ಓಂಕಾರ್ ನಾಸಿಕ್ ತಂಡ ಸರಕಾರಿ ಗುಡ್ಡೆ ತಂಡದ ಶ್ವಾನ ಪ್ರೀತಿ
Team Udayavani, Apr 19, 2020, 7:36 PM IST
ಕಟಪಾಡಿ: ಲಾಕ್ ಡೌನ್ ಹಿನ್ನೆಲೆಯಲ್ಲಿ ಎಲ್ಲಾ ಹೋಟೆಲ್ ಅಂಗಡಿ-ಮುಂಗಟ್ಟುಗಳು ಬಂದ್ ಇ ದ್ದು ತೀರಾ ಆಹಾರದ ಕೊರತೆ ಈ ದಿನಗಳಲ್ಲಿ ಕಂಡು ಬಂದಿರುತ್ತದೆ ಆ ಹಿನ್ನೆಲೆಯಲ್ಲಿ ಶ್ವಾನಪ್ರಿಯರಾದ ಓಂಕಾರ್ ನಾಸಿಕ್ ತಂಡದ ಸದಸ್ಯರು ಒಟ್ಟಾಗಿ ಅನ್ನದೊಂದಿಗೆ ಕೋಳಿ ಪದಾರ್ಥವನ್ನು ಬೆರೆಸಿ ನಾಯಿಗಳ ಪೆಡಿಗ್ರಿ ಆಹಾರವನ್ನು ಸಹಿತ ಬೀದಿ, ಬೀದಿಗಳಲ್ಲಿ ಕಟಪಾಡಿ, ಶಂಕರಪುರ, ಬಂಟಕಲ್ಲು, ಸುಭಾಸ್ ನಗರ, ಅಲೆವೂರು, ಮಣಿಪುರ, ಶಂಕರಪುರ, ಕೋಟೆ ಮತ್ತು ಮೂಡಬೆಟ್ಟು ಬಂಟಕಲ್ಲು, ಇತರೆಡೆಗಳಲ್ಲಿ ನಾಯಿಗಳಿಗೆ ಆಹಾರವನ್ನು ನೀಡಿ ಮಾನವೀಯತೆಯನ್ನು ಮೆರೆಯುತ್ತಿದ್ದಾರೆ. ಅದರೊಂದಿಗೆ ಕುಡಿಯುವ ನೀರನ್ನು ಕೂಡ ಒದಗಿಸುತ್ತ ಬರುತ್ತಿದ್ದಾರೆ.
ತಂಡದಲ್ಲಿ ನಿತೇಶ್, ಕಾರ್ತಿಕ್, ಸುಜಿತ್, ಅಕ್ಷಿತ್, ರೇಣುಕಾ, ಹರ್ಷಿತಾ ಇದ್ದಾರೆ.