Gangavathi: ಕೊವಿಡ್ ಸೋಂಕಿತ ಸಾವು! ಶವಸಂಸ್ಕಾರಕ್ಕೆ ಹಿರೇಜಂತಗಲ್ ಜನರ ವಿರೋಧ
Team Udayavani, Jul 9, 2020, 9:03 PM IST
ಗಂಗಾವತಿ: ಕೊವಿಡ್-19 ಸೋಂಕಿತ 51 ವರ್ಷದ ವ್ಯಕ್ತಿ ಸಾವಿಗೀಡಾಗಿದ್ದು ಮೃತ ವ್ಯಕ್ತಿ ಶವಸಂಸ್ಕಾರ ಮಾಡಲು ಜಂತಗಲ್ ಗ್ರಾಮದ ಸ್ಮಶಾನದಲ್ಲಿ ಅವಕಾಶ ನೀಡುವುದಿಲ್ಲ ಎಂದು ವಾರ್ಡ್ ಜನರು ಅಂಬುಲೆನ್ಸ್ ಹೋಗುವ ದಾರಿಯಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ತಹಸೀಲ್ದಾರ್ ಎಲ್.ಡಿ.ಚಂದ್ರಕಾಂತ ನಗರಠಾಣೆಯ ಪಿ ಐ ವೆಂಕಟಸ್ವಾಮಿ ನಗರಸಭೆ ಅಭಿಯಂತರ ನಾಗರಾಜಗೌಡ ಭೇಟಿ ನೀಡಿ ಜನರಿಗೆ ಮನವರಿಕೆ ಮಾಡಲು ಯತ್ನಿಸಿದರು.