SSLC ಸಾಧಕರು: 624 ಅಂಕ ಗಳಿಸಿದ ಕಿರಿಮಂಜೇಶ್ವರದ ಸುರಭಿ ಎಸ್ ಶೆಟ್ಟಿ
Team Udayavani, Aug 10, 2020, 8:03 PM IST
ಕುಂದಾಪುರ: ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ 624 ಅಂಕ ಪಡೆದು ರಾಜ್ಯದಲ್ಲಿ ರ್ಯಾಂಕ್ ಪಡೆದಿರುವ ಉಡುಪಿ ಜಿಲ್ಲೆಯ ಕಿರಿಮಂಜೇಶ್ವರದ ಸಾಂದೀಪನಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಸುರಭಿ ಎಸ್ ಶೆಟ್ಟಿ ತನ್ನ ಉದಯವಾಣಿ ಜೊತೆಗೆ ಮಾತನಾಡಿದ್ದು, 625 ಅಂಕವನ್ನು ನಿರೀಕ್ಷಿಸಿದ್ದೆ. ಆದರೆ 624 ಅಂಕ ಬಂದಿದೆ. ಆದರೂ ಸಂತೋಷವಾಗಿದೆ ಎಂದಿದ್ದಾರೆ.