Shivamogga: ಚಿತಾಗಾರದಲ್ಲಿ ಶವ ಬಿಟ್ಟುಹೋದ ಪಾಲಿಕೆ ಅಧಿಕಾರಿಗಳು!
Team Udayavani, Jul 11, 2020, 12:19 PM IST
ಶಿವಮೊಗ್ಗ :ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ. ಕೋವಿಡ್ 19 ಸೋಂಕಿನಿಂದ ವೃದ್ಧರೊಬ್ಬರು ಶುಕ್ರವಾರ ಮೃತಪಟ್ಟಿದ್ದರು. ಕಾನೂನು ರೀತಿಯಲ್ಲಿ ಅವರ ಅಂತ್ಯ ಸಂಸ್ಕಾರ ಮಾಡಬೇಕಿದ್ದ ಪಾಲಿಕೆ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತೋರಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.
ವ್ಯಕ್ತಿಯ ಶವವನ್ನು ಶಿವಮೊಗ್ಗದ ರೋಟರಿ ಚಿತಾಗಾರಕ್ಕೆ ತಂದ ಅಧಿಕಾರಿಗಳು ಅಲ್ಲಿ ಶವವಿಟ್ಟು ಶವದ ಮೇಲೆ ಕಟ್ಟಿಗೆ ಇಟ್ಟು ಹೊರಟು ಹೋಗಿದ್ದಾರೆ.
ಇದನ್ನು ಪ್ರಶ್ನಿಸಿದ ಸ್ಥಳೀಯರಿಗೆ ಪೊಲೀಸರು ಹೊಡೆದು ಗದರಿಸಿದ್ದಾರೆ, ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅನಾಥ ಶವ ಕಂಡ ನಾಯಿಗಳು, ಆಹಾರದ ಆಸೆಯಿಂದ ಎಳೆದಾಡಿದೆ ಇದರಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ !