ಅರಣ್ಯ ಇಲಾಖೆ ಇಟ್ಟ ಬೋನಿಗೆ ಬಿದ್ದವು ನಾಲ್ಕು ಚಿರತೆಗಳು!
Team Udayavani, May 17, 2020, 6:46 PM IST
ರಾಮನಗರ: ಎರಡು ಪ್ರತ್ಯೇಕ ಘಟನೆಗಳಲ್ಲಿ 3 ವರ್ಷದ ಮಗು ಮತ್ತು 64 ವರ್ಷದ ವೃದ್ದೆಯ ಮೇಲೆ ಚಿರತೆಗಳು ದಾಳಿ ಮಾಡಿ ಮುಖವನ್ನು ತಿಂದು ಹಾಕಿದ್ದ ಘಟನೆಗಳ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನುಗಳಿಗೆ ನಾಲ್ಕು ಚಿರತೆಗಳು ಸೆರೆ ಸಿಕ್ಕಿವೆ. ಮಾಗಡಿ ತಾಲೂಕಿನ ಬೋಡ ಗಾನ ಪಾಳ್ಯದಲ್ಲಿ 1, ಸಿಡಗನಹಳ್ಳಿಯಲ್ಲಿ 1 ಮತ್ತು ದಾಸೇಗೌಡ ಪಾಳ್ಯದಲ್ಲಿ ಎರಡು ಚಿರತೆ ಒಟ್ಟು ನಾಲ್ಕು ಚಿರತೆಗಳು ಸೆರೆ ಸಿಕ್ಕಿವೆ. ಕೊತ್ತಗಾನಹಳ್ಳಿ ಗ್ರಾಮದಲ್ಲಿ ವೃದ್ಧ ಮಹಿಳೆಯನ್ನು ಬಲಿ ತೆಗೆದುಕೊಂಡ ಚಿರತೆಯೋ ಅಥವಾ ಬೇರೆ ಚಿರತೆಗಳೋ ಎಂಬುದು ಸಾರ್ವಜನಿಕರ ಚರ್ಚೆಯಾಗಿದ್ದು ಚಿರತೆಗಳನ್ನು ನೋಡಲು ಸುತ್ತ ಮುತ್ತಲಿನ ನೂರಾರು ಜನರು ಮುಗಿಬಿದ್ದಿದ್ದಾರೆ.