Ram Mandir ಶಿಲಾನ್ಯಾಸ ಸಂಭ್ರಮ! ಉಡುಪಿಯಲ್ಲಿ ಪಟ್ಟಾಭಿರಾಮನಾಗಿ ಕಂಗೊಳಿಸಿದ ಶ್ರೀಕೃಷ್ಣ
Team Udayavani, Aug 5, 2020, 5:25 PM IST
ಉಡುಪಿ : ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನಡೆಯುವ ಶುಭದಿನದಂದು ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ಶ್ರೀ ಕೃಷ್ಣ ದೇವರಿಗೆ ವಿಶೇಷವಾಗಿ “ಪಟ್ಟಾಭಿರಾಮ” ದೇವರ ಅಲಂಕಾರ ಮಾಡಿದರು.
ಪರ್ಯಾಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮಹಾಪೂಜೆಯನ್ನು ನೆರವೇರಿಸಿದರು. ಅಯೋಧ್ಯೆಯಲ್ಲಿ ಭೂಮಿಪೂಜೆಯ ವಿಧಿ ವಿಧಾನಗಳು ನೆರವೇರುತ್ತಿದ್ದಂತೆ ಉಡುಪಿಯ ಕೃಷ್ಣ ಮಠದಲ್ಲೂ ದೇವರನ್ನು ಅಲಂಕಾರಗೊಳಿಸಿ ವಿಶೇಷವಾಗಿ ಪೂಜೆಗಳು ನೆರವೇರಿತು.
ಪಟ್ಟಾಭಿರಾಮನಂತೆ ಕಂಗೊಳಿಸಿದ ಅಲಂಕಾರ ಪ್ರೀಯನಾಗಿರುವ ಶ್ರೀಕೃಷನಿಗೆ ರಾಮನ ಪಟ್ಟಾಭಿಷೇಕ ನೆನಪಿಸುವ ರೀತಿಯಲ್ಲಿ ಪಟ್ಟಾಭಿರಾಮನ ಅಲಂಕಾರವನ್ನು ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ನಡೆಸಿದರೆ ಪರ್ಯಾಯ ಶ್ರೀ ಈಶಪ್ರೀಯತೀರ್ಥ ಶ್ರೀಪಾದರು ಮಹಾಪೂಜೆಯನ್ನು ನೆರವೇರಿಸಿದರು.