Padubidri : ಕಡಲ್ಕೊರೆತ ವೀಕ್ಷಿಸಲು ಬಂದ ಗೃಹ ಸಚಿವರ ಚಪ್ಪಲಿ ಸಮುದ್ರ ಪಾಲು!
Team Udayavani, Aug 11, 2020, 3:05 PM IST
ಉಡುಪಿ: ಜಿಲ್ಲೆಗೆ ಆಗಮಿಸಿದ್ದ ಗೃಹಸಚಿವ ಬಸವರಾಜ ಬೊಮ್ಮಾಯಿ ಅವರು ಪಡುಬಿದ್ರಿ ಸಮುದ್ರ ತೀರಕ್ಕೆ ಕಡಲು ಕೊರೆತ ವೀಕ್ಷಣೆಗೆಂದು ಬಂದ ಸಂದರ್ಭದಲ್ಲಿ ಅವರ ಚಪ್ಪಲಿ ಸಮುದ್ರ ಅಲೆಯಲ್ಲಿ ಹೋಗಿ ನಂತರ ದಡಕ್ಕೆ ಮರಳಿದ ಘಟನೆ ಮಂಗಳವಾರ ನಡೆಯಿತು. ಸಚಿವರು ಕಡಲ ಅಬ್ಬರ ನೋಡಲು ತೀರಕ್ಕೆ ಬಂದರು. ಆದರೆ ದೊಡ್ಡ ಅಲೆಯೊಂದು ಎರಗಿ ಬಂದಾಗ ಸಚಿವರು ಹಿಂದೆ ನಡೆದರಾದರೂ ಅವರ ಚಪ್ಪಲಿ ಕಾಲಿಂದ ತಪ್ಪಿ ಸಮುದ್ರ ಪಾಲಾಯ್ತು. ಅಲೆಯ ಸೆಳೆತಕ್ಕೆ ಸಿಲುಕಿ ಒಂದರೆಕ್ಷಣ ಕಂಗಾಲಾದಂತೆ ಕಂಡುಬಂದಿದ್ದಸಚಿವರನ್ನು ಸನಿಹದಲ್ಲಿದ್ದ ಬಿಜೆಪಿ ನಾಯಕರು ಕೈಹಿಡಿದು ಆಸರೆಯಾದರು. ಸ್ವಲ್ಪ ಸಮಯದ ನಂತರ ಅಲೆಯೊಂದಿಗೆ ಚಪ್ಪಲಿ ದಡಕ್ಕೆ ಮರಳಿತು.