ನಮ್ಮ ಜೀವಕ್ಕೆ ಬೆಲೆ ಇಲ್ಲವೇ? ಮಣಿಪಾಲದಲ್ಲಿ ಬೆಳ್ಳಕ್ಕಿಗಳ ಮೂಕ ರೋದನ
Team Udayavani, Nov 5, 2019, 8:44 PM IST
ಮಣಿಪಾಲ ನಗರದ ಹೃದಯ ಭಾಗದಲ್ಲಿರುವ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಹಲವಾರು ಬೃಹತ್ ಮರಗಳಿದ್ದು ಆ ಮರಗಳ ರೆಂಬೆಗಳು ವಿವಿಧ ಜಾತಿಯ ಪಕ್ಷಿಗಳಿಗೆ ಆಶ್ರಯತಾಣವಾಗಿದೆ. ಆದರೆ ಇದೀಗ ಈ ಭಾಗದಲ್ಲಿ ಚತುಷ್ಪಥ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಮಣಿಪಾಲ ಟೈಗರ್ ಸರ್ಕಲ್ ಬಳಿಯಲ್ಲಿದ್ದ ಬೃಹತ್ ಮರವನ್ನು ಇಂದು ಕಡಿದುರುಳಿಸಲಾಗಿದೆ. ಏಕಾಏಕಿ ತಮ್ಮ ಸೂರನ್ನು ಕಡಿದು ಹಾಕಿದ್ದರಿಂದ ಕಂಗಾಲಾದ ನೂರಾರು ಹಕ್ಕಿಗಳಲ್ಲಿ ಕೆಲವು ಸ್ಥಳದಲ್ಲೇ ಸತ್ತುಬಿದ್ದರೆ ಇನ್ನು ಕೆಲವು ಹಕ್ಕಿಗಳು ಕಡಿದು ಹಾಕಿದ ಮರದ ಆಸುಪಾಸಿನಲ್ಲೇ ಇಡೀದಿನ ದಿಕ್ಕುತೋಚದಂತೆ ಕುಳಿತಿದ್ದ ದೃಶ್ಯ ನೋಡುಗರ ಮನಕಲುಕುವಂತಿತ್ತು.