ಸರಕಾರದ ಹೊಸ ಮರಳು ನೀತಿಯಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಲಿ: ಗುತ್ತಿಗೆದಾರರ ಮನವಿ
Team Udayavani, Jun 24, 2020, 4:48 PM IST
ಪುತ್ತೂರು: ರಾಜ್ಯ ಸರಕಾರ ಕೆಲ ದಿನಗಳ ಹಿಂದೆ ಜಾರಿಗೆ ತಂದಿರುವ ಹೊಸ ಮರಳು ನೀತಿಯಿಂದ ಅವಿಭಜಿತ ಜಿಲ್ಲೆಯ ಮರಳುಗಾರಿಕೆ ಗುತ್ತಿಗೆದಾರರ ಕೆಲಸಕ್ಕೆ ಕಂಟಕ ಉಂಟಾಗಲಿದ್ದು, ಇದನ್ನು ಪುನರ್ ಪರಿಶೀಲನೆ ಮಾಡಿ ಸ್ಥಳೀಯ ಗುತ್ತಿಗೆದಾರರಿಗೆ ಅವಕಾಶ ಕಲ್ಪಿಸುವಂತೆ ಕರಾವಳಿ ಜನಪ್ರತಿನಿಧಿಗಳಿಗೆ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸುವುದು ಹಾಗೂ ಹೊಸ ನೀತಿಯಿಂದ ಕರಾವಳಿಗೆ ಆಗುವ ತೊಂದರೆಯ ಬಗ್ಗೆ ನ್ಯಾಯಾಲಯದ ಮೂಲಕ ಹೋರಾಟಕ್ಕೆ ಚಿಂತನೆ ನಡೆಸಲು ಅವಿಭಜಿತ ಜಿಲ್ಲೆಯ ಮರಳುಗಾರಿಕೆ ಗುತ್ತಿಗೆದಾರರು ನಿರ್ಧರಿಸಿದ್ದಾರೆ.