ಜನರ ಮೆಚ್ಚುಗೆಗೆ ಪಾತ್ರವಾದ ಕಾವೂರು ಠಾಣೆಯ ಶಿವಪ್ಪ ಗೌಡ ತಂಡದ ಕಾರ್ಯಾಚರಣೆ
Team Udayavani, Jul 9, 2020, 2:15 PM IST
ಕೂಳೂರಿನ ಮೇಲ್ಸೇತುವೆಯ ಕೆಳಭಾಗದಲ್ಲಿ ಸಾರ್ವಜನಿಕವಾಗಿ ಮಧ್ಯ ಸೇವನೆಯಲ್ಲಿ ನಿರತರಾಗಿದ್ದ ಕುಡುಕರನ್ನು ಕಂಡು ಕೆಂಡಾಮಂಡಲರಾದ ಕಾವೂರು ಪೊಲೀಸ್ ಠಾಣೆಯ ಸಿಬ್ಬಂದಿಯಾದ ಶ್ರೀ ಶಿವಪ್ಪ ಗೌಡ ಎಸ್ ಅವರು ಕೂಡಲೇ ಕಾರ್ಯಾಚರಣೆಗಿಳಿದು ಅಲೆಮಾರಿಗಳನ್ನು ಅಲ್ಲಿಂದ ತೆರವುಗೊಳಿಸಿ, ಕುಡುಕರಿಂದಲೇ ಅಲ್ಲಿನ ಪರಿಸರವನ್ನು ಸ್ವಚ್ಛಗೊಳಿಸಿ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಇನ್ನಿತರ ಕಸಕಡ್ಡಿಗಳನ್ನು ಅವರಿಂದಲೇ ಸ್ವಚ್ಛಗೊಳಿಸಿದರು. ಪೋಲೀಸರ ಈ ಕಾರ್ಯಕ್ಕೆ ಕೂಳೂರಿನ ಜನರ ಪ್ರಶಂಸೆಗೆ ಪಾತ್ರವಾಗಿದೆ.