ಉಡುಪಿ ಜಿಲ್ಲೆಯಲ್ಲಿ ನಾಳೆಯಿಂದ ಬಸ್ ಸಂಚಾರ! ಗಡಿಭಾಗದಲ್ಲಿ ಚೆಕ್ ಪೋಸ್ಟ್ ಯಥಾಸ್ಥಿತಿ
Team Udayavani, Jul 21, 2020, 10:47 PM IST
ಉಡುಪಿ: ಮುಖ್ಯಮಂತ್ರಿಗಳ ಸೂಚನೆಯಂತೆ ಜಿಲ್ಲೆಯಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದ್ದು, ಬಸ್ಸಂಚಾರ ಬುಧವಾರದಿಂದ ಮತ್ತೆ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಸರಕಾರದ ಮಾರ್ಗಸೂಚಿಯಂತೆ ನಿಯಮಾವಳಿಗಳನ್ನು ಪಾಲಿಸಿ ಬಸ್ ಸಂಚಾರ ನಡೆಸಬೇಕು. ಪ್ರಕರಣ ಹೆಚ್ಚಾಗಿರುವುದರಿಂದ ಗಡಿಭಾಗಗಳ ಸೀಲ್ಡೌನ್ ತೆರವು ಮಾಡುವುದಿಲ್ಲ. ಜನರು ಅನಾವಶ್ಯಕವಾಗಿ ಓಡಾಟ ನಡೆಸಬಾರದು. ಜಿಲ್ಲೆಯ ಗಡಿಭಾಗಗಳಲ್ಲಿ ಚೆಕ್ಪೋಸ್ಟ್ಗಳು ಇರಲಿವೆ. ತುರ್ತು ವೈದ್ಯಕೀಯ ಆವಶ್ಯಕತೆಗಳಿದ್ದರೆ ಮಾತ್ರ ಜಿಲ್ಲೆಯ ಹೊರಭಾಗ ಹಾಗೂ ಒಳಗೆ ಬರಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ