Ullala: ಜಿಲ್ಲಾಆರೋಗ್ಯ ಇಲಾಖೆಯ ಕ್ರಮದ ವಿರುದ್ಧ ಶಾಸಕ U.T.Khader ಕಿಡಿ
Team Udayavani, Apr 25, 2020, 8:07 PM IST
ಉಳ್ಳಾಲ: ಉಳ್ಳಾಲ ಆರೋಗ್ಯ ಕೇಂದ್ರದಲ್ಲಿ ಸುಸಜ್ಜಿತ ಸೌಲಭ್ಯ ಮತ್ತು ಕೊರೊನಾ ಸುರಕ್ಷತಾ ಕ್ರಮ ಮಾಡದೆ ಇಲ್ಲಿ ಕೊರೊನ ಶಂಕಿತರನ್ನು ಕ್ವಾರಂಟೈನ್ ಇಡುವುದುಮತ್ತು ನಿರ್ಗತಿಕ ಮತ್ತು ಮಾನಸಿಕ ರೋಗಿಗಳನ್ನು ಚಿಕಿತ್ಸೆಗೆ ಒಳಪಡಿಸುವುದು ಸರಿಯಲ್ಲ ಎಂದು ಶಾಸಕ ಯು.ಟಿ. ಖಾದರ್ ಜಿಲ್ಲಾಆರೋಗ್ಯ ಇಲಾಖೆಯ ಕ್ರಮದ ವಿರುದ್ಧ ಕಿಡಿ ಕಾರಿದರು. ಅವರು ಉಳ್ಳಾಲ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಉಳ್ಳಾಲದಲ್ಲಿ ಇರುವ ರೋಗಿಗಳ ವಿಚಾರದಲ್ಲಿ ಮತ್ತು ಹೊರ ರೋಗಿಗಳಿಗೆ ನೀಡುವ ಚಿಕಿತ್ಸೆಯ ಕುರಿತು ಉಳ್ಳಾಲ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಂದ ಮತ್ತು ಸಿಬಂದಿಯಿಂದ ಮಾಹಿತಿ ಪಡೆದ ಬಳಿಕ ಮಾತನಾಡಿದ ಅವರುಕೊರೊನ ಸೋಂಕು ತಗುಲಿ ವೃದ್ದೆ ಮೃತಪಟ್ಟ ಹಿನ್ನಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯನ್ನು ಸಂಪೂರ್ಣ ಸೀಲ್ಡೌನ್ ಮಾಡಲಾಗಿದ್ದು, ಅಲ್ಲಿನ ಇಬ್ಬರು ಸಿಬಂದಿಗಳು ಮತ್ತು ಇನ್ನೊರ್ವ ಕೊರೊನ ಸೋಂಕಿನ ಶಂಕಿತ ವ್ಯಕ್ತಿಯನ್ನು ಜಿಲ್ಲಾ ಆರೋಗ್ಯಾಧಿಕಾರಿಯವರು ಉಳ್ಳಾಲದ ಆರೋಗ್ಯ ಕೇಂದ್ರದಲ್ಲಿ ಕ್ವಾರಂಟೈನ್ ಇರಿಸಿರುವುದನ್ನು ಆಕ್ಷೇಪಿಸಿ ಇಲ್ಲಿ ಸ್ಥಳೀಯ ರೋಗಿಗಳ ಹಿತ ಕಾಪಾಡುವುದು ಮುಖ್ಯ. ಕ್ವಾರಂಟೈನ್ ಇಡಲು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಸರ್ವ ಸಿದ್ಧತೆ ಮಾಡಿರುವಾಗ ಉಳ್ಳಾಲದ ಆಸ್ಪತ್ರೆಯಲ್ಲಿ ಶಂಕಿತರನ್ನು ಕ್ವಾರಂಟೈನ್ನಲ್ಲಿ ಇರಿಸುವುದು ಸೂಕ್ತವಲ್ಲ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಆರೋಗ್ಯ ಅಕಾರಿಯೊಂದಿಗೆ ಚರ್ಚಿಸಿ ಶೀಘ್ರವೇ ಆಸ್ಪತ್ರೆಯಲ್ಲಿರುವ ಶಂಕಿತ ಕ್ವಾರಂಟೈನ್ನಲ್ಲಿರುವವರಿಗೆ ಸೂಕ್ತವ್ಯವಸ್ಥೆ ಮಾಡಬೇಕು ಎಂದ ಅವರು ಇರುವ ಒಂದು ಸುಸಜ್ಜಿತ ಆರೋಗ್ಯ ಕೇಂದ್ರದಲ್ಲಿ ಸ್ಥಳೀಯ ರೋಗಿಗಳಿಗೆ ಆದ್ಯತೆ ನೀಡಬೇಕು. ಕೊರೊನ ಸೋಂಕು ವಿಚಾರದಲ್ಲಿ ಸ್ವಲ್ಪ ಎಡವಿದರೂ ಇಡೀ ಆಸ್ಪತ್ರೆಯೊಂದಿಗೆ ವೈದ್ಯರು, ಆರೋಗ್ಯ ಸಿಬಂದಿಗಳನ್ನು ಸೀಲ್ಡೌನ್ ಮಾಡುವ ಪರಿಸ್ಥಿತಿ ಎದುರಾಗಬಹುದು ಈ ನಿಟ್ಟಿನಲ್ಲಿ ಆರಂಭದಲ್ಲೇ ಇಂತಹ ತೊಂದರೆಯನ್ನು ದೂರ ಮಾಡಬೇಕು ಇಲ್ಲದಿದ್ದಲ್ಲಿ ಸುಸಜ್ಜಿತ ವೈದ್ಯಕೀಯ ಸಲಕರಣೆ ನೀಡಿ ವೈದ್ಯರ ಮತ್ತು ಸಿಬಂದಿಗಳ ರಕ್ಷಣೆಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಮಾನಸಿಕ ರೋಗಿಗಳನ್ನು ಸ್ಥಳಾಂತರ ನಡೆಸಲು ಆದೇಶ ನೀಡಿದರು.