ಕಟಪಾಡಿ : ವೃಂದಾವನದಲ್ಲಿ ಮೂರ್ತಿ ಸ್ಥಾಪಿಸಿ ನಾಟಿ ವೈದ್ಯ ಇಂದು ಶೇಖರ ಸುವರ್ಣರ ಪಿತೃ ಪ್ರೇಮ, ಆರಾಧನೆ. ಕಟಪಾಡಿ: ತನ್ನ ಅಪ್ಪನ ಸುಂದರ ಮೂರ್ತಿಯನ್ನು ತನ್ನ ಮನೆಯ ಸುಂದರ ವೃಂದಾವನದಲ್ಲಿ ಸ್ಥಾಪಿಸಿ ನಿತ್ಯ ಪೂಜಿಸುವ ಮೂಲಕ ಉಡುಪಿ ಜಿಲ್ಲೆಯ ಕಟಪಾಡಿ ಏಣಗುಡ್ಡೆಯ ಸನ್ನಿ„ ನಿವಾಸಿ ನಾಟಿ ವೈದ್ಯ ಇಂದುಶೇಖರ ಸುವರ್ಣ ಅವರು ಪಿತೃ ಪ್ರೇಮದ ವಿಶಿಷ್ಟ ವಿಧಾನದ ಮೂಲಕ ತನ್ನ ಬದುಕಿಗೆ ಪ್ರೇರಣೆಯನ್ನು ಪಡೆಯುತ್ತಿದ್ದಾರೆ ಪಿತೃ ಆರಾಧನೆ ಮಾಡುವ ನಮ್ಮ ಪರಂಪರೆಯಲ್ಲಿ ಒಂದು ವರ್ಗ ಶ್ರಾದ್ಧಾದಿಗಳನ್ನು ಮಾಡುತ್ತಾರೆ. ಇನ್ನೊಂದು ವರ್ಗ ಪುಣ್ಯ ದಿನದಂದು ದಾನ ಧರ್ಮಾ„ಗಳನ್ನು ನೀಡುವ ಮೂಲಕ ಆರಾ„ಸಿ ಸ್ಮರಿಸುತ್ತಾರೆ. ಮತ್ತೊಂದು ವರ್ಗ ಸಂಸ್ಮರಣಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸ್ಮರಿಸುತ್ತಾರೆ ಆದರೆ ಇಂದುಶೇಖರ ಸುವರ್ಣರು ತನ್ನ ತಂದೆಯ ಶಿಲಾಮೂರ್ತಿಯನ್ನು ತನ್ನ ಮನೆಯ ಸುಂದರ ಹೂದೋಟದಲ್ಲಿ ಪೂಜಾ ವಿ„ ವಿಧಾನದ ಮೂಲಕವೇ ಪ್ರತಿಷ್ಠಾಪಿಸಿ ಪತ್ನಿ ಜಯಂತಿ, ಮಕ್ಕಳಾದ ಶೀತಲ್, ಸೋನಲ್ ಜೊತೆಯಾಗಿ ನಿತ್ಯ ಪೂಜಿಸುತ್ತಾ ಬರುವ ಮೂಲಕ ಪಿತೃ ಭಕ್ತಿಗೆ ಭಿನ್ನ ಆಯಾಮವನ್ನು ನೀಡಿದ್ದಾರೆ 1985ರ ಮೇ 27ರಂದು ಗತಿಸಿದ್ದ ಇಂದುಶೇಖರ ಸುವರ್ಣರ ತಂದೆ ಕಳತ್ತೂರು ಗರಡಿ ಮನೆ ಸೂರಪ್ಪ ಪಂಡಿತ್ ಅವರು ಕಳತ್ತೂರು ಮತ್ತು ಪಣಿಯೂರು ಬೈದರ್ಕಳ ಗರಡಿಗಳಲ್ಲಿ ದರ್ಶನ ಪಾತ್ರಿಯಾಗಿ ಸಲ್ಲಿಸಿದ ಧಾರ್ಮಿಕ ಸೇವೆ, ನಾಟಿ ವೈದ್ಯರಾಗಿ ಗಳಿಸಿದ ಸಾಕಷ್ಟು ಜನಪ್ರಿಯತೆ, ಜೊತೆಗೆ ಅಪ್ಪಟ ಕೃಷಿಕರಾಗಿ ಪ್ರಸಿದ್ಧಿ ಪಡೆದ ಸಮಾಜ ಸೇವಕರಾಗಿದ್ದರು. ಇಂದುಶೇಖರ ಅವರು ತನ್ನ ತಂದೆ ಸಮಾಜಕ್ಕೆ ಸಲ್ಲಿಸಿರುವ ಸೇವೆಗಳನ್ನು ಇಂದಿಗೂ ಜೀವಂತವಾಗಿ ತನ್ನ ತಂದೆಯ ಮೂರ್ತಿಯಲ್ಲಿ ಕಾಣುತ್ತಿದ್ದಾರೆ. ದಿನಾರಂಭದಲ್ಲಿ ತನ್ನ ತಂದೆಯ ಮೂರ್ತಿ ರೂಪದ ದರುಶನ ಪಡೆಯುವ ಮೂಲಕ ಸ್ಮರಿಸುತ್ತಾ ಪ್ರೇರಣೆಯಾಗಿ ತನ್ನ ಬದುಕನ್ನು ಹಸನಾಗಿಸುವ ಪ್ರಯತ್ನ ನಡೆಸುತ್ತಿದ್ದಾರೆ. ತಾಯಿ ಸಂಜೀವಿಸೂರಪ್ಪ, 4 ಸಹೋದರರು, 3 ಸಹೋದರಿಯರನ್ನು ಅಂದಿನ ದಿನಗಳಲ್ಲಿ ಬೇರೆಯವರಿಗೆ ಕೈ ಚಾಚದೆ ಬಹಳಷ್ಟು ಕಷ್ಟ ಪಟ್ಟು ಇಷ್ಟದಿಂದ ಸಾಕಿ ಸಲಹಿ ಬೆಳೆಸಿರುತ್ತಾರೆ. ಅಂದಿನ ದಿನಗಳು ಹಚ್ಚ ಹಸುರಾಗಿ ಇರಬೇಕು ಅನ್ನುವ ಬಯಕೆ ಹೊಂದಿದ್ದರು. ಹಾಗಾಗಿ ಇಂದುಶೇಖರ ಸುವರ್ಣರು ತಂದೆಯ 35 ವರ್ಷಗಳ ಸಂಸ್ಮರಣೆಯ ಸಂದರ್ಭ ಅಂದರೆ 11 ವರ್ಷಗಳ ಹಿಂದೆ ಸುಮಾರು 75 ಸಾವಿರ ರೂಪಾಯಿಗಳ ವೆಚ್ಚದಲ್ಲಿ ಕಾರ್ಕಳದ ಶಿಲ್ಪಿಯೋರ್ವರಿಂದ ನಿರ್ಮಿಸಿದ ತಂದೆಯ ಶಿಲಾ ಮೂರ್ತಿಯವನ್ನು ಕಟಪಾಡಿಯ ತನ್ನ ಮನೆಯ ಹೂದೋಟದಲ್ಲಿ ಅಣ್ಣ ವಿಶ್ವನಾಥ ಸುವರ್ಣರ ಮಾರ್ಗದರ್ಶನದಲ್ಲಿ ಸೂಕ್ತ ವಿ„ ವಿಧಾನಗಳೊಂದಿಗೆ ಪ್ರತಿಷ್ಠಾಪಿಸಿ ಪೂಜಿಸಲಾರಂಭಿಸಿರುತ್ತಾರೆ. ವರ್ಷಕ್ಕೊಮ್ಮೆ ಮನೆಮಂದಿ ಎಲ್ಲರೂ ಒಟ್ಟಾಗಿ ವಿಶೇಷವಾದ ಪೂಜೆ ಪುರಸ್ಕಾರಗಳನ್ನು ನಡೆಸಿ ಊರಿನವರಿಗೆ ಅನ್ನದಾನವನ್ನು ಮಾಡುತ್ತಿದ್ದಾರೆ. ಪ್ರಸ್ತುತ 5 ವರ್ಷದ ಹಿಂದೆ ಸ್ವರ್ಗಸ್ಥರಾದ ತಾಯಿ ಸಂಜೀವಿಸೂರಪ್ಪರನ್ನೂ ಅದೇ ದಿನ ಜತೆಯಾಗಿ ಆರಾ„ಸುತ್ತಾರೆ. ತಂದೆಯ ಪ್ರೀತಿಯನ್ನು, ತಂದೆಯೊಡಗಿನ ಕಳೆದ ಬಾಲ್ಯದ ದಿನಗಳನ್ನು ಮತ್ತಷ್ಟು ಹಚ್ಚ ಹಸಿರಾಗಿಸುವಲ್ಲಿ ನಿತ್ಯ ತಂದೆಯ ಒಡನಾಟ ಬೇಕಿದೆ. ಆದರೆ ಸ್ವರ್ಗಸ್ಥರಾದರೆ ? ಕೇವಲ ಶ್ರಾದ್ಧ ಕ್ರಿಯಾದಿಗಳು ಮುಗಿಯುವ ತನಕ ಮಾತ್ರ ಹೆಚ್ಚಿನ ನೆನಪು. ಆದರೆ ಇಲ್ಲಿ ಮಾತ್ರ ತಂದೆಯ ಮೇಲಿರಿಸಿದ ಪ್ರೀತಿ, ನಂಬಿಕೆ, ಶಕ್ತಿ, ಭಕ್ತಿ, ವಿಶ್ವಾಸವನ್ನು ಶಿಲಾ ಮೂರ್ತಿಯನ್ನು ಸ್ಥಾಪಿಸಿ ದಿನನಿತ್ಯ ಬೆಳಿಗ್ಗೆ ನೀರು ಇರಿಸಿ, ಸಂಜೆ ದೀಪ ಇಟ್ಟು ಪೂಜಿಸಿ ನೆನಪಿಸುತ್ತಿರುವ ಪರಿ ಮಾತ್ರ ಪಿತೃ ಪ್ರೇಮಕ್ಕೆ ಮಾದರಿ ಎಂದರೆ ತಪ್ಪಿಲ್ಲ. ಇಂದಿನ ಫಾದರ್ಸ ಡೇ ಆಚರಣೆಗೂ ಮಾದರಿಯಾಗಿ ನಿಲ್ಲಬಲ್ಲಂತಹ ಈ ಆರಾಧನೆಯು ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಅಟ್ಟುವ ಈ ಕಾಲದ ಮನೋಧರ್ಮಕ್ಕೆ ಇಂದುಶೇಖರ ಸುವರ್ಣ ಅವರ ಪಿತೃ ಭಕ್ತಿ ಒಂದು ಸವಾಲಾಗಿ ನಿಲ್ಲುತ್ತದೆ. ಮಕ್ಕಳಿಗೆ ಆದರ್ಶವನ್ನು ನೀಡುತ್ತದೆ.
IndusekharSuvarna: Installs his father’s Statue in his Home Father’sDay Special
Team Udayavani, Jun 22, 2020, 7:59 AM IST