ಬಜಪೆ: 35 ಬಸ್ಗಳಲ್ಲಿ ಊರಿಗೆ ಮರಳಿದ ವಲಸೆ ಕಾರ್ಮಿಕರು
Team Udayavani, May 2, 2020, 9:42 AM IST
ಬಜಪೆ: ಲಾಕ್ಡೌನ್ನಿಂದಾಗಿ ಸಮಸ್ಯೆಗೊಳಗಾದ ಗುರುಪುರ ಹಾಗೂ ಸುರತ್ಕಲ್ ಹೋಬಳಿಯ ಗ್ರಾಮಾಂತರ ಪ್ರದೇಶದಲ್ಲಿರುವ ಹೊರ ಜಿಲ್ಲಾ ಕಾರ್ಮಿಕರನ್ನು ಅವರ ಊರುಗಳಿಗೆ ಒಟ್ಟು 35 ಬಸ್ಸುಗಳಲ್ಲಿ ಗುರುಪುರ ಕೈಕಂಬ ಹಾಗೂ ಬಜಪೆಯಿಂದ ಬುಧವಾರ ವೈದ್ಯಕೀಯ ಪರೀಕ್ಷೆಗೊಳಪಡಿಸಿ ರಾತ್ರಿ ವೇಳೆಯಲ್ಲಿ ಕೊಂಡೊಯ್ಯಲಾಯಿತು. ಬಜಪೆಯಲ್ಲಿ ಸುರತ್ಕಲ್ ಹೋಬಳಿಯ 11 ಬಸ್ಸುಗಳಲ್ಲಿ 243 ಕಾರ್ಮಿಕರು, ಗುರುಪುರ ಹೋಬಳಿಯಿಂದ 24 ಬಸ್ಸುಗಳಲ್ಲಿ 506 ಕಾರ್ಮಿಕರನ್ನು ಅವರ ಗ್ರಾಮಗಳಿಗೆ ಕೊಂಡೊÂಯ್ಯಲಾಯಿತು. ವಲಸೆ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿದ ಬಳಿಕ ಅವರಿಗೆ ಮಾಸ್ಕ್ ನೀಡಿ, ಬಸ್ಗಳಲ್ಲಿ ಕೂಡ ಸಾಮಾಜಿಕ ಅಂತರ ಕಾಪಾಡುವಂತೆ ಆಸನಗಳ ವ್ಯವಸ್ಥೆ ಮಾಡಲಾಗಿತ್ತು.