3 ಜಿಲ್ಲೆಗಳ 910 ಕಾರ್ಮಿಕರು ಉಡುಪಿಯಿಂದ ಗೋರಕ್ಪುರಕ್ಕೆ ರೈಲು ಪ್ರಯಾಣ!
Team Udayavani, May 30, 2020, 7:23 PM IST
ಉಡುಪಿ: ಜಿಲ್ಲಾಡಳಿತ ವತಿಯಿಂದ ಶನಿವಾರ ಇಂದ್ರಾಳಿ ರೈಲು ನಿಲ್ದಾಣದಿಂದ 910 ಮಂದಿ ಕಾರ್ಮಿಕರು ಶ್ರಮಿಕ್ ರೈಲು ಮೂಲಕ ಉತ್ತರ ಪ್ರದೇಶದ ಗೋರಕ್ಪುರ್ಗೆ ಪ್ರಯಾಣ ಬೆಳೆಸಿದ್ದಾರೆ. ಉತ್ತರ ಪ್ರದೇಶದ ಗೋರಕ್ಪುರ್ಗೆ ಉಡುಪಿ ಹಾಗೂ ಮಂಗಳೂರಿನಿಂದ 600, ಶಿವಮೊಗ್ಗದಿಂದ 300ಕ್ಕೂ ಹೆಚ್ಚು ವಲಸೆ ಕಾರ್ಮಿಕರು ತಮ್ಮೂರಿನ ಕಡೆ ಉಡುಪಿಯಿಂದ ಪ್ರಯಾಣ ಬೆಳೆಸಿದ್ದಾರೆ. ಈ ರೈಲಿಗೆ 1,200 ಜನರು ನೋಂದಣಿ ಮಾಡಿಕೊಂಡಿದ್ದರು.