Udupi ಆಕಸ್ಮಿಕವಾಗಿ ಬಾವಿಗೆ ಬಿದ್ದ ವೃದ್ಧೆ!ಬಾವಿಗಿಳಿದು ರಕ್ಷಿಸಿದ ಆಪದ್ಬಾಂಧವರು
Team Udayavani, Aug 6, 2020, 3:46 PM IST
ಉಡುಪಿ: ಆಕಸ್ಮಿಕವಾಗಿ ಮನೆಯ ಬಾವಿಗೆ ಬಿದ್ದ ವೃದ್ದೆಯೋರ್ವರನ್ನು ಉಡುಪಿ ನಗರ ಠಾಣೆಯ PSI, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಆಟೋ ಚಾಲಕರು ಸೇರಿ ಸುರಕ್ಷಿತವಾಗಿ ಮೆಲಕ್ಕೆತ್ತಿದ ಘಟನೆ ತಾಲೂಕಿನ ಘಟನೆಯು ಕುಕ್ಕಿಕಟ್ಟೆ ಮಾರ್ಪಳ್ಳಿಯಲ್ಲಿ ಗುರುವಾರ ನಡೆದಿದೆ. ಉಡುಪಿ ನಗರ ಠಾಣೆಯ ಪಿಎಸ್ಐ ಸದಾಶಿವ ಗವರೋಜಿ, ಅಗ್ನಿಶಾಮಕ ದಳದ ಸಿಬ್ಬಂದಿ ವಿನಾಯಕ ಹಾಗೂ ಸ್ಥಳಿಯ ಆಟೋ ಚಾಲಕ ರಾಜೇಶ್ ನಾಯಕ್ ಅವರು ಬಾವಿಗಿಳಿದು ವೃದ್ಧೆಯನ್ನು ರಕ್ಷಿಸಿದರು. ಸದ್ಯ ವೃದ್ಧ ಮಹಿಳೆ ಆರೋಗ್ಯವಾಗಿದ್ದಾರೆ.