Kundapura: ಮಳೆಯ ಅಬ್ಬರ ಕಡಿಮೆಯಾದರೂ ಕಡಲಬ್ಬರ ಬಿರುಸು!
Team Udayavani, Jul 9, 2020, 5:46 PM IST
ಕುಂದಾಪುರ : ಜಿಲ್ಲೆಯಲ್ಲಿ ಮಳೆಯ ಅಬ್ಬರ ಕಡಿಮೆಯಾದರೂ ಸಮುದ್ರ ತೀರದಲ್ಲಿ ಕಡಲ ಅಬ್ಬರ ಬಿರುಸುಗೊಂಡಿದೆ. ಕುಂದಾಪುರ ಪರಿಸರದಲ್ಲಿ ಕೆಲವು ದಿನಗಳ ಹಿಂದೆ ಬಾರಿ ಮಳೆಯಾಗುತಿತ್ತು ಆದರೆ ಎರಡು ದಿನಗಳಿಂದ ಮಳೆಯ ಪ್ರಮಾಣ ಕಡಿಮೆಯಾಗಿದೆ ಆದರೂ ಸಮುದ್ರದಲ್ಲಿ ದೈತ್ಯ ಅಲೆಗಳ ಅಬ್ಬರ ಮಾತ್ರ ಕಡಿಮೆಯಾಗಿಲ್ಲ, ಇದರಿಂದ ತೀರದ ನಿವಾಸಿಗಳು ಆತಂಕದಲ್ಲಿ ದಿನದೂಡುವ ಪರಿಸ್ಥಿತಿ ಮನೆಮಾಡಿದೆ. ಕುಂದಾಪುರ ಪರಿಸರದ ಕಡಲ ತೀರದ ಕೆಲವೊಂದು ಪ್ರದೇಶಗಳಲ್ಲಿ ದೈತ್ಯಾಕಾರದ ಅಲೆಗಳು ದಡಕ್ಕೆ ಬಡಿಯುತ್ತಿರುವುದರಿಂದ ಕಡಲ್ಕೊರೆತದ ಭೀತಿ ಎದುರಾಗಿದೆ, ಅದೇ ರೀತಿ ಮರವಂತೆಯಲ್ಲಿಯೂ ಭಾರೀ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದೆ.