Mandarti – ಮಾರಣಕಟ್ಟೆ ಕೂಡಾಟದಲ್ಲಿ Nagara Subrahmanya Achar ಕೊನೆಯ ಹಾಡುಗಾರಿಕೆ
Team Udayavani, Jan 9, 2020, 3:45 PM IST
ಮಂಗಳವಾರ ನಿಧನ ಹೊಂದಿದ ಬಡಗಿನ ಖ್ಯಾತ ಭಾಗವತ ನಗರ ಸುಬ್ರಹ್ಮಣ್ಯ ಆಚಾರ್ ಅವರು ಸೋಮವಾರದಂದು ಮಾರಣಕಟ್ಟೆಯ ಸಮೀಪದ ಮೇಲ್ ಹೊಸೂರು ಎಂಬಲ್ಲಿ ನಡೆದಿದ್ದ ಯಕ್ಷಗಾನ ಕೂಡಾಟದಲ್ಲಿ ಭಾಗವತಿಕೆ ಮಾಡಿರುವ ವಿಡಿಯೋ. ಇಲ್ಲಿ ಮಂದಾರ್ತಿ ಮೇಳ ಹಾಗೂ ಮಾರಣಕಟ್ಟೆ ಮೇಳಗಳ ಕೂಡಾಟ ನಡೆದಿತ್ತು. ಆದರೆ ದುರದೃಷ್ಟವಶಾತ್ ನಗರ ಸುಬ್ರಹ್ಮಣ್ಯ ಆಚಾರ್ ಅವರ ಪಾಲಿಗೆ ಇದೇ ಕೊನೆಯ ಪ್ರದರ್ಶನವಾಗಿದ್ದು ಮಾತ್ರ ವಿಧಿ ವಿಪರ್ಯಾಸವೇ ಸರಿ.