ಇದು ಯುಗದ ಆದಿ ಸಂಭ್ರಮಕ್ಕೆ ಹಾದಿ


Team Udayavani, Apr 1, 2019, 2:46 PM IST

Habba

ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಪ್ರಕೃತಿಯನ್ನು ಆಧರಿಸಿಯೇ ಹಬ್ಬ-ಹರಿದಿನಗಳು ಬರುವವು. ಪ್ರಪಂಚಕ್ಕೆಲ್ಲ ಸಂಸ್ಕಾರಗಳ ಹಿರಿಮೆಯನ್ನು ತೋರಿಸಿಕೊಟ್ಟ ಕೀರ್ತಿ ನಮ್ಮ ಭಾರತೀಯ ಸಂಸ್ಕಾರವೆಂದು ಹೆಮ್ಮೆಯಿಂದ ಹೇಳಬಹುದು. ಹೊಸ ಸಂವತ್ಸರದ ಆದಿಯೇ “ಯುಗಾದಿ’. ಮುಂದೆ ವರ್ಷಪೂರ್ತಿ ಹಬ್ಬಗಳು ಆಯಾ ಮಾಸದಲ್ಲಿ ಬಂದು, ಮನುಜನಿಗೆ ಬಾಳಿನಲ್ಲಿ ಹೊಸ ಚೈತನ್ಯವನ್ನು ತರುವವು.

ಋತುಗಳ ರಾಜ ವಸಂತನ ಆಗಮನ

ಪ್ರಕೃತಿಯಲ್ಲಿ ನಮಗರಿಯದಂತೆ ಆಗುವ ಅನಂತ ಬದಲಾವಣೆ,ಹೊಸ ಹೂವಿನ ಘಮಘಮ, ದಾರಿಯುದ್ದಕ್ಕೂ ನಿಂತಿರುವ ಗಗನ ಮಲ್ಲಿಗೆ, ಗುಲಮೊಹರ ಮುಂತಾದ ಹೂವಿನ ಗೊಂಚಲುಗಳಿಂದ ತುಂಬಿದ ಗಿಡಮರಗಳು, ಹೂಗಳಿಂದ ಬಿರಿದ ಹೊಂಗೆಮರಗಳ ಸಾಲು, ಭೂದೇವಿಯ ಪಾದಕ್ಕೆ ಮುತ್ತಿನಂತಹ ಹೂಗಳನ್ನು ಉದುರಿಸಿ, ಕೃತಜ್ಞತೆಯನ್ನು ತೋರಿಸುತ್ತಿವೆಯೇನೋ ಎಂದು ಅನಿಸುವುದು.

ಹೂವಿನ ಮಕರಂದವನ್ನು ಹೀರುವ ಭ್ರಮರಗಳ ಝೇಂಕಾರ,ಮಾಮರದ ಚಿಗುರೆಲೆಗಳ ನಡುವೆ ಅಡಗಿ ಕುಳಿತ ಕೋಗಿಲೆಯ “ಕುಹೂ ಕುಹೂ’ ಇಂಪಾದ ಧ್ವನಿಯ ಇಂಚರ, ಆಹಾ! ಈ ಮನಮೋಹಕ ದೃಶ್ಯವು ಸಹಜವಾಗಿಯೇ ನಮ್ಮ ಮೈಮನ ನವಿರೇಳಿಸಿ, ನಮ್ಮನ್ನು ಗಂಧರ್ವಲೋಕಕ್ಕೆ ಕರೆದೊಯ್ಯುವವು. ಪ್ರಕೃತಿಮಾತೆಯು ಹಸಿರು ಬಣ್ಣದ ಸೀರೆಯನ್ನುಟ್ಟು ಬಣ್ಣ ಬಣ್ಣದ ಹೂಗಳ ಮಾಲೆಯನ್ನು

ಮುಡಿದು, ಸೃಷ್ಟಿಯ ಸೊಬಗಿನ ರಂಗಮಂಚವನ್ನು ಸಿದ್ಧಪಡಿಸಿ, ನಸುನಾಚುತ್ತ ನಿಂತ ಮುನ್ನ ಸೂಚನೆ ತೋರಿತೆಂದರೆ, ಋತುಗಳ ರಾಜ ವಸಂತನ ಆಗಮನ ಆಯಿತೆಂದೇ ಅರ್ಥ. ಹಣ್ಣೆಲೆಗಳು ಮರದಿಂದ ಉರುಳಿ, ಕೆಂದೂಳಿಯಿಂದ ತರಗೆಲೆಗಳು ಹಾರಾಡಿ, ಕಾಡಿನ

ದಾರಿಯುದ್ದಕ್ಕೂ ಹರಡಿದರೆ, ಹೌದು, ಆಗಾಗ್ಗೆ ನಾವು ಚೈತ್ರದ ಆಗಮನ ಆಯಿತೆಂದುಕೊಳ್ಳಲೇಬೇಕು. ಈ ಹೊಸ ಹೊರಳಿನ (ಬದಲಾವಣೆಯ) ಮೊದಲ ದಿನ, ಹೊಸ ವರ್ಷದ ಆರಂಭದ ಯುಗಾದಿ ಮರಳಿ ಬಂತೆಂದು ತಿಳಿದು ನಾವು ಸಂತಸ ಪಡುತ್ತೇವೆ. ವಸಂತನು ಬಂದು ಸಸ್ಯಶ್ಯಾಮಲೆಯನ್ನು ಸ್ಪರ್ಶಿಸಿ, ಚಿಗುರು ಮೂಡಿಸುವ, ಸೃಷ್ಟಿಯ ಹೊಸ

ಹುಟ್ಟನ್ನು ಸಂಭ್ರಮಿಸುವ ಹೊತ್ತನ್ನೇ ವರ್ಷಾರಂಭ, ಚೈತ್ರಮಾಸದ ಮೊದಲ ಶುಭದಿನವೆಂದು ಆಚರಿಸುವ ಸಂಪ್ರದಾಯವು ನಮ್ಮದಾಗಿದೆ.ವಸಂತಕಾಲವೆಂದರೆ ಪ್ರಕೃತಿಯಲ್ಲಿ ನವಚೈತನ್ಯ ತುಂಬಿ, ಹೊಸ ವರ್ಷದ ಆರಂಭ, ಯುಗಾದಿಯ ಪರ್ವದಿನದ ಶುಭ ಸಂಕೇತವೆಂದು ಹೇಳಬಹುದು.

*ಉಷಾ ವ್ಹಿ. ಅಗರಖೇಡಿ

ಟಾಪ್ ನ್ಯೂಸ್

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Checkbounce case: ಆರೋಪಿ ಮಹಿಳೆ ಖುಲಾಸೆ

Checkbounce case: ಆರೋಪಿ ಮಹಿಳೆ ಖುಲಾಸೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Checkbounce case: ಆರೋಪಿ ಮಹಿಳೆ ಖುಲಾಸೆ

Checkbounce case: ಆರೋಪಿ ಮಹಿಳೆ ಖುಲಾಸೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.