ಆರೋಗ್ಯದ ರಕ್ಷಣೆಗೆ ದಾವಣಗೆರೆ ಠಾಣೆಯಲ್ಲಿ ಕಷಾಯ ಸಿದ್ಧಪಡಿಸುವ ಪಿಎಸ್ಐ
Team Udayavani, Jul 18, 2020, 4:04 PM IST
ದಾವಣಗೆರೆ: ಕೋವಿಡ್ ವಾರಿಯರ್ಸ್ ಗಳಿಗೆ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಇಲ್ಲಿನ ಆಜಾದ್ ನಗರ ಪೊಲೀಸ್ ಠಾಣೆ ಪಿಎಸ್ಐ ಶೈಲಜಾ ಸ್ವತಃ ದಿನಕ್ಕೆ ಎರಡು ಬಾರಿ ಕಷಾಯ ತಯಾರಿಸಿ, ಸಿಬ್ಬಂದಿಗೆ ವಿತರಿಸುವ ಕೆಲಸ ಮಾಡುತ್ತಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಪ್ರಥಮವಾಗಿ ಕೋವಿಡ್ ಪ್ರಕರಣ ಪತ್ತೆಯಾಗಿದ್ದು ಸಹ ಆಜಾದ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ನಂತರದ ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿ ಕೆಲವು ಕಡೆ ಕಂಟೈನ್ ಮೆಂಟ್ ಝೋನ್ ಸಹ ಇದ್ದವು. ಕಂಟೈನ್ ಮೆಂಟ್ ಝೋನ್, ಲಾಕ್ ಡೌನ್ ಕೆಲಸದ ಜೊತೆಗೆ ಪೊಲೀಸರು ಇತರೆ ಕೆಲಸ ನಿರ್ವಹಣೆ ಮಾಡಬೇಕಾಗುತ್ತಿದೆ. ಈ ಕಾರಣದಿಂದ ಪೊಲೀಸರಿಗೂ ಸಹ ಸೋಂಕು ದೃಢವಾಗಿತ್ತು. ಸಮರ್ಥವಾಗಿ ಕರ್ತವ್ಯ ನಿರ್ವಹಣೆಯೊಟ್ಟಿಗೆ ಆರೋಗ್ಯವನ್ನೂ ಕಾಪಾಡಿಕೊಳ್ಳಲು ಅನುಕೂಲ ಆಗುವಂತೆ ಠಾಣೆಯಲ್ಲಿ ಕಷಾಯ ಸೇವನೆ ಪ್ರಾರಂಭಿಸಲಾಗಿದೆ. ಠಾಣೆಯಲ್ಲೇ ದಿನಕ್ಕೆ ಎರಡು ಬಾರಿ ಕಷಾಯ ಸಿದ್ದಪಡಿಸಿ, ನೀಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ