ಮನೆ ಬಾಗಿಲು ಬಡಿದ 10 ಅಡಿ ಉದ್ದದ ಮೊಸಳೆ!


Team Udayavani, Feb 15, 2019, 4:37 AM IST

aligetor.jpg

ಬಾಗಿಲನ್ನು ಯಾರಾದರೂ ಜೋರಾಗಿ ಬಡಿಯುತ್ತಿದ್ದರೆ ಒಳಗಿದ್ದವರಿಗೆ ಆತಂಕವಾಗುವುದು ಸಹಜ. ಅಮೆರಿಕದ ಫ್ಲೊರಿಡಾದಲ್ಲಿ ಮಹಿಳೆಯೊಬ್ಬರಿಗೆ ಇದೇ ಅನುಭವವಾಗಿದೆ. ಬಾಗಿಲಾಚೆ ನಿಂತಿದ್ದ ಆಗುಂತಕನ ಬಗ್ಗೆ ತಿಳಿದಾಗ ಅವರಿಗೆ ಭೂಮಿಯೇ ಬಾಯ್ಬಿಟ್ಟಂತೆ ಆಗಿದೆ. ಇಲ್ಲಿಯ ಮೆರ್ರಿಟ್‌ ಐಲ್ಯಾಂಡ್‌ನ‌ ಗೆರಿ ಸ್ಟಾಪಲ್ಸ್‌ ಎಂಬ ಮಹಿಳೆ ಮನೆಯೊಳಗೆ ಕೆಲಸಕಾರ್ಯದಲ್ಲಿ ಮಗ್ನರಾಗಿದ್ದಾಗ, ಯಾರೋ ಜೋರಾಗಿ
ಬಾಗಿಲು ತಟ್ಟಲು ಆರಂಭಿಸಿದರು. 

ಸದ್ದಿಗೆ ಆತಂಕಗೊಂಡ ಗೆರಿ ಭಯದಿಂದಲೇ ಬಾಗಿಲ ಬಳಿ ಹೋಗಿ ಕಿಟಕಿಯಿಂದ ಅಣಕಿ ನೋಡಿದಾಗ 10 ಅಡಿ ಉದ್ದದ ದೈತ್ಯ ಮೊಸಳೆ ಅವರಿಗೆ ಕಂಡಿದೆ. ಇನ್ನೇನು ಅದು ಬಾಗಿಲು ಮುರಿದು ಒಳಗೆ ಬರುತ್ತದೆ ಎಂದು ತಿಳಿದ ಅವರು ಮಹಡಿಗೆ ಹೋಗಿ ನೆರೆಹೊರೆಯವರಿಗೆ ಮೊಸಳೆ ಬಂದಿರುವುದಾಗಿ ಕೂಗಿ ಹೇಳಿದ್ದಾರೆ. ನೆರೆಮನೆಯವರು ಮೊಸಳೆಯನ್ನು ಓಡಿಸಲು ಪ್ರಯತ್ನಪಟ್ಟರೂ ಆಗದೇ ಇದ್ದಾಗ ವನ್ಯಜೀವಿ ಇಲಾಖೆಗೆ ಕರೆ ಮಾಡಿ ಅವರ ನೆರವು ಪಡೆದುಕೊಂಡಿದ್ದಾರೆ. ದೈತ್ಯ ಮೊಸಳೆ ಮಾನವರಿಗೆ ಅಪಾಯ ತಂದೊಡ್ಡುವ ಹಂತ ತಲುಪಿದ್ದ ಕಾರಣ ಅದನ್ನು ಗುಂಡಿಟ್ಟು ಕೊಲ್ಲಲಾಯಿತು ಎಂದು ವನ್ಯಜೀವಿ ಇಲಾಖೆ ತಿಳಿಸಿದೆ.

ಟಾಪ್ ನ್ಯೂಸ್

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ


MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

17-uv-fusion

UV Fusion: ನಿನ್ನೊಳಗೆ ನೀ ಇರುವಾಗ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.