ಜಾರ್ಖಂಡ್ ಕಲ್ಲುಕುಟಿಗನ ನಗದು ರಹಿತ ವಿವಾಹ!
Team Udayavani, Jan 12, 2017, 5:28 AM IST
ನೋಟು ನಿಷೇಧದ ಬಳಿಕ ಎಲ್ಲೆಡೆಯೂ ನಗದು ರಹಿತ ವ್ಯವಹಾರದ್ದೇ ಮಾತು! ಇದನ್ನು ಜಾರ್ಖಂಡ್ನ ಕಲ್ಲು ಕುಟಿಗ ವೃತ್ತಿಯ ಯುವಕರೊಬ್ಬರು ಭಾರೀ ಸೀರಿಯಸ್ಸಾಗಿ ತೆಗೆದುಕೊಂಡಿದ್ದೂ ಅಲ್ಲದೇ ಮದುವೆಯೂ ಆಗಿದ್ದಾರೆ! ನಗದು ರಹಿತ ವ್ಯವಹಾರಕ್ಕೆ ಇನ್ನೂ ಜನ ಆಲೋಚಿಸುವ ಹೊತ್ತಲ್ಲಿ ಇನ್ನೂ ಎಸ್ಸೆಸ್ಸೆಲ್ಸಿ ಪಾಸಾಗದ ಯುವಕ ಸುಭಾಶ್ ನಾಯಕ್ ಅವರ ಈ ನಡೆ ಸರ್ವತ್ರ ಪ್ರಶಂಸೆಗೆ ಪಾತ್ರವಾಗಿದೆ.
ಕೂಲಿಕಾರ್ಮಿಕರೊಬ್ಬರ ಪುತ್ರಿ ಸುನಿತಾರನ್ನು ಸುಭಾಷ್ ವರಿಸಿದ್ದಾರೆ. ಕನ್ಯಾಸಮರ್ಪಣೆ ಕಾರ್ಯಕ್ರಮವೂ ನಗದು ರಹಿತವಾಗಿಯೇ ನಡೆದಿದೆ. ಇದಕ್ಕಾಗಿ ಪೇಟಿಎಂ, ಪಿಒಎಸ್ ಮಷೀನ್ಗಳನ್ನು ಬಳಸಲಾಗಿದೆ. ಅತಿಥಿಗಳೂ ನೂತನ ವಧೂವರರಿಗೆ ಚೆಕ್ಮೂಲಕವೇ ಉಡುಗೊರೆ ನೀಡಿದ್ದಾರೆ.
ಸುಭಾಷ್ ಅವರಿಗೆ ಸಿಎಂ ಕಚೇರಿಯ ಅಧಿಕಾರಿ ಸಂಜಯ್ ಕುಮಾರ್ ಎಂಬುವವರು ನಗದು ರಹಿತ ವಿವಾಹಕ್ಕೆ ಪ್ರೇರಣೆಯಾಗಿದ್ದಾರೆ. ಚೆನ್ನೈನಲ್ಲಿ ಭಿಕ್ಷುಕ ಪಿಒಎಸ್ ಮಷೀನ್ ಇಟ್ಟು ಭಿಕ್ಷೆ ಬೇಡುವುದು ಸುದ್ದಿಯಾಗಿದ್ದರಿಂದ ನಗದು ರಹಿತ ವಿವಾಹಕ್ಕೆ ಸುಭಾಷ್ ಮುಂದಾಗಿದ್ದರಂತೆ!