ಕಲಬುರಗಿ: Containment zone ತೆರವುಗೊಳಿಸಲು ಬಂದ ಸಂಸದ ಜಾಧವ್ ಗೆ ಘೇರಾವ್
Team Udayavani, May 10, 2020, 6:14 PM IST
ಕಲಬುರಗಿ: ಜಿಲ್ಲೆಯ ವಾಡಿ ಪಟ್ಟಣದಲ್ಲಿ ಕಂಟೈನ್ ಮೆಂಟ್ ಝೋನ್ ಮುಕ್ತಗೊಳಿಸಲು ತೆರಳಿದ್ದ ಸಂಸದ ಡಾ.ಉಮೇಶ ಜಾಧವ್ ಗೆ ಕಾಂಗ್ರೆಸ್ ಕಾರ್ಯಕರ್ತರು ಘೇರಾವ್ ಹಾಕಿದ ಘಟನೆ ನಡೆದಿದೆ. ಎರಡು ವರ್ಷದ ಮಗುವಿಗೆ ಕೋವಿಡ್-19 ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಮಗುವಿನ ಕುಟುಂಬ ವಾಸವಿದ್ದ ಪಿಲಕಮ್ಮ ಬಡಾವಣೆಯನ್ನು ಕಂಟೈನ್ ಮೆಂಟ್ ಝೋನ್ ಎಂದು ಘೋಷಿಸಿ ಸೀಲ್ ಡೌನ್ ಮಾಡಲಾಗಿತ್ತು. ಕಾಂಗ್ರೆಸ್ ಕಾರ್ಯಕರ್ತರು ಇಷ್ಟು ದಿನ ಸೀಲ್ ಡೌನ್ ಇದ್ದರೂ, ಬಡಾವಣೆ ಜನರನ್ನು ಪರಿಸ್ಥಿತಿ ನೋಡಲು ಬಾರದ ಸಂಸದರು ಈಗ ಬಂದಿದ್ದಾರೆ. ಸಂಸದರು ಕಂಟೈನ್ ಮೆಂಟ್ ಝೋನ್ ತೆರವುಗೊಳಿಸುವುದು ಬೇಡ. ಪೊಲಿಸರು, ಆರೋಗ್ಯ ಇಲಾಖೆಯ ಅಧಿಕಾರಿಗಳು ತರೆವುಗೊಳಿಸಲಿ ಎಂದು ಸಂಸದ ಜಾಧವ್ ಗೆ ಘೇರಾವ್ ಹಾಕಿದರು.