ಮಂಗಳೂರಿನಲ್ಲಿ ‘ಮೋದಿ’ ಮೋಡಿ : ಬಿಜೆಪಿ ಸಮಾವೆಶದಲ್ಲಿ ‘ನಮೋ’ ಹೇಳಿದ್ದೇನು?
Team Udayavani, Apr 14, 2019, 12:34 PM IST
ಈ ಚುನಾವಣೆ ವಂಶೋದಯ ಮತ್ತು ಅಂತ್ಯೋದಯ ನಡುವೆ ನಡೆಯುತ್ತಿದೆ. ಕೆಲವರಿಗೆ ವಂಶದ ಅಭಿವೃದ್ಧಿಯೇ ಮುಖ್ಯವಾಗಿದ್ದರೆ ಬಿಜೆಪಿಗೆ ಅಭ್ಯುದಯವೇ ಮುಖ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಮಂಗಳೂರಿನಲ್ಲಿ ನೆರೆದಿದ್ದ ಜನ ಸಾಗರವನ್ನು ಇದು ಕೇಸರಿ ಸಮುದ್ರದ ಅಲೆ ಎಂದು ಬಣ್ಣಿಸಿದರು.