ಬೆಂಜನಪದವು: ಕಳ್ಳಭಟ್ಟಿ ಅಡ್ಡೆಗೆ ದಾಳಿ ಇಬ್ಬರನ್ನು ವಶಕ್ಕೆ ಪಡೆದ ಅಬಕಾರಿ ಅಧಿಕಾರಿಗಳು
Team Udayavani, Apr 18, 2020, 7:43 PM IST
ಬಂಟ್ವಾಳ: ತಾಲೂಕಿನ ಅಮ್ಮುಂಜೆ ಗ್ರಾಮದ ಬೆಂಜನಪದವುನಲ್ಲಿ ಮನೆಯೊಂದರ ಹಿಂಬದಿಯಲ್ಲಿ ನಡೆಯುತ್ತಿದ್ದ ಕಳ್ಳಭಟ್ಟಿ ಅಡ್ಡೆಗೆ ದಾಳಿ ನಡೆಸಿದ ಅಬಕಾರಿ ಇಲಾಖೆಯ ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿರುವ ಜತೆಗೆ ಕಳ್ಳಭಟ್ಟಿ ತಯಾರಿ ಸಾಮಾಗ್ರಿಗಳನ್ನು ವಶಪಡಿಸಿಕೊಂಡ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಸ್ಥಳೀಯ ನಿವಾಸಿಗಳಾದ ಕಿರಣ್ಕುಮಾರ್ ಹಾಗೂ ಕ್ರಿಸ್ಟನ್ ಡಿಸೋಜ ದಸ್ತಗಿರಿ ಮಾಡಲಾದ ಆರೋಪಿಗಳು. ಬೆಂಜನಪದವುನಲ್ಲಿ ಕ್ರಿಸ್ಟನ್ ಡಿಸೋಜ ಅವರ ಮನೆಯ ಹಿಂಭಾಗದಲ್ಲಿ ಈ ಧಂದೆ ನಡೆಯುತ್ತಿತ್ತು. ಸ್ಥಳದಲ್ಲಿದ್ದ 1200 ಲೀ. ಬೆಲ್ಲದ ಕೊಳೆ ಮತ್ತು ಕಳ್ಳಭಟ್ಟಿ ತಯಾರಿಸುವ ಸಾಮಗ್ರಿ, 950 ಕೆಜಿ ಬೆಲ್ಲ, 500 ಲೀ. ನಕಲಿ ವೈನ್, 300 ಲೀ. ಬಟಾಟೆ ಮಿಶ್ರಣದ ಬೆಲ್ಲದ ಕೊಳೆಯನ್ನು ಜಫ್ತಿ ಮಾಡಿ, ಇಬ್ಬರು ಆರೋಪಿಗಳನ್ನು ಅಬಕಾರಿ ಇಲಾಖಾ ಅಽಕಾರಿಗಳು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.