ಕೃಷ್ಣನಗರಿಯಲ್ಲಿ ಕೇದಗೆ ಕಂಪು
Team Udayavani, Aug 23, 2019, 7:41 PM IST
ಎಲ್ಲೆಡೆ ಹಬ್ಬದ ಸಂಭ್ರಮ ಮನೆಮಾಡಿದೆ. ಅಲ್ಲಲ್ಲಿ ವ್ಯಾಪಾರಿಗಳ ದಂಡು. ಮಳೆಯ ನಡುವೆಯು ಬಿರುಸಿನಿಂದ ವ್ಯಾಪಾರ. ಗೋಪಿಕಾ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಹಾಸನ, ಕೊಪ್ಪಳ ಹೀಗೆ ನಾನಾ ಕಡೆಗಳಿಂದ ಬಂದು ವ್ಯಾಪಾರ ನಡೆಸುತ್ತಿದ್ದಾರೆ. ಬಣ್ಣ ಬಣ್ಣದ ಹೂವಿನ ರಾಶಿ ನೋಡುವುದೇ ಒಂದು ಹಬ್ಬ. ಸೇವಂತಿಗೆ, ಜಾಜಿ, ಕೇದಗೆ, ಸಂಪಿಗೆ,ಮಲ್ಲಿಗೆಯ ಘಮ ರಥಬೀದಿಯ ಸುತ್ತ ಹಬ್ಬಿದ್ದು ಭಕ್ತ ವರ್ಗದ ಉಲ್ಲಾಸ ಹೆಚ್ಚಿಸಿದೆ.