ತಾನು ಚಿಕಿತ್ಸೆ ನೀಡಿ ರಕ್ಷಿಸಿದ ಹಾವಿಗೆ ಹಾಲು ಎರೆದು ಆರಾಧಿಸಿದ ಸಾಲಿಗ್ರಾಮದ ಉರಗ ಪ್ರೇಮಿ
Team Udayavani, Jul 26, 2020, 9:38 AM IST
ಸಾಲಿಗ್ರಾಮ: ನಾಗರಪಂಚಮಿಯ ದಿನ ತಾನು ಚಿಕಿತ್ಸೆ ನೀಡಿ ರಕ್ಷಿಸಿದ ಹಾವಿಗೆ ಹಾಲು ಎರೆಯುವ ಮೂಲಕ ನಾಗರಪಂಚಮಿಯನ್ನು ಆಚರಿಸಿದ ಸಾಲಿಗ್ರಾಮದ ಉರಗ ಪ್ರೇಮಿ ಸುಧೀಂದ್ರ ಐತಾಳ್.ಕಳೆದ ಹಲವಾರು ತಿಂಗಳಿನ ಹಿಂದೆ ಜೆಸಿಬಿ ಯಂತ್ರದ ಮೂಲಕ ಕೆಲಸ ಮಾಡುತಿದ್ದ ಸಂದರ್ಭ ಯಂತ್ರಕ್ಕೆ ಸಿಲುಕಿ ಗಾಯಗೊಂಡಿದ್ದ ನಾಗರಹಾವನ್ನು ಚಿಕಿತ್ಸೆ ನೀಡಿ ರಕ್ಷಿಸಿದ ಸಾಲಿಗ್ರಾಮದ ಮೃಗಲೋಕದ ಸುಧೀಂದ್ರ ಐತಾಳ್ ಅವರು ಉರಗಗಳು ನಿರುಪದ್ರವಿಗಳು ಅವಗಳ ಬಗ್ಗೆ ಸದಾ ಕಾಲ ಕಾಳಜಿ ಇರಲಿ ಎಂದು ಜನತೆಗೆ ಸಂದೇಶ ನೀಡಿದ್ದಾರೆ.