ಮನೆಮನೆಗೆ ನೀರಿಳಿಸುವ ಭಗೀರಥ ಈ ಅಬೂಬಕ್ಕರ್ | Udayavani
Team Udayavani, May 15, 2020, 2:16 PM IST
ಕಟಪಾಡಿ,; ಸುಭಾಸ್ ನಗರ ಸರಕಾರಿ ಗುಡ್ಡೆ ಪ್ರದೇಶದ 12 ಕ್ರಾಸ್ ಗಳು ಕಾಲೋನಿಯ ಸುಮಾರು 224 ಮಿಕ್ಕಿದ ಮನೆಗಳಿಗೆ ಗ್ರಾಮ ಪಂಚಾಯತ್ ಸದಸ್ಯ ಉದ್ಯಮಿ ಅಬೂಬಕ್ಕರ್ ಎ.ಆರ್ ಅವರು 28,000ಲೀ. ಕುಡಿಯುವ ನೀರನ್ನು ಬೇಸಿಗೆಯ ಬರ ನೀಗಿಸಲು ಮನೆಮನೆಗೆ ಪೂರೈಸುತ್ತಿದ್ದಾರೆ.
ದಿನನಿತ್ಯ ಸರಿಸುಮಾರು ಏಳು ಸಾವಿರಕ್ಕೂ ಅಧಿಕ ವೆಚ್ಚವನ್ನು ಭರಿಸಿ ಮಳೆ ಪ್ರಾರಂಭವಾಗುವವರೆಗೂ ಉಚಿತ ಕುಡಿಯುವ ನೀರಿನ ಪೂರೈಕೆ ಮಾಡುವ ಮೂಲಕ ಜನರ ಕುಡಿಯುವ ನೀರಿನ ಸಂಕಷ್ಟಕ್ಕೆ ಮಾನವೀಯ ಮೌಲ್ಯವುಳ್ಳ ಸ್ಪಂದನೆ ನೀಡಿರುತ್ತಾರೆ