ಬೆಳಪು – ಮಲ್ಲಾರು ಬೈಲ್ ನಲ್ಲಿ ನೆರೆ : ರಸ್ತೆ ಮುಳುಗಡೆ
Team Udayavani, Jul 4, 2020, 4:07 PM IST
ಕಾಪು, ಜು. 4 : ಕಾಪು ಪುರಸಭಾ ವ್ಯಾಪ್ತಿಯ ಬೆಳಪು – ಮಲ್ಲಾರು ರಸ್ತೆಯಲ್ಲಿ ಕೃತಕ ನೆರೆಯಿಂದಾಗಿ ರಸ್ತೆ ಮತ್ತು ಸುತ್ತಲಿನ ಪರಿಸರ ಸಂಪೂರ್ಣ ಜಲಾವೃತಗೊಂಡಿದೆ. ಕೃತಕ ನೆರೆ ಸೃಷ್ಟಿಯಿಂದಾಗಿ ಬೆಳಪು, ಮಲ್ಲಾರು ಪರಿಸರದ 40ಕ್ಕೂ ಹೆಚ್ಚಿ ಮನೆಗಳು ಜಲಾವೃತಗೊಂಡು ಸಂಪರ್ಕ ಕಡಿತದ ಭೀತಿ ಎದುರಾಗಿದೆ. ಪ್ರತೀ ಮಳೆಗಾಲದಲ್ಲೂ ನೆರೆ ಬಂದಾಗ ರಸ್ತೆಯಲ್ಲೇ ನೀರು ಹರಿದು ಸಂಚಾರಕ್ಕೆ ತೊಂದರೆಯುಂಟಾಗುತ್ತಿದ್ದು ರಸ್ತೆಯನ್ನು ಸೇತುವೆಯ ಮಟ್ಟಕ್ಜೆ ಏರಿಸಿ ನೀರಿನ ಸರಾಗ ಹರಿವಿಕೆಗೆ ವ್ಯವಸ್ಥೆ ಮಾಡಿದಲ್ಲಿ ಕೃತಕ ನೆರೆ ಸಮಸ್ಯೆಯನ್ನು ತಪ್ಪಿಸಬಹುದು ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ. ಈ ಬಾರಿ ಕಾಪು ಪುರಸಭೆಯ ವತಿಯಿಂದ ತೋಡಿನ ಹೂಳೆತ್ತಿರುವುದರಿಂದ ಸ್ವಲ್ಪ ಮಟ್ಟಿಗೆ ಅನುಕೂಲವಾಗಿದೆ. ಆದರೆ ಇಲ್ಲಿನ ರಸ್ತೆಯನ್ನು ಸೇತುವೆಯ ಮಟ್ಟಕ್ಕೆ ಏರಿಸುವುದೇ ಸಮಸ್ಯೆಗೆ ಶಾಶ್ವತ ಪರಿಹಾರ ಎಂದು ಸ್ಥಳೀಯರಾದ ಗಣೇಶ್ ಮಲ್ಲಾರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ