿಂದ ಈಶಾನ್ಯದೆಡೆಗೆ ಸಾಗಿ ಮಣಿಪುರ, ಮಯನ್ಮಾರ್‌, ಥೈಲಾಂಡ್‌, ಲಾವೋಸ್‌, ವಿಯೆಟ್ನಾಂ, ಕಾಂಬೋಡಿಯಾ, ಮಲೇಷ್ಯಾ, ಸಿಂಗಾಪುರ, ಇಂಡೋನೇಷ್ಯಾದಿಂದ ಸಾಗಿ ಸಿಡ್ನಿಯನ್ನು ತಲುಪಿದ್ದಾರೆ.

ಅಲಾಸ್ಕಾದಿಂದ ದಕ್ಷಿಣ ಅಮೆರಿಕಕ್ಕೆ ಮೋಟಾರ್‌ಸೈಕಲ್‌ ಸವಾರಿ ಮಾಡಿ ಅರ್ಧದಲ್ಲಿ ಮೃತಪಟ್ಟ ಬೈಕರ್‌ ಅಲಿಸ್ಟೇರ್‌ ಫಾರ್ಲ್ಯಾಂಡ್‌ ಅವರ ಗೌರವಾರ್ಥವಾಗಿ ಮತ್ತು ಚೇಂಜ್‌ ಯುವರ್‌ ವರ್ಲ್ಡ್ ಫ‌ಂಡ್‌ ಟ್ರಾವೆಲ್‌ ಯೋಜನೆಯ ಭಾಗವಾಗಿ ಈ ಪ್ರಯಾಣ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದು ಸೊಲೊ ರೈಡ್‌ನ‌ ಮೂಲಕ ಜಗತ್ತನ್ನು ಸುತ್ತಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಯ ಜತೆಗೆ ಗಿನ್ನೆಸ್‌ ದಾಖಲೆ ನಿರ್ಮಾಣವಾಗಿದೆ.

ದೇಶದ 22 ರಾಜ್ಯ ಸುತ್ತಿದ್ದ ಮಹಿಳೆ
ಕ್ಯಾಂಡಿಡಾ ಅವರು ಹವ್ಯಾಸಿ ಪ್ರವಾಸಿ. ಅವರಿಗೆ ಸುತ್ತುವುದು ಎಂದರೇ ತುಂಬಾ ಇಷ್ಟ. ಈ ಹಿಂದೆ 2015-16ರಲ್ಲಿ ಅವರು ಹಣಕಾಸು ವೃತ್ತಿಯಲ್ಲಿರಬೇಕಾದರೆ ಅದಕ್ಕೆ ರಾಜೀನಾಮೆ ನೀಡಿ ರಾಜ್ಯದ 22 ರಾಜ್ಯಗಳನ್ನು ಒಬ್ಬರೇ ಸುತ್ತಿ, ತಮ್ಮ ಕನಸನ್ನು ಸಾಕಾರಗೊಳಿಸಿದ್ದರು. ಪ್ರಸ್ತುತ ಟ್ರಾವೆಲರ್‌ ಆಗಿ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅಲ್ಲದೇ ಡಿಸೈನರ್‌, ಗೈಡರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

11 ವರ್ಷಗಳ ಬೈಕಿಂಗ್‌ ಅನುಭವ
ಇವರು ತಮ್ಮ 11 ವರ್ಷಗಳ ಸುದೀರ್ಘ‌ ಬೈಕ್‌ನ ಅನುಭವದೊಂದಿಗೆ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಅಲ್ಲದೇ ಸುಮಾರು 34ಕ್ಕೂ ಅಧಿಕ ಗುಂಪುಗಳ ಜತೆಗೆ ಪ್ರವಾಸ ಮಾಡಿದ ಹೆಗ್ಗಳಿಕೆ ಇವರದು. ಇವರು ಯೋಜಿತವಾಗಿ ಪ್ರವಾಸ ಮಾಡುತ್ತಾರೆ. ಬೈಕರ್‌ ಆಗಬೇಕೆಂಬ ಕನಸು ಹೊತ್ತಿದ್ದ ಇವರು ಆಸ್ಟೇಲಿಯಾಕ್ಕೆ ಸೊಲೊ ಬೈಕ್‌ ರೈಡ್‌ ಮಾಡುತ್ತೇನೆ ಎಂಬುದನ್ನು ನಾನು ಊಹಿಸರಲಿಲ್ಲ ಎನ್ನುತ್ತಾರೆ.

ಪ್ರೀತಿ ಭಟ್‌, ಗುಣವಂತೆ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.