ಸೋಲಾರ್ನಿಂದ ಸ್ವಾವಲಂಬಿ ವಿದ್ಯುತ್ ಉತ್ಪಾದಿಸಿದ ಗ್ರಾ.ಪಂ.ಕಚೇರಿ
Team Udayavani, Nov 25, 2019, 6:51 PM IST
ಮಹಾತ್ಮ ಗಾಂಧೀಜಿಯವರ ಕನಸು ಭಾರತದ ಭವಿಷ್ಯ ಇರುವುದು ಹಳ್ಳಿಗಳಲ್ಲಿ ಎಂಬ ಮಾತನ್ನೇ ಪ್ರೇರಣೆಯಾಗಿ ಪ್ರತಿಯೊಂದು ಗ್ರಾಮ ಪಂಚಾಯತ್ಗಳು ಸ್ವಾವಲಂಬಿಯತ್ತ ಸಾಗಿದಲ್ಲಿ ಸ್ವರಾಜ್ಯ ಸಂಗಮವಾಗುತ್ತದೆ ಎಂಬ ಮಾತಿಗೆ ಮುನ್ನುಡಿಯಂತೆ ಮಂಗಳೂರು ತಾಲೂಕಿನ ಪಡುಪಣಂಬೂರು ಗ್ರಾಮ ಪಂಚಾಯತ್ ತನ್ನ ಕಾರ್ಯ ಕ್ಷಮತೆಯಿಂದ ಹಂತ ಹಂತವಾಗಿ ಗ್ರಾಮಸ್ಥರ ಆಸರೆಯಾಗುತ್ತಾ, ಹಲವು ಯೋಚನೆಗಳನ್ನು ಜಾರಿಗೊಳಿಸುತ್ತಿದೆಯಲ್ಲದೇ, ಸ್ವಾವಲಂಬಿಯಾಗಲು ಸೋಲಾರ್ ಮೂಲಕ ವಿದ್ಯುತ್ ಉತ್ಪಾದಿಸಿಕೊಂಡು ಹಸಿರು ಕ್ರಾಂತಿಯ ದೊಡ್ಡ ಹೆಜ್ಜೆ ಇಟ್ಟಿರುವುದು ಇದೀಗ ಉಲ್ಲೇಖನೀಯವಾಗಿದೆ. ಗಾಂಧಿ ಗ್ರಾಮ ಪುರಸ್ಕಾರದ ವಿನಿಯೋಗ: ಸರಕಾರವು ಪ್ರತೀ ವರ್ಷವು ತಾಲೂಕಿಗೊಂದು ಗ್ರಾಮ ಪಂಚಾಯತ್ನ್ನು ಗಾಂಧಿ ಗ್ರಾಮವನ್ನಾಗಿ ಗುರುತಿಸಿ ಪುರಸ್ಕಾರ ನೀಡಿ ೫ ಲಕ್ಷ ರೂ.ವನ್ನು ವಿಶೇಷ ನಿಧಿಯನ್ನಾಗಿ ನೀಡಿ ಪ್ರೋತ್ಸಾಹಿಸುತ್ತಿದೆ ಇದರ ಹಿಂದಿನ ಉದ್ದೇಶವು ಸಹ ಗ್ರಾಮದ ಪ್ರಗತಿಯೇ ಆಗಿದೆ ಇದನ್ನೇ ಪಾಲಿಸುವಂತೆ 2016-17ರಲ್ಲಿ ಗ್ರಾಮ ಪುರಸ್ಕಾರವನ್ನು 2018 ರಲ್ಲಿ ಪಡೆದುಕೊಂಡ ಪಡುಪಣಂಬೂರು ಗ್ರಾಮ ಪಂಚಾಯತ್ ಅದೇ ಅನುದಾನವನ್ನು ಬಳಸಿ ಸೋಲಾರ್ ಪ್ಯಾನಲ್ನ್ನು ಕಛೇರಿಗೆ ಅಳವಡಿಸಿಕೊಂಡು ವಿದ್ಯುತ್ನ್ನು ಸ್ವಾಲಂಬಿಯಾಗಿ ಪಡೆಯಲು ಮುಂದಾಗಿ ಪ್ರಾಯೋಗಿಕವಾಗಿಯೂ ಇದೀಗ ಮೂರು ತಿಂಗಳಲ್ಲಿಯೇ ಯಶಸ್ಸಾಗಿದೆ.