ಶಿವಮೊಗ್ಗದಲ್ಲಿ ಬಂಗಾರದ ಗಣಿಯನ್ನೇ ಅಗೆದ ಎಸಿಬಿ ಅಧಿಕಾರಿಗಳು
Team Udayavani, Nov 24, 2021, 5:34 PM IST
ಶಿವಮೊಗ್ಗ : ಗದಗ ಜಿಲ್ಲೆಯ ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ. ಎಸ್. ರುದ್ರೇಶಪ್ಪರ ಶಿವಮೊಗ್ಗ ಚಾಲುಕ್ಯ ನಗರದಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಎಂಟು ಕೆ.ಜಿ. ಚಿನ್ನದ ಬಿಸ್ಕೆಟ್, ಒಂದೂವರೆ ಕೆ.ಜಿ ಬಂಗಾರದ ಆಭರಣಗಳು, ಮೂರು ಕೆ.ಜಿಗೂ ಅಧಿಕ ಬೆಳ್ಳಿ ವಸ್ತುಗಳು ಮತ್ತು 15 ಲಕ್ಷ ರೂಪಾಯಿ ಹಣ ಪತ್ತೆ ಹಚ್ಚಿದ್ದಾರೆ.