ನೆರೆಯಿಂದ ಅದ್ಯಪಾಡಿ ಡ್ಯಾಂನಲ್ಲಿ ಕಸದ ರಾಶಿ! ಗ್ರಾಮಸ್ಥರು ಹಾಗೂ ಇಲಾಖೆಯಿಂದ ಕಸ ತೆರವು
Team Udayavani, Jul 19, 2020, 2:58 PM IST
ಕೈಕಂಬ: ಸತತ ಸುರಿಯುತ್ತಿರುವ ಮಳೆಯಿಂದಾಗಿ ಪಾಲ್ಗುಣಿ ನದಿ ಉಕ್ಕಿ ಹರಿಯುತ್ತಿದ್ದು,ಇದರಿಂದಾಗಿ ಅದ್ಯಪಾಡಿ ಡ್ಯಾಂನಲ್ಲಿ ಕಸವು ಶೇಖರಣೆಯಾದ ಕಾರಣ ,ನೀರಿನ ಹರಿವಿಗೆ ತಡೆಯಾಗಿದ್ದು ಈ ಬಗ್ಗೆ ಅದ್ಯಪಾಡಿ ಗ್ರಾಮಸ್ಥರು ನೀರಾವರಿ ಇಲಾಖೆಯ ಸಹಕಾರದೊಂದಿಗೆ ಡ್ಯಾಂನಲ್ಲಿ ಸಿಲುಕಿಕೊಂಡ ಕಸವನ್ನು ತೆಗೆದು, ನೀರು ಸರಾಗವಾಗಿ ಹಾದು ಹೋಗುವಂತೆ ಮಾಡಿದ್ದಾರೆ.
ರವಿವಾರ ಪಾಲ್ಗುಣಿ ನದಿಯ ನೀರು ಅದ್ಯಪಾಡಿ ಡ್ಯಾಂನ ಮೇಲೆಯಿಂದ ಹರಿಯಲಾರಂಭಿಸಿದೆ. ದೊಡ್ಡದೊಡ್ಡ ಮರದ ದಿಮ್ಮಿಗಳು, ಪ್ಲಾಸ್ಟಿಕ್ ಬಾಟಲುಗಳು ಡ್ಯಾಂಗೆ ಸಿಲುಕಿದ ಪರಿಣಾಮ ನೀರು ಹರಿವಿಗೆ ತೊಂದರೆಯಾಗಿತ್ತು. ಇದರಿಂದ ಕೃತಕ ನೆರೆ ನಿರ್ಮಾಣವಾಗುವ ಸಾಧ್ಯತೆ ಇತ್ತು.ಇದನ್ನು ಮನಗಂಡ ಅಲ್ಲಿನ ಗ್ರಾಮಸ್ಥರು ಇಲಾಖೆಯ ಸಹಕಾರದೊಂದಿಗೆ ಡ್ಯಾಂಗೆ ಅಡ್ಡಲಾಗಿ ಸಿಲುಕಿಕೊಂಡ ಕಸವನ್ನು ತೆಗೆಯುವ ಮೂಲಕ ನೀರು ಸರಾಗವಾಗಿ ಹರಿಯುವಂತೆ ಮಾಡಿದರು.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ