E-PASS ಗೊಂದಲ ದಕ್ಷಿಣ ಕನ್ನಡ ಜಿಲ್ಲೆಗೆ – ಕೇರಳಿಗರಿಗೆ ಲಭಿಸದ ಪ್ರವೇಶ | Udayavani
Team Udayavani, Jun 5, 2020, 1:51 PM IST
ಉಳ್ಳಾಲ, ಜೂ. 04: ಕರ್ನಾಟಕ – ಕೇರಳ ಗಡಿ ಪ್ರದೇಶದಲ್ಲಿ ವಾಸಿಸುವವರು ದ.ಕ ಜಿಲ್ಲೆ ಮತ್ತು ಕಾಸರಗೋಡು ವ್ಯಾಪ್ತಿಯಲ್ಲಿ ದೈನಂದಿನ ಕೆಲಸ ಕಾರ್ಯಗಳಿಗೆ ಎರಡೂ ಜಿಲ್ಲೆ ಪಾಸ್ ವ್ಯವಸ್ಥೆ ಮಾಡಿದರೂ ಕಾಸರಗೋಡು ಜಿಲ್ಲಾಡಳಿತ ಪಾಸ್ ಪಡೆದು ದ.ಕ.ಜಿಲ್ಲೆಯವರು ಕಾಸರಗೋಡಿನಲ್ಲಿ ಕೆಲಸ ಕಾರ್ಯ ವಾಪಾಸ್ಸಾದರೂ ಕಾಸರಗೋಡು ನಿವಾಸಿಗಳಿಗೆ ದ.ಕ.ಜಿಲ್ಲಾಡಳಿತದ ಪಾಸ್ ಆವ್ಯವಸ್ಥೆಯಿಂದ ಸಂಜೆಯವರೆಗೂ ಪಾಸ್ ದೊರಕದ ಹಿನ್ನಲೆಯಲ್ಲಿ ತಲಪಾಡಿ ಗಡಿ ಭಾಗಕ್ಕೆ ಆಗಮಿಸಿ ವಾಪಾಸ್ಸಾದ ಘಟನೆ ಗುರುವಾರ ನಡೆದಿದೆ. ಕಾಸರಗೋಡು ಜಿಲ್ಲಾಡಳಿತ ವೆಬ್ಪಾಸ್ ಪಡೆಯಲು ಮಂಗಳವಾರ ಆದೇಶ ಹೊರಡಿಸಿತ್ತು ಇದರ ಬೆನ್ನಲ್ಲೇ ದ.ಕ ಜಿಲ್ಲಾಡಳಿತ ವೆಬ್ ಮೂಲಕ ಇ-ಪಾಸ್ ಪಡೆಯಲು ಬುಧವಾರ ಆದೇಶ ಹೊರಡಿಸಿತ್ತು. ಎರಡೂ ಜಿಲ್ಲೆಗಳ ನಡುವೆ ವ್ಯವಹಾರಿಕ, ಶೈಕ್ಷಣಿಕ, ಆರೋಗ್ಯ ಸೇರಿದಂತೆ ಖಾಸಗಿ ಕ್ಷೇತ್ರ ಮತ್ತು ಸರಕಾರದ ವಿವಿಧ ಇಲಾಖೆಗಳಲ್ಲಿ ಜನರು ಕಾರ್ಯ ನಿರ್ವಹಿಸುತ್ತಿದ್ದು, ಕಳೆದ ಹಲವು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲು ಅವಕಾಶ ನೀಡಬೇಕು ಎನ್ನುವ ಹೋರಾಟದ ಬಳಿಕ ಎರಡೂ ಜಿಲ್ಲೆಗಳ ಆಡಳಿತ ಕೆಲವು ನಿಬಂಧನೆಗಳ ಮೇಲೆ ಪಾಸ್ ನೀಡುವ ಆದೇಶ ಹೊರಡಿಸಿದ್ದು, ಗುರುವಾರ ಬೆಳಗ್ಗೆಯಿಂದಲೇ ಎರಡೂ ಜಿಲ್ಲೆಗಳ ಜನರು ತಮ್ಮ ಕಾರ್ಯಕ್ಷೇತ್ರಕ್ಕೆ ತೆರಳಲು ಗಡಿ ಪ್ರದೇಶವಾದ ತಲಪಾಡಿಗೆ ಆಗಮಿಸಿದ್ದು, ಸಂಜೆಯವರೆಗೂ ಕಾದರೂ ಕಾಸರಗೋಡು ಜಿಲ್ಲೆಯಿಂದ ಆಗಮಿಸಿದವರಿಗೆ ಪಾಸ್ ವ್ಯವಸ್ಥೆ ಆಗದ ಕಾದು ಹಿಂತಿರುಗಿದರು. ಆದರೆ ಮಂಗಳೂರು ಸೇರಿದಂತೆ ದ.ಕ.ಜಿಲ್ಲೆಯ ವಿವಿದೆಡೆಯಿಂದ ಆಗಮಿಸಿದ ಜನರು ಕಾಸರಗೋಡು ಜಿಲ್ಲೆ ನೀಡಿದ ಪಾಸ್ ಮೂಲಕ ತೆರಳಿ ವಾಪಾಸ್ಸಾದರು. ದ.ಕ.ಜಿಲ್ಲೆ ಪ್ರವೇಶಕ್ಕೆ ಇ-ಪಾಸ್ ಪಡೆಯಲು ಅರ್ಜಿ ಸಲ್ಲಿಸಿದ ಮಂದಿಗೆ ರೆಫರೆನ್ಸ್ ಸಂಖ್ಯೆ ದೊರೆತಿತ್ತು. ಅದನ್ನು ಹಿಡಿದುಕೊಂಡು ಹಲವು ಮಂದಿ ಮಂಗಳೂರಿಗೆ ಬಿಡುವಂತೆ ತಲಪಾಡಿ ಗೇಟಿಗೆ ಬಂದಿದ್ದಾರೆ. ಆದರೆ ಜಿಲ್ಲಾಡಳಿತದ ಆದೇಶದಂತೆ ಇ-ಪಾಸ್ ಇದ್ದಲ್ಲಿ ಮಾತ್ರ ಮಂಗಳೂರು ಬಿಡುವಂತೆ ಸೂಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದು, ರೆಫರೆನ್ಸ್ ನಂ ಪಡೆದವರಿಗೆ ಆವಕಾಶ ನೀಡಿಲ್ಲ ಎಂದರು.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್
Udupi: ಕಾರು ಢಿಕ್ಕಿ… ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್
Belthangady: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ
NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ