ಕುಡಿದು ಗಾಡಿ ಓಡಿಸಿದ್ರೆ ಭಜನೆ ಕೇಳ್ಬೇಕಾದೀತು!
Team Udayavani, Jan 23, 2017, 6:59 AM IST
ದಂಡ ಹಾಕಿದ್ರೂ ಕುಡಿದು ಗಾಡಿ ಓಡಿಸೋರ ಸಂಖ್ಯೆ ಕಡಿಮೆಯಾಗಲಿಲ್ಲವೆಂಬ ಕಾರಣಕ್ಕೆ ದೆಹಲಿ ಸಂಚಾರಿ ಪೊಲೀಸರು ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಅದೇನಪ್ಪಾ ಅಂದ್ರೆ, ಇನ್ನು ಮುಂದೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ದಂಡದ ಜತೆಗೆ ಉಪನ್ಯಾಸ, ಭಜನೆ, ಪ್ರಾರ್ಥನೆಯನ್ನೂ ಹಮ್ಮಿಕೊಳ್ಳಲಾಗುತ್ತದೆಯಂತೆ. ಅಂದರೆ ಕುಡಿದು ಗಾಡಿ ಓಡಿಸುವಿಕೆ, ರೆಡ್ ಲೈಟ್ ಕ್ರಾಸ್
ಮಾಡುವುದು, ಗೂಡ್ಸ್ ಗಾಡಿಗಳಲ್ಲಿ ಪ್ರಯಾಣಿಕರ ಸಾಗಾಟ, ಪರವಾನಗಿ ಇಲ್ಲದೇ ವಾಹನ ಚಾಲನೆ ಮಾಡಿದವರಿಗೆ ದಂಡ ಕಟ್ಟುವ ನೋಟಿಸ್ ಕೊಡುವುದು. ಇದನ್ನು ಅವರು ಕೋರ್ಟ್ನಲ್ಲಿ ಕಟ್ಟಿದ ನಂತರ, ಇವರೆಲ್ಲರಿಗೂ ಒಂದು ದಿನ ಮ್ಯೂಸಿಕಲ್ ಥೆರಪಿ ಕ್ಲಾಸ್ ನೀಡುವುದು. ಈ ಕ್ಲಾಸ್ ಗೆ ಅಟೆಂಡ್ ಆಗದೇ ಹೋದರೆ ಅವರ ದಾಖಲೆಗಳನ್ನು ವಾಪಸ್ ನೀಡದೇ ಇರುವ ನಿಯಮ ಮಾಡಿರುವುದರಿಂದ ಕಡ್ಡಾಯವಾಗಿ ಹಾಜರಾಗಲೇಬೇಕು. ಈ ಕ್ಲಾಸ್ನಲ್ಲಿ ದೇಶಭಕ್ತಿ ಗೀತೆಗಳು, ಭಜನೆಗಳು, ಪ್ರಾರ್ಥನೆಗಳು ಮತ್ತು
ಮನಸ್ಸಿಗೆ ನಾಟುವಂಥ ಗೀತೆಗಳನ್ನು ಹಾಕಲಾಗುತ್ತದೆ.