ಸಿಗುತ್ತಿಲ್ಲ ಕಡಲ ಮೀನು! ಹೊಳೆ ಮೀನಿಗೆ ಬಲೆ ಬೀಸುತ್ತಿರುವ ಮತ್ಸ್ಯಪ್ರಿಯರು!
Team Udayavani, Apr 1, 2020, 6:26 PM IST
ಕೋವಿಡ್ 19 ವೈರಸ್ ಹರಡುವುದನ್ನು ತಡೆಯಲು 21 ದಿನಗಳ ಕಾಲ ಭಾರತ ಲಾಕ್ ಡೌನ್ ಆಗಿರುವ ಕಾರಣದಿಂದ ಆಳಸಮುದ್ರ ಮೀನುಗಾರಿಕೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಕಡಲ ಮೀನುಗಳು ಮಾರುಕಟ್ಟೆಗೆ ಪೂರೈಕೆಯಾಗದಿರುವ ಕಾರಣ ಕರಾವಳಿಯಲ್ಲಿ ಎಲ್ಲಿಯೂ ಮೀನು ಸಿಗುತ್ತಿಲ್ಲ. ಇದರಿಂದ ಜನರು ಇದೀಗ ಸಾಂಪ್ರದಾಯಿಕ ಮೀನುಗಾರಿಕೆಗೆ ಇಳಿದಿದ್ದಾರೆ. ಹೊಳೆ, ಕೆರೆ, ತೋಡಿನಲ್ಲಿ ಇರುವ ಮೀನುಗಳಿಗೆ ಬಲೆ ಬೀಸುತ್ತಿದ್ದಾರೆ. ಅಂತೂ ಕಡಲ ಮೀನು ದುರ್ಲಭವಾಗಿರುವ ಈ ದಿನಗಳಲ್ಲಿ ಹೊಳೆ ಮೀನಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!